Advertisement
MIRROR FOCUS

ಜಲಸಂರಕ್ಷಣೆಗೆ ಒಂದು ಮಾದರಿ | ಎರಡು ಗಂಟೆ ಕೆಲಸದಲ್ಲಿ ಪುಟಾಣಿ ಕಟ್ಟ | ಬಾವಿ ನೀರು ಏರಿಕೆ |

Share

ಬೇಸಗೆ ಆರಂಭವಾಯಿತು. ಕೆರೆ, ಬಾವಿಯಲ್ಲಿ  ನೀರಿನ ಮಟ್ಟ ಕಡಿಮೆಯಾಗುವ ಹೊತ್ತು ಆರಂಭವಾಯಿತು. ಈಗ ಜಲಸಂರಕ್ಷಣೆಯ ಪಾಠಗಳು ಅಗತ್ಯವಾಗಿದೆ. ಇದಕ್ಕೆ ಮಾದರಿಯಾಗಿ ಇಲ್ಲೊಂದು ಪುಟ್ಟ ಕಟ್ಟ ರಚನೆ ಮಾಡಿ ಓಡುವ ನೀರನ್ನು ನಿಲ್ಲುವಂತೆ ಮಾಡಿ ಬಾವಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಮಾದರಿಯೊಂದು ಇದೆ.

Advertisement
Advertisement
Advertisement
Advertisement

ಸುಳ್ಯ ತಾಲೂಕಿನ ಅಮರಮುಡ್ನೂರು  ಗ್ರಾಮದ ಕಟ್ಟದಮಜಲಿನ ಶಿವರಾಮ ಪೈಲೂರು ಅವರ  ಮನೆಯ ಬಾವಿಯಲ್ಲಿ ನೀರಿಗೆ ತತ್ವಾರ ಆಗುತ್ತದೆ. ಬಾವಿಯ  ತಳ ಭಾಗ 30 ಅಡಿ ದೂರದಲ್ಲಿ ಹರಿಯುವ ಸಣ್ಣ ತೋಡಿನ ಮಟ್ಟಕ್ಕೆ ಸಮಾನವಾಗಿದೆ. ಈ ಹಿನ್ನೆಲೆಯಲ್ಲಿ ತೋಡಿನ ಹರಿವಿಗೆ ತಡೆಯೊಡ್ಡುವ ಯೋಚನೆ ಮಾಡಿದರು. ಆ ಕಟ್ಟದಲ್ಲಿ ನೀರು ಏರುವಂತೆ ಬಾವಿಯಲ್ಲೂ ನೀರಿನ ಮಟ್ಟ ಏರಿಕೆಯಾಯಿತು. ಇದರಿಂದ ಒಂದಷ್ಟು ನೀರು ರಿಸರ್ವ್‌ ಆಗಿ ಉಳಿಯಿತು. ನೀರು ಬತ್ತು ಅವಧಿ ಮುಂದಕ್ಕೆ ಹೋಯಿತು.

Advertisement

ಈ ಪುಟ್ಟ ಕಟ್ಟ ರಚನೆಗೆ ಸರಳ ವಿಧಾನ. ಮೂವರು ಕೃಷಿ ಸಹಾಯಕರೊಂದಿಗೆ ಎರಡು ಗಂಟೆ ಕೆಲಸ. ಸುಮಾರು 20 ಗೊಬ್ಬರದ ಚೀಲಗಳಿಗೆ ತೋಡಿನ ಮಣ್ಣುಮಿಶ್ರಿತ ಮರಳು ತುಂಬಿ ಪೇರಿಸಿದ್ದರು. ಎದುರಿಗೆ ತುಂಡು ಕಲ್ಲುಗಳನ್ನು ಇಟ್ಟು ಮಣ್ಣು ತುಂಬಿ ಭದ್ರಪಡಿಸಿ , ಇನ್ನೊಂದು ಬದಿಗೆ ಹಳೆಯ ತೆಂಗಿನ ಮರದ ಬೊಡ್ಡೆಗಳನ್ನು ಜೋಡಿಸಿ ಪುಟಾಣಿ ಕಟ್ಟ ರೂಪುಗೊಂಡಿತು. ಈ ಕಟ್ಟದ ಮುನ್ನ, ಇನ್ನೊಂದು ಸಣ್ಣ ತಡೆ. ಅಲ್ಲಿಗೂ ತೆಂಗಿನ ಬೊಡ್ಡೆಗಳೇ ಆಧಾರ. ಈ ಪ್ರಯೋಗ ಬಾವಿಯಲ್ಲಿ ಜಲಮಟ್ಟ ಹೆಚ್ಚಿಸಲು ಸಹಕಾರಿಯಾಗಬಹುದೆಂಬ ಆಶಾಭಾವ. ಪಕ್ಕದಲ್ಲಿರುವ ತೋಟಕ್ಕೂ ಪ್ರಯೋಜನ ಆದೀತು ಎಂದು ಹೇಳುತ್ತಾರೆ ಶಿವರಾಂ ಪೈಲೂರು.

Advertisement

ಈ ಮಾದರಿಗೆ ಪ್ರೇರಣೆಯಾದ್ದು ಸದಾ ನೀರೆಚ್ಚರ ಮೂಡಿಸುವುದರ ಜತೆಗೆ ಪ್ರೇರಣೆ ನೀಡುತ್ತಿರುವ ನೀರ ನೆಮ್ಮದಿಯತ್ತ ಪಡ್ರೆ ಎನ್ನುವ  ವಾಟ್ಸಪ್ ಗುಂಪು ಎಂದು ಹೇಳಲು ಮರೆಯುವುದಿಲ್ಲ ಶಿವರಾಮ ಪೈಲೂರು ಅವರು. ಇದೇ ರೀತಿ ಇನ್ನೂ ಹಲವು ಕಡೆಗಳಲ್ಲಿ ಪುಟಾಣಿ ಕಟ್ಟಗಳ ರಚನೆ ಮಾಡುವ ಮೂಲಕ ಜಲಸಂರಕ್ಷಣೆ, ಹರಿಯುವ ನೀರಿನ ಬಳಕೆ,  ಒರತೆ, ಕೊಳವೆಬಾವಿ ನೀರನ್ನು ರಿಸರ್ವ್‌ ಆಗಿಡುವ ಪ್ರಯತ್ನ ಮಾಡಬಹುದು.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ

ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…

2 hours ago

ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…

3 hours ago

ಕೃಷಿ ವಿಶ್ವವಿದ್ಯಾಲಯಗಳು ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು

ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…

3 hours ago

ಏರುತ್ತಿರುವ ತಾಪಮಾನ | 2030 ರ ವೇಳೆಗೆ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ | ಕೃಷಿ ಸಾಲ ಮರುಪಾವತಿ ಮೇಲೆ ಹೊಡೆತ..? |

ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…

11 hours ago

ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಅಭಿಯಾನ | ರಾಜ್ಯಸಭಾ ಸಂಸದೆ ಸುಧಾಮೂರ್ತಿ ಸೇರಿದಂತೆ 10 ಮಂದಿ ನಾಮನಿರ್ದೇಶನ

ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…

11 hours ago

ಸಹಕಾರಿ ಪಾಠ | ಆರ್ಥಿಕ ಶಿಸ್ತು ಹಾಗೂ ಸಣ್ಣ ಸಣ್ಣ ಮೊತ್ತವೂ ಬ್ಯಾಂಕಿಗೆ ಏಕೆ ಬರಬೇಕು…?

ತೀರಾ ಸಣ್ಣ ಮಟ್ಟಿನ‌ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?

12 hours ago