MIRROR FOCUS

ಬರಿದಾಗುತ್ತಿದೆ ನೀರು….! | ಹಲವು ಕಡೆ ನೀರಿಗೆ ತತ್ವಾರ | ಬರಿದಾದ ಸುಳ್ಯದ ಪಯಸ್ವಿನಿ ಒಡಲು | ಕೃಷಿಗೆ ನೀರಿಲ್ಲ…! |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬೇಸಗೆಯ ಕಾವು ಹೆಚ್ಚಾಗುತ್ತಿದೆ. ಮಳೆ ಸನಿಹಕ್ಕೆ ಬಂದರೂ ದೂರವಾಗುತ್ತಿದೆ. ಕ್ಷಣ ಕ್ಷಣಕ್ಕೂ ಹವಾಮಾನ ಬದಲಾಗುತ್ತಿದೆ ಎಂದು ಹವಾಮಾನ ಅಧ್ಯಯನಕಾರರು ಹೇಳುತ್ತಾರೆ. ಈ ನಡುವೆಯೇ ನೀರು ಬರಿದಾಗುತ್ತಿದೆ. ತೋಟಕ್ಕೆ ಬಿಡಿ, ಕುಡಿಯಲೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವು ಕಡೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸಾಗಾಟವಾಗುತ್ತಿದೆ. ತೋಟಕ್ಕೆ ನೀರಿಲ್ಲದೆ ಕೃಷಿ ಒಣಗಲು ಆರಂಭವಾಗಿದೆ. ಸುಳ್ಯದ ಪಯಸ್ವಿನಿ ನದಿಯ ನೀರು ಬರಿದಾಗಿದೆ, ಕೃಷಿ ಪಂಪ್‌ ಚಾಲೂ ಮಾಡದಂತೆ ಹೇಳಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ವಿಪರೀತ ಬಿಸಿಲಿನ ವಾತಾವರಣ ಕಂಡುಬಂದಿದೆ.ಪ್ರತಿದಿನವೂ ವಾತಾವರಣದ ಉಷ್ಣತೆ 35 ಡಿಗ್ರಿಗಿಂತ ಅಧಿಕವಾಗಿದೆ. ಯಾವತ್ತೂ ಈ ಉಷ್ಣತೆ ತಲಪಿದಾಗ ಪ್ರತೀ ವರ್ಷ ಮಳೆಯಾಗುತ್ತಿತ್ತು. ಸುಳ್ಯ ಹಾಗೂ ಮಲೆನಾಡು ತಪ್ಪಲು ಭಾಗಗಳಲ್ಲಿ  ಈ ಹೊತ್ತಿಗೆ ಕನಿಷ್ಟ ನಾಲ್ಕು-ಐದು ಮಳೆ ಆಗುತ್ತಿತ್ತು. ಈ ಬಾರಿ ಮಳೆಯಾಗದೆ ಹೊಳೆ, ಕೆರೆಗಳು ಮಾತ್ರವಲ್ಲ ಕೊಳವೆಬಾವಿಗಳು ಬತ್ತುತ್ತಿವೆ. ಅಂತರ್ಜಲ ಮಟ್ಟ ತಗ್ಗಿದೆ. ಇದೀಗ ಕುಡಿಯುವ ನೀರಿಗೂ ಹಲವು ಕಡೆ ತತ್ತ್ವಾರ ಆರಂಭವಾಗಿದೆ.ಇದೀಗ ಸುಳ್ಯದಲ್ಲಿ ಪಯಸ್ವಿನಿ ನದಿ ಬತ್ತಲು ಆರಂಭವಾಗಿದೆ. ಇದೀಗ ನಗರವಾಸಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ . ಸುಳ್ಯ ನಗರಕ್ಕೆ ಕುಡಿಯವ ನೀರಿನ ಅಭಾವ ಕಾಡದಂತೆ ಸುಳ್ಯ ಕಲ್ಲು ಮುಟ್ಲು ಪಂಪ್ ಹೌಸ್ ನಿಂದ ಮೇಲೆ ನದಿ ಅಕ್ಕ ಪಕ್ಕದ ತೋಟಗಳ ಕೃಷಿ ಪಂಪ್ ಗಳ ವಿದ್ಯುತ್ ನಿಲುಗಡೆಗೆ ಸೂಚನೆ ನೀಡಲಾಗಿದೆ.

