Opinion

ನಿದ್ದೆ ಎಂದರೆ ಏನು? | ಮನುಷ್ಯನ ಆರೋಗ್ಯಕ್ಕೆ ನಿದ್ದೆ ಎಷ್ಟು ಮುಖ್ಯ..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಿದ್ರೆಯ(Sleep) ನಂತರ, ನಮಗೆ ಪುನಃ ತಾಜಾತನದ(Freshness) ಅನುಭವವಾಗುತ್ತದೆ. ಪ್ರತಿದಿನ ನಾವು ಪರಿಶ್ರಮದ ತರುವಾಯ ನಿದ್ರೆಗೆ ಹೋಗುತ್ತೇವೆ ಮತ್ತು ಬೆಳಿಗ್ಗೆ ಎದ್ದು ಮತ್ತೆ ಕೆಲಸಕ್ಕೆ(Work) ಹೋಗುತ್ತೇವೆ. ನಾವು ಸಾಕಷ್ಟು ನಿದ್ರೆ ಮಾಡದಿದ್ದರೆ ಏನಾಗುತ್ತದೆ ಎಂಬುದನ್ನು ನೀವು ಅನುಭವಿಸಿರಬೇಕು. ನಾವು ಕೆರಳುತ್ತೇವೆ(irritable), ಕೆಲಸದಲ್ಲಿ ಏಕಾಗ್ರತೆ ಇರುವುದಿಲ್ಲ(lack concentration), ತೂಕಡಿಕೆ ಬರುತ್ತದೆ(feel drowsy), ಕೆಲವೊಮ್ಮೆ ತಲೆ ತಿರುಗುವುದು(dizzy), ಇದರಿಂದ ನಿದ್ರೆ ಅನಿವಾರ್ಯ ವಿಷಯ ಎಂದು ನಾವು ತಿಳಿದುಕೊಳ್ಳುತ್ತೇವೆ.

Advertisement
Advertisement

ಮಕ್ಕಳು 16 ರಿಂದ 18 ಗಂಟೆಗಳ ಕಾಲ ನಿದ್ರಿಸುತ್ತಾರೆ, ಈ ಸಮಯದಲ್ಲಿ ಚಯಾಪಚಯ ದರವು ಕಡಿಮೆಯಾಗಿದೆ ಮತ್ತು ಮಕ್ಕಳ ಬೆಳವಣಿಗೆಯಾಗುತ್ತದೆ. ನಿದ್ರೆ ಕ್ರಮೇಣ ಕಡಿಮೆಯಾಗುತ್ತದೆ. ಯುವ ವ್ಯಕ್ತಿಗಳಿಗೆ ಏಳರಿಂದ ಎಂಟು ಗಂಟೆಗಳು ನಿದ್ರೆ ಅಗತ್ಯ. ಆದರೆ ವೃದ್ಧಾಪ್ಯದಲ್ಲಿ ಐದರಿಂದ ಆರು ಗಂಟೆಗಳ ನಿದ್ದೆ ಸಾಕು. ಸಾಮಾನ್ಯವಾಗಿ ಮಧ್ಯಾಹ್ನ ಮಲಗುವುದಿಲ್ಲ. ಸುಮ್ಮನೆ ಮಲಗುವುದು ನಿದ್ರೆಯಲ್ಲ ಎಂದು ನಿಮಗೆ ತಿಳಿದಿದೆ.

ಎಲೆಕ್ಟ್ರೋಎನ್ಸೆಫಾಲೋಗ್ರಾಮ್ ಅಥವಾ ಮೆದುಳಿನ ಚಟುವಟಿಕೆಯ ನಕ್ಷೆಯ ಮೂಲಕ ನಿದ್ರೆಯನ್ನು ವಿಶ್ಲೇಷಿಸಿದರೆ, ಈ ಅವಧಿಯಲ್ಲಿ ಒಳಬರುವ ಮೆದುಳಿನ ಅಲೆಗಳು ಕಡಿಮೆಯಾಗುವುದನ್ನು ಕಾಣಬಹುದು; ಆದರೆ ಅವರ ಎತ್ತರ ಹೆಚ್ಚಾಗುತ್ತದೆ. ನಂತರದ ಹಂತದಲ್ಲಿ, ತ್ವರಿತ ಕಣ್ಣಿನ ಚಲನೆಗಳು ಮತ್ತು ಮೆದುಳಿನಿಂದ ಬರುವ ಅಲೆಗಳ ಸಂಖ್ಯೆಯು ಹೆಚ್ಚಾಗುತ್ತದೆ. ಈ ಅಲೆಗಳ ಎತ್ತರ ಕಡಿಮೆ.

