Advertisement
MIRROR FOCUS

ಜಲಸಂರಕ್ಷಣೆಗೆ ಒಂದು ಮಾದರಿ | ಎರಡು ಗಂಟೆ ಕೆಲಸದಲ್ಲಿ ಪುಟಾಣಿ ಕಟ್ಟ | ಬಾವಿ ನೀರು ಏರಿಕೆ |

Share

ಬೇಸಗೆ ಆರಂಭವಾಯಿತು. ಕೆರೆ, ಬಾವಿಯಲ್ಲಿ  ನೀರಿನ ಮಟ್ಟ ಕಡಿಮೆಯಾಗುವ ಹೊತ್ತು ಆರಂಭವಾಯಿತು. ಈಗ ಜಲಸಂರಕ್ಷಣೆಯ ಪಾಠಗಳು ಅಗತ್ಯವಾಗಿದೆ. ಇದಕ್ಕೆ ಮಾದರಿಯಾಗಿ ಇಲ್ಲೊಂದು ಪುಟ್ಟ ಕಟ್ಟ ರಚನೆ ಮಾಡಿ ಓಡುವ ನೀರನ್ನು ನಿಲ್ಲುವಂತೆ ಮಾಡಿ ಬಾವಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಮಾದರಿಯೊಂದು ಇದೆ.

ಸುಳ್ಯ ತಾಲೂಕಿನ ಅಮರಮುಡ್ನೂರು  ಗ್ರಾಮದ ಕಟ್ಟದಮಜಲಿನ ಶಿವರಾಮ ಪೈಲೂರು ಅವರ  ಮನೆಯ ಬಾವಿಯಲ್ಲಿ ನೀರಿಗೆ ತತ್ವಾರ ಆಗುತ್ತದೆ. ಬಾವಿಯ  ತಳ ಭಾಗ 30 ಅಡಿ ದೂರದಲ್ಲಿ ಹರಿಯುವ ಸಣ್ಣ ತೋಡಿನ ಮಟ್ಟಕ್ಕೆ ಸಮಾನವಾಗಿದೆ. ಈ ಹಿನ್ನೆಲೆಯಲ್ಲಿ ತೋಡಿನ ಹರಿವಿಗೆ ತಡೆಯೊಡ್ಡುವ ಯೋಚನೆ ಮಾಡಿದರು. ಆ ಕಟ್ಟದಲ್ಲಿ ನೀರು ಏರುವಂತೆ ಬಾವಿಯಲ್ಲೂ ನೀರಿನ ಮಟ್ಟ ಏರಿಕೆಯಾಯಿತು. ಇದರಿಂದ ಒಂದಷ್ಟು ನೀರು ರಿಸರ್ವ್‌ ಆಗಿ ಉಳಿಯಿತು. ನೀರು ಬತ್ತು ಅವಧಿ ಮುಂದಕ್ಕೆ ಹೋಯಿತು.

ಈ ಪುಟ್ಟ ಕಟ್ಟ ರಚನೆಗೆ ಸರಳ ವಿಧಾನ. ಮೂವರು ಕೃಷಿ ಸಹಾಯಕರೊಂದಿಗೆ ಎರಡು ಗಂಟೆ ಕೆಲಸ. ಸುಮಾರು 20 ಗೊಬ್ಬರದ ಚೀಲಗಳಿಗೆ ತೋಡಿನ ಮಣ್ಣುಮಿಶ್ರಿತ ಮರಳು ತುಂಬಿ ಪೇರಿಸಿದ್ದರು. ಎದುರಿಗೆ ತುಂಡು ಕಲ್ಲುಗಳನ್ನು ಇಟ್ಟು ಮಣ್ಣು ತುಂಬಿ ಭದ್ರಪಡಿಸಿ , ಇನ್ನೊಂದು ಬದಿಗೆ ಹಳೆಯ ತೆಂಗಿನ ಮರದ ಬೊಡ್ಡೆಗಳನ್ನು ಜೋಡಿಸಿ ಪುಟಾಣಿ ಕಟ್ಟ ರೂಪುಗೊಂಡಿತು. ಈ ಕಟ್ಟದ ಮುನ್ನ, ಇನ್ನೊಂದು ಸಣ್ಣ ತಡೆ. ಅಲ್ಲಿಗೂ ತೆಂಗಿನ ಬೊಡ್ಡೆಗಳೇ ಆಧಾರ. ಈ ಪ್ರಯೋಗ ಬಾವಿಯಲ್ಲಿ ಜಲಮಟ್ಟ ಹೆಚ್ಚಿಸಲು ಸಹಕಾರಿಯಾಗಬಹುದೆಂಬ ಆಶಾಭಾವ. ಪಕ್ಕದಲ್ಲಿರುವ ತೋಟಕ್ಕೂ ಪ್ರಯೋಜನ ಆದೀತು ಎಂದು ಹೇಳುತ್ತಾರೆ ಶಿವರಾಂ ಪೈಲೂರು.

