Advertisement
Opinion

ನಿದ್ದೆ ಎಂದರೆ ಏನು? | ಮನುಷ್ಯನ ಆರೋಗ್ಯಕ್ಕೆ ನಿದ್ದೆ ಎಷ್ಟು ಮುಖ್ಯ..?

Share

ನಿದ್ರೆಯ(Sleep) ನಂತರ, ನಮಗೆ ಪುನಃ ತಾಜಾತನದ(Freshness) ಅನುಭವವಾಗುತ್ತದೆ. ಪ್ರತಿದಿನ ನಾವು ಪರಿಶ್ರಮದ ತರುವಾಯ ನಿದ್ರೆಗೆ ಹೋಗುತ್ತೇವೆ ಮತ್ತು ಬೆಳಿಗ್ಗೆ ಎದ್ದು ಮತ್ತೆ ಕೆಲಸಕ್ಕೆ(Work) ಹೋಗುತ್ತೇವೆ. ನಾವು ಸಾಕಷ್ಟು ನಿದ್ರೆ ಮಾಡದಿದ್ದರೆ ಏನಾಗುತ್ತದೆ ಎಂಬುದನ್ನು ನೀವು ಅನುಭವಿಸಿರಬೇಕು. ನಾವು ಕೆರಳುತ್ತೇವೆ(irritable), ಕೆಲಸದಲ್ಲಿ ಏಕಾಗ್ರತೆ ಇರುವುದಿಲ್ಲ(lack concentration), ತೂಕಡಿಕೆ ಬರುತ್ತದೆ(feel drowsy), ಕೆಲವೊಮ್ಮೆ ತಲೆ ತಿರುಗುವುದು(dizzy), ಇದರಿಂದ ನಿದ್ರೆ ಅನಿವಾರ್ಯ ವಿಷಯ ಎಂದು ನಾವು ತಿಳಿದುಕೊಳ್ಳುತ್ತೇವೆ.

Advertisement
Advertisement
Advertisement
Advertisement

ಮಕ್ಕಳು 16 ರಿಂದ 18 ಗಂಟೆಗಳ ಕಾಲ ನಿದ್ರಿಸುತ್ತಾರೆ, ಈ ಸಮಯದಲ್ಲಿ ಚಯಾಪಚಯ ದರವು ಕಡಿಮೆಯಾಗಿದೆ ಮತ್ತು ಮಕ್ಕಳ ಬೆಳವಣಿಗೆಯಾಗುತ್ತದೆ. ನಿದ್ರೆ ಕ್ರಮೇಣ ಕಡಿಮೆಯಾಗುತ್ತದೆ. ಯುವ ವ್ಯಕ್ತಿಗಳಿಗೆ ಏಳರಿಂದ ಎಂಟು ಗಂಟೆಗಳು ನಿದ್ರೆ ಅಗತ್ಯ. ಆದರೆ ವೃದ್ಧಾಪ್ಯದಲ್ಲಿ ಐದರಿಂದ ಆರು ಗಂಟೆಗಳ ನಿದ್ದೆ ಸಾಕು. ಸಾಮಾನ್ಯವಾಗಿ ಮಧ್ಯಾಹ್ನ ಮಲಗುವುದಿಲ್ಲ. ಸುಮ್ಮನೆ ಮಲಗುವುದು ನಿದ್ರೆಯಲ್ಲ ಎಂದು ನಿಮಗೆ ತಿಳಿದಿದೆ.

Advertisement

ಎಲೆಕ್ಟ್ರೋಎನ್ಸೆಫಾಲೋಗ್ರಾಮ್ ಅಥವಾ ಮೆದುಳಿನ ಚಟುವಟಿಕೆಯ ನಕ್ಷೆಯ ಮೂಲಕ ನಿದ್ರೆಯನ್ನು ವಿಶ್ಲೇಷಿಸಿದರೆ, ಈ ಅವಧಿಯಲ್ಲಿ ಒಳಬರುವ ಮೆದುಳಿನ ಅಲೆಗಳು ಕಡಿಮೆಯಾಗುವುದನ್ನು ಕಾಣಬಹುದು; ಆದರೆ ಅವರ ಎತ್ತರ ಹೆಚ್ಚಾಗುತ್ತದೆ. ನಂತರದ ಹಂತದಲ್ಲಿ, ತ್ವರಿತ ಕಣ್ಣಿನ ಚಲನೆಗಳು ಮತ್ತು ಮೆದುಳಿನಿಂದ ಬರುವ ಅಲೆಗಳ ಸಂಖ್ಯೆಯು ಹೆಚ್ಚಾಗುತ್ತದೆ. ಈ ಅಲೆಗಳ ಎತ್ತರ ಕಡಿಮೆ.

