ವೆದರ್‌ ಮಿರರ್‌ | ಹೆಚ್ಚುತ್ತಿರುವ ಹವಾಮಾನ ವೈಪರೀತ್ಯ ಸಮಸ್ಯೆ | ಏರುತ್ತಿರುವ ಉಷ್ಣತೆ | ಇಳಿಯುತ್ತಿರುವ ತೇವಾಂಶ |

March 4, 2022
9:33 PM

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಬಹಳವಾಗಿ ಕಾಡುತ್ತಿರುವ ವಿಷಯ. ಏಕೆ ಹೀಗೆ ಎಂದು ಅಧ್ಯಯನಗಳು ನಡೆದರೆ ಭೂಮಿಯ ಉಷ್ಣತೆಯಲ್ಲಿ  ಏರಿಕೆ ಮೊದಲಾಗಿ ಕಂಡುಬರುತ್ತಿದೆ. ಈಚೆಗೆ ನಡೆದ ಅಂತರಾಷ್ಟ್ರೀಯ ಹವಾಮಾನ ಸಮ್ಮೇಳನದಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು. ಮುಂದಿನ ದಿನಗಳಲ್ಲಿ  ಇಡೀ ಪ್ರಪಂಚದಲ್ಲಿ ಈಗಿನ ಉಷ್ಣತೆಗಿಂತ ಎರಡು ಡಿಗ್ರಿ ಕಡಿಮೆ ಮಾಡಲು ಶಿಫಾರಸು ಮಾಡಲಾಗಿತ್ತು. ಇದಕ್ಕಾಗಿ ಅರಣ್ಯ ಸಂರಕ್ಷಣೆ, ವಾಯು ಮಾಲಿನ್ಯ ಕಡಿಮೆ ಮಾಡುವುದು  ಸೇರಿದಂತೆ ಸೋಲಾರ್‌ ಬಳಕೆಗೆ ಆದ್ಯತೆ ನೀಡಲೂ  ಶಿಫಾರಸು ಮಾಡಲಾಗಿತ್ತು.

Advertisement
Advertisement
Advertisement

ಈಗಾಗಲೇ ಭಾರತಕ್ಕೆ ಈ ವರ್ಷದ ಪ್ರಥಮ ವಾಯುಭಾರ ಕುಸಿತವು ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದು ಇನ್ನೆರಡು ದಿನಗಳಲ್ಲಿ ತಮಿಳುನಾಡು ಕರಾವಳಿಗೆ ತಲಪುವ ನಿರೀಕ್ಷೆ ಇದೆ. ಈಗಿನ ಮುನ್ಸೂಚೆನೆಯಂತೆ ಮಾರ್ಚ್ 7 ರಂದು ದಕ್ಷಿಣ ಕರ್ನಾಟಕದ ಒಳನಾಡಿನ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಇದರಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ತೇವಾಂಶ ಏರಿಕೆಯಾಗಿ ಮಾರ್ಚ್ 8 ರಿಂದ ಗುಡುಗು ಸಿಡಿಲು ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಮಾರ್ಚ್ 13 ರ ತನಕವೂ ಕರಾವಳಿ ಹಾಗೂ ಕೊಡಗಿನ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

Advertisement

ಈ ನಡುವೆ ಶಿವರಾತ್ರಿ ಮುಗಿಯುತ್ತಿದ್ದಂತೆ ಸೆಖೆ ಆರಂಭವಾಗಬೇಕಿದ್ದ ಕಾಲದಲ್ಲಿ ಉಷ್ಣಾಂಶ ಮಾತ್ರ ಏರಿಕೆಯಾಗಿ ಶುಷ್ಕ ಹವೆ ಪ್ರಾರಂಭವಾಗಿರುವುದು ಮಳೆ ಬೀಳುವ ಸಾಧ್ಯತೆಯನ್ನು ದೂರ ಮಾಡಬಹುದೆ ? ಎಂಬ ಆತಂಕ ಮನೆಮಾಡಿದೆ. ಈ ವಾಯುಭಾರ ಕುಸಿತವು ಉತ್ತರ ಭಾರತದ ಕಡೆಯಿಂದ ಶುಷ್ಕ ಹವೆಯನ್ನು ಸೆಳೆಯುತ್ತಿದೆ. ಒಂದು ವಿಶ್ಲೇಷಣೆಯಂತೆ ವಾಯುಭಾರ ಕುಸಿತವು ತಮಿಳುನಾಡು ಪ್ರವೇಶಿಸಿದಂತೆ ವಾತಾವರಣದಲ್ಲಿ ತೇವಾಂಶ ಏರಿಕೆಯಾಗಬಹುದು.