Advertisement

ಈ ಮಾದರಿಗೆ ಪ್ರೇರಣೆಯಾದ್ದು ಸದಾ ನೀರೆಚ್ಚರ ಮೂಡಿಸುವುದರ ಜತೆಗೆ ಪ್ರೇರಣೆ ನೀಡುತ್ತಿರುವ ನೀರ ನೆಮ್ಮದಿಯತ್ತ ಪಡ್ರೆ ಎನ್ನುವ  ವಾಟ್ಸಪ್ ಗುಂಪು ಎಂದು ಹೇಳಲು ಮರೆಯುವುದಿಲ್ಲ ಶಿವರಾಮ ಪೈಲೂರು ಅವರು. ಇದೇ ರೀತಿ ಇನ್ನೂ ಹಲವು ಕಡೆಗಳಲ್ಲಿ ಪುಟಾಣಿ ಕಟ್ಟಗಳ ರಚನೆ ಮಾಡುವ ಮೂಲಕ ಜಲಸಂರಕ್ಷಣೆ, ಹರಿಯುವ ನೀರಿನ ಬಳಕೆ,  ಒರತೆ, ಕೊಳವೆಬಾವಿ ನೀರನ್ನು ರಿಸರ್ವ್‌ ಆಗಿಡುವ ಪ್ರಯತ್ನ ಮಾಡಬಹುದು.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

15 hours ago

ಕೂದಲಿಗೆ ಬಳಸುವ ಎಣ್ಣೆಯ ಪ್ರಯೋಜನ

ಚಳಿಗಾಲ ಎಂದರೆ ಒಂದು ರೀತಿಯಲ್ಲಿ ಕಿರಿಕಿರಿ. ವಯಸ್ಸಾದವರಂತೆ ಚರ್ಮ ಸುಕ್ಕು ಕಟ್ಟುವುದು, ಆರೋಗ್ಯದಲ್ಲಿ…

21 hours ago

ಚಳಿಗಾಲದಲ್ಲಿ ಹೃದಯದ ಕಾಳಜಿಯ ಬಗ್ಗೆ ನಿರ್ಲಕ್ಷ್ಯ ಬೇಡ- ಎಚ್ಚರಿಕೆ ಇರಲಿ

ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತದೆ. ಆದರಲ್ಲೂ ಹೃದಯದ ಸಮಸ್ಯೆಗಳ ಬಗ್ಗೆ ಕಾಳಜಿ…

21 hours ago

ಮಹಿಳೆಯರಿಗಾಗಿ ಉಚಿತ ಆರಿ ವರ್ಕ್ಸ್ ತರಬೇತಿ

ಮಹಿಳೆಯರು ಸಹ ಉದ್ಯೋಗವನ್ನು ಮಾಡಬೇಕೆಂದು ಸರ್ಕಾರವು ಅನೇಕ ರೀತಿಯ ಯೋಜನೆಯನ್ನು ಜಾರಿಗೊಳಿಸಿದ್ದು, ಟ್ರೈಲರಿಂಗ್…

21 hours ago

ಮೊಟ್ಟೆಯಲ್ಲಿ ಅಪಾಯಕಾರಿ ಕ್ಯಾನ್ಸರ್ ಅಂಶ ಪತ್ತೆ ಎಂಬ ಊಹಪೋಹಗಳಿಗೆ ಬ್ರೇಕ್

ಮೊಟ್ಟೆಗಳು ಉತ್ತಮ ಗುಣಮಟ್ಟದ ಪ್ರೋಟೀನ್ ಅಂಶ ವಾಗಿದ್ದು, ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ನೀಡುತ್ತಿದ್ದರು.…

21 hours ago

ಗೃಹಲಕ್ಷ್ಮಿ ಸಹಕಾರ ಬ್ಯಾಂಕ್ ಕಡಿಮೆ ಬಡ್ಡಿಯಲಿ ಸಾಲ ಪಡೆಯಿರಿ

ಹಣದ ಅವಶ್ಯಕತೆಯಿರುವ ಎಲ್ಲರೂ ಬ್ಯಾಂಕ್ ಗಳಲ್ಲಿ ಸಾಲಕ್ಕೆ ಮೊರೆ ಹೋಗಿ ಅಧಿಕ ಬಡ್ಡಿಯನ್ನು…

21 hours ago