ಇತ್ತ ಕಡೆ ಕೃಷಿ ಭೂಮುಗಳೂ ಒಣಗಲು ಆರಂಭವಾಗಿದೆ. ನೀರಿಲ್ಲದೆ 15 ದಿನಗಳಾದ ತೋಟಗಳು ಒಣಗಲು ಆರಂಭವಾಗಿದೆ. ಅಡಿಕೆ ಬೆಳೆಗಾರರು ನಳ್ಳಿ ಬೀಳುವುದನ್ನು ನೋಡಬೇಕಾದ ಸ್ಥಿತಿ ಬಂದಿದೆ. ಕೆಲವು ಕಡೆ ಕೊಳವೆಬಾವಿಯಲ್ಲೂ ನೀರು ಕಡಿಮೆಯಾಗಿದೆ. ಎರಡು ಗಂಟೆ ಕೂಡಾ ತೋಟಕ್ಕೆ ನೀರುಣಿಸಲು ಸಂಕಷ್ಟಪಡುತ್ತಿದ್ದಾರೆ.ಕೊಳವೆಬಾವಿಯಲ್ಲಿ ನೀರಿನ ಮಟ್ಟ ಇಳಿಕೆಯಾದ ಕಾರಣ ಗುಡ್ಡ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಆಗುತ್ತಿಲ್ಲವಾದರೆ, ಕೆಲವು ಕಡೆ ಪಂಪ್‌ ಮತ್ತಷ್ಟು ಕೆಳಭಾಗಕ್ಕೆ ಇಳಿಕೆ ಮಾಡಲಾಗಿದೆ. ಈಗ  ಮಳೆ ಯಾವಾಗ ಆದೀತು ಎಂದು ನೋಡುತ್ತಿದ್ದಾರೆ. ಈ ಬಾರಿ ನೀರಿಲ್ಲದೆ ತೋಟವೂ ಒಣಗುತ್ತಿದೆ, ಕುಡಿಯಲೂ ನೀರಿಲ್ಲದೆ ಹಾಹಾಕಾರ ಪಡಬೇಕಾದ ಸ್ಥಿತಿ ಬಾರದಿದ್ದರೆ ಸಾಕು ಎಂಬ ಆತಂಕ ಎದುರಾಗುತ್ತಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅರಣ್ಯ ಉಳಿದರೆ ಮಾತ್ರ ಭೂಮಿ ಉಳಿಯಲು ಸಾಧ್ಯ – ವನ್ಯಜೀವಿ ಸಪ್ತಾಹ ಸಮಾರೋಪದಲ್ಲಿ ಮುಖ್ಯಮಂತ್ರಿ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

3 hours ago

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸದಾಗಿ 900 ಬಸ್ ಗಳು ಸೇರ್ಪಡೆ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸದಾಗಿ 900 ಬಸ್ ಗಳು ಸೇರ್ಪಡೆಗೊಳ್ಳಲಿವೆ ಎಂದು…

3 hours ago

ಗದಗದಲ್ಲಿ ಶೇಂಗಾ ಹುಟ್ಟುವಳಿ  ಖರೀದಿಸಲು ಪ್ರತಿ ಕ್ವಿಂಟಾಲ್ ಗೆ 7263 ರೂಪಾಯಿ ದರ ನಿಗದಿ

2025-26 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಶೇಂಗಾ…

3 hours ago

ಸರ್ಕಾರದಿಂದ 200 ಕಾಲು ಸಂಕ ನಿರ್ಮಾಣದ ಗುರಿ

ರಾಜ್ಯದಲ್ಲಿ  ಈಗಾಗಲೇ ಮಲೆನಾಡು ಪ್ರದೇಶದಲ್ಲಿ ಕಳೆದ ವರ್ಷ 100 ಕಾಲುಸಂಕ ನಿರ್ಮಾಣ ಮಾಡಲಾಗಿದೆ.…

3 hours ago

ಉತ್ತರ ಕರ್ನಾಟಕದಲ್ಲಿ ಸೀಗೆ ಹುಣ್ಣಿಮೆ ಆಚರಣೆ | ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಉತ್ತಮ ಫಸಲಿಗೆ ಪ್ರಾರ್ಥನೆ

ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಫಸಲು ಬಂದಾಗ ಭೂತಾಯಿಗೆ ಪೂಜೆ ಸಲ್ಲಿಸಿ ಫಸಲನ್ನು…

3 hours ago

ಕರ್ನಾಟಕದಲ್ಲಿ ಮುಗಿಯದ ಸಮೀಕ್ಷೆ | ಗಡುವು ದೀಪಾವಳಿಯವರೆಗೆ ವಿಸ್ತರಣೆ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ಜನರ ಸಾಮಾಜಿಕ ಮತ್ತು…

3 hours ago