ಒಂದು ನಿದ್ರೆಯ ಚಕ್ರದಲ್ಲಿ, ಕಣ್ಣಿನ ತೀವ್ರ ಚಲನೆಯಲ್ಲದ (NREM) ಮತ್ತು ಕಣ್ಣಿನ ತೀವ್ರ ಚಲನೆಯ (REM) ಎಂಬ ನಿದ್ರೆಯ ಎರಡು ಹಂತಗಳಿವೆ. ವಯಸ್ಕ ಒಂದು ಸಾಮಾನ್ಯ ನಿದ್ರೆಯಲ್ಲಿ ಇಂತಹ ನಾಲ್ಕರಿಂದ ಐದು ಚಕ್ರಗಳು ಪೂರ್ಣಗೊಳ್ಳುತ್ತವೆ. ಪ್ರತಿ ಚಕ್ರದ ಅವಧಿಯು ಒಂದೂವರೆ ಗಂಟೆ.

ಬೆನ್ನುಹುರಿಯಲ್ಲಿನ ನರಕೋಶಗಳ ಮೇಲೆ ನಿದ್ರೆ ಅವಲಂಬಿತವಾಗಿದೆ. ಆದ್ದರಿಂದ, ಈ ಪ್ರದೇಶವು ಹಾನಿಗೊಳಗಾದರೆ ಅಥವಾ ಇದರ ಮೇಲೆ ಪರಿಣಾಮವಾದರೆ, ಅತಿ ನಿದ್ರೆ ಬರುತ್ತದೆ ಅಥವಾ ಸಾಕಷ್ಟು ನಿದ್ರೆ ಬರುವುದಿಲ್ಲ. ಇದು ನಿಜವಾಗಿದ್ದರೂ, ಅತಿಯಾದ ನಿದ್ರೆ ಸಾಮಾನ್ಯವಾಗಿ ಅಭ್ಯಾಸದ ಪರಿಣಾಮವಾಗಿದೆ. ಆದ್ದರಿಂದ, ಸರಿಯಾದ ಅಭ್ಯಾಸವು ರೂಡಢಿಸಿಕೊಂಡರೆ ನಿದ್ರೆಯನ್ನು ಸಾಮಾನ್ಯಗೊಳಿಸಬಹುದು.

Advertisement

ಈ ಅವಧಿಯಲ್ಲಿ ದೇಹವು ವಿಶ್ರಾಂತಿ ಪಡೆಯುವುದರಿಂದ ನಿದ್ರೆಯು ಜೀವನಕ್ಕೆ ಅವಶ್ಯಕವಾಗಿದೆ. ಉಸಿರಾಟ ಮತ್ತು ರಕ್ತಪರಿಚಲನೆಯ ಕಾರ್ಯವು ನಿಧಾನಗೊಳ್ಳುತ್ತದೆ. ಇಂತಹ ಈ ನಿದ್ದೆ ಜಾಸ್ತಿಯಾದರೆ, ನಿದ್ದೆಬಡುಕ ಎಂದು ಟೀಕೆ ಮಾಡುತ್ತಾರೆ; ಕಡಿಮೆಯಾದರೆ ಆತಂಕವೂ ಕಾಡುತ್ತದೆ.

ಡಾ. ಅಂಜಲಿ ದೀಕ್ಷಿತ್ ಮತ್ತು ಡಾ. ಜಗನ್ನಾಥ ದೀಕ್ಷಿತರ ಪುಸ್ತಕದಿಂದ ಕನ್ನಡಕ್ಕೆ: ಡಾ. ಕುಲಕರ್ಣಿ ಪಿ. ಎ.

After sleep, we feel fresh again. Every day we go to sleep after exertion and wake up in the morning to go to work again. You must have experienced what happens when we don't get enough sleep. We get irritable, lack concentration at work, feel drowsy, sometimes dizzy, so we realize that sleep is a must.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ವಿದೇಶದಿಂದ ಹಳ್ಳಿಗೆ ಬಂದು ಕೃಷಿ ಸಾಧನೆ ಮಾಡಿದ ಯುವಕ

ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ  ಯೋಗೇಶ್ ತೋರಿಸಿಕೊಟ್ಟಿದ್ದಾರೆ.…

6 hours ago

ಬದುಕು ಪುರಾಣ | ‘ಅವನೇನು.. ಹರಿಶ್ಚಂದ್ರನೋ!’

ನುಡಿದಂತೆ ನಡೆದಾತ ‘ರಾಜಾ ಹರಿಶ್ಚಂದ್ರ’. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗಿ. ಅನೃತವನ್ನಾಡದೆ…

11 hours ago

ಗುರು ಆದಿತ್ಯ ರಾಜಯೋಗ | ಯಾರಿಗೆಲ್ಲಾ ಕುಬೇರ ಯೋಗ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

11 hours ago

ಸೆ.30 ವರೆಗೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧ

ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…

19 hours ago

ಕೃಷಿ ಸಂಸ್ಕರಣಾ ಘಟಕ | 15 ಲಕ್ಷ ರೂಪಾಯಿ ಸಹಾಯಧನ ನೀಡಲು ಸರ್ಕಾರ  ನಿರ್ಧಾರ

ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುವ ರೈತರಿಗೆ ಈ ವರ್ಷದಿಂದ ರಾಜ್ಯ ಸರ್ಕಾರ 9…

19 hours ago