Advertisement
ಸುದ್ದಿಗಳು

ಭಾರತ ಮತ್ತು ಬಾಂಗ್ಲಾದೇಶ ವ್ಯಾಪಾರ ವಹಿವಾಟು ಹೇಗಿದೆ..?

Share

ಬಾಂಗ್ಲಾದೇಶವು ದೈನಂದಿನ ಜೀವನದಿಂದ ಹಿಡಿದ ಆರೋಗ್ಯ ಕ್ಷೇತ್ರದವರೆಗೆ ಬಹುಮಟ್ಟಿಗೆ ಭಾರತ ದೇಶವನ್ನು ಅವಲಂಬಿತವಾಗಿದೆ. ಈ ವ್ಯಾಪಾರ ವ್ಯವಸ್ಥೆಗಳು ಎರಡು ಮೂರು ದಿನದಿಂದ ಶುರುವಾದ ಸಂಬಂಧವಲ್ಲ. ಹೊರತು, ದಶಕಗಳಿಂದ ಈ ಎರಡು ರಾಷ್ಟ್ರಗಳ ನಡುವೆ ಬಲವಾದ ವ್ಯಾಪಾರ ಸಂಬಂಧಗಳು ನಿರ್ಮಾಣವಾಗಿದೆ. ಆದರಲ್ಲೂ ಬಾಂಗ್ಲಾದೇಶದ ಆಹಾರ ಭದ್ರತೆಯಲ್ಲಿ ಭಾರತದ ಪಾತ್ರ ಅತ್ಯಂತ ಪ್ರಮುಖವಾಗಿದೆ.

ಬಾಂಗ್ಲಾದೇಶವೂ ಸುಮಾರು 2.1 ಮಿಲಿಯನ್ ಮೆಟ್ರಿಕ್ ಟನ್ ಗೋಧಿ ಆಮದು ಮಾಡಿಕೊಂಡಿತ್ತು. ಗೋಧಿಯ ಜೊತೆಗೆ ಬಾಸ್ಮತಿ ಅಕ್ಕಿಯನ್ನು ಭಾರತದಿಂದ ರಫ್ತು ಮಾಡಲಾಗುತ್ತದೆ. 2021-22 ರಲ್ಲಿ ಮಾತ್ರ ಬಾಂಗ್ಲಾದೇಶವು ಭಾರತದಿಂದ ರೂ 5,000 ಕೋಟಿಗೂ ಹೆಚ್ಚು ಮೌಲ್ಯದ ಸಕ್ಕರೆಯನ್ನು ಖರೀದಿಸಿತ್ತು. ಇದರ ಜೊತೆಗೆ ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಮುಂತಾದ ದಿನನಿತ್ಯದ ತರಕಾರಿಗಳು ಭಾರತದಿಂದ ಬಾಂಗ್ಲಾದೇಶಕ್ಕೆ ಸರಬರಾಜಾಗುತ್ತವೆ. ಮಾತ್ರವಲ್ಲ, ಮಸಾಲೆ ಪಾದಾರ್ಥ, ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಸಂಸ್ಕರಿಸಿದ ಆಹಾರಗಳಿಗೂ  ಭಾರತವನ್ನು ಅವಲಂಬಿತವಾಗಿದೆ.

ಆದರಲ್ಲೂ ಅತ್ಯಂತ ಮಹತ್ವದ ಉದ್ಯೋಗ ಕ್ಷೇತ್ರವಾಗಿರುವ ಜವಳಿ ಉದ್ಯಮಕ್ಕೆ ಬಾಂಗ್ಲಾದೇಶವು 11% ಕೊಡುಗೆ ನೀಡಿದರೆ, ಈ ಉದ್ಯಮಕ್ಕೆ ಹತ್ತಿಯ ಅವಶ್ಯಕತೆ ಇರುವುದು ಭಾರತದ ಹತ್ತಿ. ಹತ್ತಿನ ರಫ್ತು ಸುಮಾರು 35% ಬಾಂಗ್ಲಾದೇಶಕ್ಕೆ ಹೋಗುತ್ತದೆ. ಒಂದು ವೇಳೆ ಹತ್ತಿಯ ಸರಬರಾಜುವಿಗೆ ಅಡ್ಡಿಪಡಿಸಿದರೆ, ಲಕ್ಷಾಂತರ ಉದ್ಯೋಗಗಳು ಅಪಾಯದಲ್ಲಿರುತ್ತವೆ. ಜೊತೆಗೆ, ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳು, ಪ್ಲಾಸ್ಟಿಕ್, ಉಕ್ಕು, ವಿದ್ಯುತ್ ಉಪಕರಣಗಳು ಮತ್ತು ಔಷಧಗಳು ಭಾರತದಿಂದ ಬಾಂಗ್ಲಾದೇಶಕ್ಕೆ ಪೂರೈಕೆಯಾಗುತ್ತದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಮೋಹಿತ್‌ ನಗರ್‌ ಅಡಿಕೆ ಗಿಡ ಏಕೆ ರೈತರ ಫೇವರಿಟ್‌..? ಹೆಚ್ಚು ಇಳುವರಿ, ವೇಗದ ಬೆಳವಣಿಗೆ ಇದರ ವಿಶೇಷತೆ..!

ಮೋಹಿತ್‌ನಗರ ಅಡಿಕೆ ತಳಿ ಹೆಚ್ಚು ಇಳುವರಿ, ವೇಗವಾದ ಬೆಳವಣಿಗೆ ಹಾಗೂ ಸಮಾನ ಗುಣಮಟ್ಟದ…

4 hours ago

ಹವಾಮಾನ ವರದಿ | 19-05-2026 | ಕರಾವಳಿಯಲ್ಲಿ ಮಳೆ ಕ್ಷೀಣಿಸುವ ಲಕ್ಷಣ – ಮೇ 27ರ ಸುಮಾರಿಗೆ ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ

ರಾಜ್ಯದಲ್ಲಿ ಮೇ 20ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿದ್ದು, ಮೇ 27ರ ಸುಮಾರಿಗೆ…

12 hours ago

“ಮೇ 26ಕ್ಕೇ ಮುಂಗಾರು ಎಂಟ್ರಿ!” ಕರ್ನಾಟಕದಲ್ಲಿ ಭಾರೀ ಮಳೆ ಅಲರ್ಟ್‌, ಮೀನುಗಾರರಿಗೆ ಎಚ್ಚರಿಕೆ

ನೈರುತ್ಯ ಮುಂಗಾರು ಮೇ 26ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು IMD…

1 day ago

ಕರ್ನಾಟಕಕ್ಕೆ ಭಾರೀ ಮಳೆ ಅಲರ್ಟ್‌ | ಬೆಂಗಳೂರಿನಲ್ಲಿ ಮಳೆ ಸಂಕಷ್ಟ, ಜಿಲ್ಲೆಗಳಲ್ಲಿ ಬೆಳೆಗಳು ಕೊಚ್ಚಿ ಹೋದವು…!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ಬೆಂಗಳೂರಿನಲ್ಲಿ ಜಲಾವೃತ ಪರಿಸ್ಥಿತಿ…

1 day ago

ಅಡಿಕೆ ಮಾರುಕಟ್ಟೆ ಏಕೆ ನಿಂತಿತು..? ಸವಾಲು ಮತ್ತು ರೈತರ ಭವಿಷ್ಯದ ಪ್ರಶ್ನೆಗಳು ಏನು…?

ಅಡಿಕೆ ಇಳುವರಿ ಕಡಿಮೆಯಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಧಾರಣೆ ಏರಿಕೆಯಾಗದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.…

2 days ago