ಒಂದು ನಿದ್ರೆಯ ಚಕ್ರದಲ್ಲಿ, ಕಣ್ಣಿನ ತೀವ್ರ ಚಲನೆಯಲ್ಲದ (NREM) ಮತ್ತು ಕಣ್ಣಿನ ತೀವ್ರ ಚಲನೆಯ (REM) ಎಂಬ ನಿದ್ರೆಯ ಎರಡು ಹಂತಗಳಿವೆ. ವಯಸ್ಕ ಒಂದು ಸಾಮಾನ್ಯ ನಿದ್ರೆಯಲ್ಲಿ ಇಂತಹ ನಾಲ್ಕರಿಂದ ಐದು ಚಕ್ರಗಳು ಪೂರ್ಣಗೊಳ್ಳುತ್ತವೆ. ಪ್ರತಿ ಚಕ್ರದ ಅವಧಿಯು ಒಂದೂವರೆ ಗಂಟೆ.

Advertisement

ಬೆನ್ನುಹುರಿಯಲ್ಲಿನ ನರಕೋಶಗಳ ಮೇಲೆ ನಿದ್ರೆ ಅವಲಂಬಿತವಾಗಿದೆ. ಆದ್ದರಿಂದ, ಈ ಪ್ರದೇಶವು ಹಾನಿಗೊಳಗಾದರೆ ಅಥವಾ ಇದರ ಮೇಲೆ ಪರಿಣಾಮವಾದರೆ, ಅತಿ ನಿದ್ರೆ ಬರುತ್ತದೆ ಅಥವಾ ಸಾಕಷ್ಟು ನಿದ್ರೆ ಬರುವುದಿಲ್ಲ. ಇದು ನಿಜವಾಗಿದ್ದರೂ, ಅತಿಯಾದ ನಿದ್ರೆ ಸಾಮಾನ್ಯವಾಗಿ ಅಭ್ಯಾಸದ ಪರಿಣಾಮವಾಗಿದೆ. ಆದ್ದರಿಂದ, ಸರಿಯಾದ ಅಭ್ಯಾಸವು ರೂಡಢಿಸಿಕೊಂಡರೆ ನಿದ್ರೆಯನ್ನು ಸಾಮಾನ್ಯಗೊಳಿಸಬಹುದು.

ಈ ಅವಧಿಯಲ್ಲಿ ದೇಹವು ವಿಶ್ರಾಂತಿ ಪಡೆಯುವುದರಿಂದ ನಿದ್ರೆಯು ಜೀವನಕ್ಕೆ ಅವಶ್ಯಕವಾಗಿದೆ. ಉಸಿರಾಟ ಮತ್ತು ರಕ್ತಪರಿಚಲನೆಯ ಕಾರ್ಯವು ನಿಧಾನಗೊಳ್ಳುತ್ತದೆ. ಇಂತಹ ಈ ನಿದ್ದೆ ಜಾಸ್ತಿಯಾದರೆ, ನಿದ್ದೆಬಡುಕ ಎಂದು ಟೀಕೆ ಮಾಡುತ್ತಾರೆ; ಕಡಿಮೆಯಾದರೆ ಆತಂಕವೂ ಕಾಡುತ್ತದೆ.

Advertisement

ಡಾ. ಅಂಜಲಿ ದೀಕ್ಷಿತ್ ಮತ್ತು ಡಾ. ಜಗನ್ನಾಥ ದೀಕ್ಷಿತರ ಪುಸ್ತಕದಿಂದ ಕನ್ನಡಕ್ಕೆ: ಡಾ. ಕುಲಕರ್ಣಿ ಪಿ. ಎ.

After sleep, we feel fresh again. Every day we go to sleep after exertion and wake up in the morning to go to work again. You must have experienced what happens when we don't get enough sleep. We get irritable, lack concentration at work, feel drowsy, sometimes dizzy, so we realize that sleep is a must.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

4 hours ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

2 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

3 days ago

ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |

ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…

3 days ago

ಸ್ವರ್ಗಕ್ಕಾಗಿ ಮೂರು ಕಾಲ್ತುಳಿತಗಳು

ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…

3 days ago

ಅಡಿಕೆಗೆ ಮೈಟ್ | ಆತಂಕ ಬೇಡ, ಇರಲಿ ಎಚ್ಚರ | ವಿಜ್ಞಾನಿಗಳಿಂದ ಮಾಹಿತಿ |

ಅಡಿಕೆಯ ಮೈಟ್‌ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…

3 days ago