ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ವಿವಿಧ ಕಾರಣಗಳಿಂದ ತಡವಾಗಿ ಹವಾಮಾನ ಆಧಾರಿತ ಬೆಳೆ ವಿಮೆಗೆ ಪ್ರೀಮಿಯಂ ಪಾವತಿಗೆ ನೋಟಿಫೀಕೇಶನ್ ಆಗಿತ್ತು. ಕೇವಲ ಒಂದು ವಾರದ ಅವಕಾಶ ಇದೆ. ಪ್ರೀಮಿಯಂ ಪಾವತಿಗೆ ಜು.31 ಕೊನೆಯ ದಿನವಾಗಿದೆ. ಈ ಬಾರಿ FID ( FRUIT ID) ಕಡ್ಡಾಯವಾಗಿದೆ. ಹಲವು ಕೃಷಿಕರಿಗೆ ಈ ಐಡಿ ಆಗದೇ ಇರುವುದು ಈಗ ಸಮಸ್ಯೆಯಾಗಿದೆ.
ಈ ಬಾರಿ ಬೆಳೆ ವಿಮೆ ಪಾವತಿಗೆ FRUIT ID ಕಡ್ಡಾಯವಾಗಿದೆ.ಆದರೆ ಕೆಲವು ಕೃಷಿಕರಿಗೆ ಈ ಐಡಿ ಇಲ್ಲದ ಕಾರಣದಿಂದ ಅನೇಕ ಕೃಷಿಕರಿಗೆ ಬೆಳೆ ವಿಮೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದರೆ ವಿಮೆ ಕಂತು ಕಟ್ಟಲು ಜುಲೈ 31 ಕೊನೇ ದಿನವಾಗಿದೆ. ಹೀಗಾಗಿ ಈಗ ಗೊಂದಲ ಉಂಟಾಗಿದೆ.
ಈ ಬಾರಿ ಪಹಣಿಯಲ್ಲಿ ಹೆಸರು ಇರುವ ಎಲ್ಲರದೂ ದಾಖಲೆ ಪತ್ರಗಳು ಬೇಕಿದೆ. ಅದರ ಜೊತೆಗೇ FRUIT ID ಕೂಡಾ ಕಡ್ಡಾಯವಾಗಿದೆ. ಗ್ರಾಮೀಣ ಭಾಗದಲ್ಲಿ, ಕೃಷಿಕರಲ್ಲಿ ಪಹಣಿಯಲ್ಲಿ ಹೆಸರು ಇರುವ ಎಲ್ಲರದೂ ಈ ಐಡಿ (ಫಾಮರ್ ಐಡಿ)ಯನ್ನು ಮಾಡಿಸಿರಲಿಲ್ಲ. ಈಗ ಬೆಳೆ ವಿಮೆಗಾಗಿ ಈ ಐಡಿ ರಚನೆಗೆ ಇಲಾಖೆಗೆ ಹೋದರೂ ತಕ್ಷಣವೇ ಈ ಐಡಿ ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ಜು.31 ರೊಳಗೆ ಕಷ್ಟವಿದೆ.
ಇದಕ್ಕಾಗಿ ಬೆಳೆವಿಮೆ ಪಾವತಿಯ ದಿನವನ್ನು ಮುಂದೂಡುವ ಅಗತ್ಯ ಇದೆ. ಅದರ ಜೊತೆಗೆ ಸರಳೀಕರಣದ ಜೊತೆಗೆ ಬೆಳೆವಿಮೆ ಪಾವತಿಗೆ ಅವಕಾಶ ನೀಡಬೇಕಾದ ಅಗತ್ಯ ಇದೆ.
ರಾಜ್ಯದಲ್ಲಿ ಬಿಸಿಲಿನ ನಡುವೆ ಏಪ್ರಿಲ್ 25-26ರಿಂದ ಮಳೆ ಆರಂಭವಾಗುವ ಸಾಧ್ಯತೆ ಇದೆ. ಕರಾವಳಿ,…
ಎಸ್.ಎಸ್.ಎಲ್.ಸಿ ಪಾಸಾದವರಿಗೆ ಮಂಗಳೂರಿನ ಜಿಟಿಟಿಸಿಯಲ್ಲಿ 100% ಉದ್ಯೋಗಾಧಾರಿತ ಡಿಪ್ಲೊಮಾ ಕೋರ್ಸ್ಗಳಿಗೆ ಪ್ರವೇಶ ಆರಂಭವಾಗಿದೆ.…
ಸುಂದರ್ಬನ್ಸ್ನಲ್ಲಿ ಕರಾವಳಿ ರಕ್ಷಣಾ ಪಡೆ 13,320 ಕೆಜಿ ಅಕ್ರಮ ಅಡಿಕೆ ವಶಪಡಿಸಿಕೊಂಡಿದೆ. ‘ಶಿವ…
ತಾಪಮಾನ ಏರಿಕೆಯಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ 30 ಹಾಸಿಗೆಗಳ ಸನ್ ಸ್ಟ್ರೋಕ್ ವಾರ್ಡ್…
ಭೂಮಿ ಉಳಿಸಿ ಸಮ್ಮೇಳನದಲ್ಲಿ ನಿತಿನ್ ಗಡ್ಕರಿ, ರೈತರು ಇಂಧನ ಉತ್ಪಾದನೆಗೆ ಕೈಜೋಡಿಸಿದರೆ ಮಾಲಿನ್ಯ…
ರೈತರಿಗೆ ಸರಳ ಹಣಕಾಸು ವ್ಯವಸ್ಥೆ ಅಗತ್ಯವಿದ್ದು, ಸಮಗ್ರ ಕೃಷಿ ಮಾದರಿಯಿಂದ ಆದಾಯ ಹೆಚ್ಚಿಸಬಹುದು…