Advertisement

ಕರಾವಳಿ ಭಾಗದಲ್ಲಿ ಈಗ ವಾತಾವರಣದ ಉಷ್ಣತೆ 38 ಡಿಗ್ರಿಯಿಂದ 41 ಡಿಗ್ರಿಯವರೆಗೂ ಏರಿಕೆಯಾಗುತ್ತದೆ, ಇಳಿಕೆಯಾಗುತ್ತದೆ. ಈ ನಡುವೆ ವಾತಾವರಣದ ತೇವಾಂಶವೂ ಕಡಿಮೆಯಾಗುತ್ತಿರುವುದು  ಗಮನಾರ್ಹ ಅಂಶವಾಗಿದೆ. ಕರಾವಳಿ ಪ್ರದೇಶದಲ್ಲೂ ಈಗ ಶೇಕಡಾ 12 – 15 ರಷ್ಟು ವಾತಾವರಣದ ತೇವಾಂಶ ಕಂಡುಬರುತ್ತಿದೆ. ಮಲೆನಾಡು ಪ್ರದೇಶದಲ್ಲೂ ತೇವಾಂಶ ಕುಸಿತವಾಗುವ ಕಾರಣದಿಂದ ಭೂಮಿಯ ಉಷ್ಣತೆ ಹೆಚ್ಚಾಗುತ್ತಿದೆ,  ಹೀಗಾಗಿ ಈಚೆಗೆ ಕೆಲವು ವರ್ಷಗಳಿಂದ ಕೃಷಿಗೆ ವಿಪರೀತವಾದ ಬಿಸಿಲಿನ ಸಮಸ್ಯೆ ಕಾಡುತ್ತಿರುವುದು  ಕಂಡುಬರುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಜಲಕ್ಷಾಮದ ಜೊತೆಗೆ ವಿದ್ಯುತ್ ಕ್ಷಾಮ ಭೀತಿ : ರಾಯಚೂರು ಆರ್‌ಟಿಪಿಎಸ್‌ನ 4 ವಿದ್ಯುತ್ ಘಟಕಗಳು ಬಂದ್
March 29, 2024
9:00 PM
by: The Rural Mirror ಸುದ್ದಿಜಾಲ
ದೋಸ್ತಿಗಳ ಸಮ್ಮಿಲನ ಸಭೆ : ಸಿಎಂ ಸಿದ್ದರಾಮಯ್ಯ ಗರ್ವಭಂಗಕ್ಕೆ ಹೆಚ್‌ಡಿಡಿ ಕರೆ : ದೇಶದಲ್ಲಿ ಮೋದಿಯೇ ಬೆಸ್ಟ್‌ – ಹೆಚ್‌ಡಿಡಿ
March 29, 2024
8:35 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ನೀರಿಗಾಗಿ ಖರ್ಚು…! | ಜಲಮಂಡಳಿಗೆ ಆರ್ಥಿಕ ಸಂಕಷ್ಟ..!
March 29, 2024
3:03 PM
by: ದ ರೂರಲ್ ಮಿರರ್.ಕಾಂ
Karnataka Weather | 28-03-2024 | ಕೆಲವು ಕಡೆ ತುಂತುರು ಮಳೆ | ಮಾ.31 ನಂತರ ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ |
March 28, 2024
1:19 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror