Advertisement
ಸುದ್ದಿಗಳು

#PMFBY | ಅಡಿಕೆ ಬೆಳೆಗೆ ಹವಾಮಾನ ಆಧಾರಿತ ಬೆಳೆ ವಿಮೆ | ಜು.31 ಪ್ರೀಮಿಯಂ ತುಂಬಲು ಕೊನೆಯ ದಿನ | ಈಗ FRUIT ID ಗೊಂದಲ…! | ವಿಮೆ ಪಾವತಿ ಕೊನೆಯ ದಿನ ಮುಂದೂಡಬಹುದೇ ?

Share

ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ವಿವಿಧ ಕಾರಣಗಳಿಂದ ತಡವಾಗಿ ಹವಾಮಾನ ಆಧಾರಿತ ಬೆಳೆ ವಿಮೆಗೆ ಪ್ರೀಮಿಯಂ ಪಾವತಿಗೆ ನೋಟಿಫೀಕೇಶನ್‌ ಆಗಿತ್ತು. ಕೇವಲ ಒಂದು ವಾರದ ಅವಕಾಶ ಇದೆ. ಪ್ರೀಮಿಯಂ ಪಾವತಿಗೆ ಜು.31 ಕೊನೆಯ ದಿನವಾಗಿದೆ. ಈ ಬಾರಿ FID ( FRUIT ID) ಕಡ್ಡಾಯವಾಗಿದೆ. ಹಲವು ಕೃಷಿಕರಿಗೆ ಈ ಐಡಿ ಆಗದೇ ಇರುವುದು  ಈಗ ಸಮಸ್ಯೆಯಾಗಿದೆ.

ಈ ಬಾರಿ ಬೆಳೆ ವಿಮೆ ಪಾವತಿಗೆ FRUIT ID ಕಡ್ಡಾಯವಾಗಿದೆ.ಆದರೆ ಕೆಲವು ಕೃಷಿಕರಿಗೆ ಈ ಐಡಿ ಇಲ್ಲದ ಕಾರಣದಿಂದ ಅನೇಕ ಕೃಷಿಕರಿಗೆ ಬೆಳೆ ವಿಮೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದರೆ ವಿಮೆ ಕಂತು ಕಟ್ಟಲು ಜುಲೈ 31 ಕೊನೇ ದಿನವಾಗಿದೆ. ಹೀಗಾಗಿ ಈಗ ಗೊಂದಲ ಉಂಟಾಗಿದೆ.

ಈ ಬಾರಿ ಪಹಣಿಯಲ್ಲಿ  ಹೆಸರು ಇರುವ ಎಲ್ಲರದೂ ದಾಖಲೆ ಪತ್ರಗಳು ಬೇಕಿದೆ. ಅದರ ಜೊತೆಗೇ FRUIT ID ಕೂಡಾ ಕಡ್ಡಾಯವಾಗಿದೆ. ಗ್ರಾಮೀಣ ಭಾಗದಲ್ಲಿ, ಕೃಷಿಕರಲ್ಲಿ ಪಹಣಿಯಲ್ಲಿ ಹೆಸರು ಇರುವ ಎಲ್ಲರದೂ ಈ ಐಡಿ (ಫಾಮರ್‌ ಐಡಿ)ಯನ್ನು ಮಾಡಿಸಿರಲಿಲ್ಲ. ಈಗ ಬೆಳೆ ವಿಮೆಗಾಗಿ ಈ ಐಡಿ ರಚನೆಗೆ ಇಲಾಖೆಗೆ ಹೋದರೂ ತಕ್ಷಣವೇ ಈ ಐಡಿ ಸಾಧ್ಯವಾಗುತ್ತಿಲ್ಲ. ಇದೆಲ್ಲವೂ ಜು.31 ರೊಳಗೆ ಕಷ್ಟವಿದೆ.

ಇದಕ್ಕಾಗಿ ಬೆಳೆವಿಮೆ ಪಾವತಿಯ ದಿನವನ್ನು ಮುಂದೂಡುವ ಅಗತ್ಯ ಇದೆ. ಅದರ ಜೊತೆಗೆ ಸರಳೀಕರಣದ ಜೊತೆಗೆ ಬೆಳೆವಿಮೆ ಪಾವತಿಗೆ ಅವಕಾಶ ನೀಡಬೇಕಾದ ಅಗತ್ಯ ಇದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತೋಟಗಾರಿಕಾ ಬೆಳೆಗಾರರ ಪರ ಲೋಕಸಭೆಯಲ್ಲಿ ಧ್ವನಿ – ಹವಾಮಾನ ಆಧಾರಿತ ಬೆಳೆ ವಿಮೆ ಮರುಪರಿಷ್ಕರಣೆಗೆ ಕ್ಯಾ. ಚೌಟ ಒತ್ತಾಯ

ಅಡಿಕೆ, ತೆಂಗು, ಕೋಕೋ ಮತ್ತು ಸಾಂಬಾರು ಬೆಳೆಗಳಿಗೆ ಸ್ಥಳೀಯ ಹವಾಮಾನದಿಂದ ಉಂಟಾಗುವ ನೈಜ…

4 hours ago

ಅಡಿಕೆ ಅಕ್ರಮ ಆಮದು ಕಡಿವಾಣ – ರೋಸ್ಟೆಡ್ ಅಡಿಕೆಗೆ ₹351 ಕನಿಷ್ಠ ದರ – ಕಸ್ಟಮ್ಸ್‌ ನಿಗಾ ಎಂದ ಕೇಂದ್ರ

ರೋಸ್ಟೆಡ್ ಅಡಿಕೆಯ ಆಮದು ನೀತಿಯನ್ನು 2025ರ ಏಪ್ರಿಲ್‌ನಲ್ಲಿ ಬದಲಾಯಿಸಲಾಗಿದ್ದು, ಕೆ.ಜಿಗೆ ₹351 ಅಥವಾ…

12 hours ago

ತೆಂಗು ಬೆಳೆಗೆ ವಿಮೆ : ಕೇಂದ್ರದ ಮಹತ್ವದ ಉತ್ತರ

ತೆಂಗು ಬೆಳೆಯನ್ನು PMFBY ಅಥವಾ RWBCIS ಅಡಿಯಲ್ಲಿ ವಿಮಾ ವ್ಯಾಪ್ತಿಗೆ ತರುವ ಅಧಿಕಾರ…

13 hours ago

ಹವಾಮಾನ ವರದಿ | 11-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ದಿನಗಳಲ್ಲಿ ಏನು ಬದಲಾವಣೆ ?

ಕರಾವಳಿ ಜಿಲ್ಲೆಗಳಲ್ಲಿ ಮಳೆಯ ನಡುವೆ ಹೆಚ್ಚಿನ ಬಿಡುವಿನ ಅವಧಿಯೊಂದಿಗೆ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದ್ದು,…

14 hours ago

ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ

ಬಿ.ಎಸ್‌ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…

1 day ago

ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…

1 day ago