ಹಣ್ಣುಗಳು.. ಕಾರ್ಬೋಹೈಡ್ರೇಟ್ಗಳು, ಅಗತ್ಯವಾದ ಜೀವಸತ್ವಗಳು ಖನಿಜಗಳು ಮತ್ತು ನಾರಿನಂಶಗಳು ಸಮೃದ್ಧಿ ಮೂಲವಾಗಿದೆ.ಕೆಲವು ಪೋಷಕಾಂಶ ಹಣ್ಣುಗಳಲ್ಲಿ ಮಾತ್ರದೊರೆಯುತ್ತದೆ. ಹೀಗಾಗಿ ಸಮತೋಲನ ಹಾಗೂ ಆರೋಗ್ಯಕರ ಆಹಾರವನ್ನು ಹೊಂದಲು ಹಣ್ಣುಗಳು ನಮಗೆ ಅತ್ಯಗತ್ಯ. ಹಣ್ಣುಗಳು ನೈಸರ್ಗಿಕ ಸಕ್ಕರೆ ಪ್ರಕ್ಟೊಸನ್ನು ಹೊಂದಿರುತ್ತದೆ.
ಸಿಟ್ರೆಸ್ ಹಣ್ಣುಗಳು ವಿಟಮಿನ್ ಎ ಮತ್ತು ಸಿ ಮೂಲವಾಗಿದೆ. ಬಾಳೆಹಣ್ಣು ಪೊಟಾಸಿಯಂ ಮತ್ತು tryptopan ಮೂಲವಾಗಿದೆ. ಸೇಬುಗಳು ಕಬ್ಬಿಣ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ. ನಾರಿನಂಶ /ಫೈಬರ್ ಸಮೃದ್ಧ ಹಣ್ಣುಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯಕಾರಿ. ಫೈಬರ್ ಸಮೃದ್ಧವಾಗಿರುವ ಆಹಾರ ರಕ್ತದಿಂದ ಗ್ಲುಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಟೈಪ್ ಟು ಮಧುಮೇಹಕ್ಕೆ ಸ್ತೂಲಕಾಯ ಒಂದು ಕಾರಣವಾಗಿದೆ. ಫೈಬರ್ ಸಮೃದ್ಧವಾಗಿರುವ ಹಣ್ಣುಗಳ ಸೇವನೆಯಿಂದ ತೂಕವನ್ನು ನಿಯಂತ್ರಿಸುವ ಮೂಲಕ ಮಧುಮೆಹವನ್ನು ತಡೆಗಟ್ಟಬಹುದು.
Low Glycemic Index(LGI) ಅಂದರೆ ನಮ್ಮ ದೇಹದಲ್ಲಿ ಹರಿಯುವ ರಕ್ತಕ್ಕೆ ಗ್ಲುಕೋಸ್ ಅನ್ನು ನಿಧಾನವಾಗಿ ಬಿಡುಗಡೆ ಮಾಡುವಂಥದ್ದು ಈ ಕಡಿಮೆ glycemic index ಇರುವ ಎಲ್ಲಾ ಹಣ್ಣುಗಳು ಮಧುಮೇಹ ರೋಗಿಗಳು ಉಪಯೋಗಿಸಬಹುದು ಅವುಗಳು ಯಾವುವೆಂದರೆ. ಸೇಬು, ಪಪ್ಪಾಯ, ಕಿತ್ತಳೆ, ಮರಸೇಬು, ಚೆರ್ರಿ, ನೇರಳೆ, ಪೇರಳೆ, ಡ್ರಾಗನ್ ಫ್ರೂಟ್, ಕಿವಿಹಣ್ಣು, ಅವಕಾಡೋ.
ಪಪ್ಪಾಯಿ: ಕಡಿಮೆ ಕ್ಯಾಲೋರಿಇದೆ hypoglycemic effect..ಎಲ್ಲಾ ವಿಟಮಿನ್ ಗಳು ಫೈಬರ್ ಅಂಶ ಜಾಸ್ತಿ ಇರವುದರಿಂದ ಮಧುಮೆಹ ರೋಗದಲ್ಲಿ ಬಳಸಬಹುದು.
ಚೆರ್ರಿ : ಸ್ವಾಭಾವಿಕವಾಗಿ ಸಿಗುವ ಚೆರ್ರಿ ಹಣ್ಣು antioxidents.ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯಕಾರಿ. ಕೃತಕ ಚೆರ್ರಿಯಲ್ಲಿ ಸಕ್ಕರೆ ಅಂಶ ಇರುವುದರಿಂದ ಸೇವಿಸುವುದು ಒಳ್ಳೇದಲ್ಲ.
ಕಿವಿಹಣ್ಣು : ಬಿಳಿರಕ್ತ ಕಣಗಳನ್ನು ಹೆಚಿಸುತ್ತದೆ ಫೈಬರ್, ಪೊಟಾಸಿಯಂ ವಿಟಮಿನ್ಸ್ ಸಮೃದ್ಧವಾಗಿದ್ದು ಕಡಿಮೆ ಕ್ಯಾಲೋರಿ ಯನ್ನು ಹೊಂದಿದೆ.
ಡ್ರ್ಯಾಗನ್ ಫ್ರೂಟ್ : ಕೆಡಿಮೆ ಕ್ಯಾಲರಿ,ಆಂಟಿ ಆಕ್ಸಿಡೆಂಟ್ ಹಾಗೂ ಫೈಬರ್ ಸಮೃದ್ಧವಾಗಿದೆ. ಹಾಗಾಗಿ ಈ ಎಲ್ಲಾ ಹಣ್ಣುಗಳನ್ನು ಮಿತವಾಗಿ ಸೇವಿಸಿ. ಮಧುಮೆಹ ರೋಗಿಗಳು ಬಾಳೆಹಣ್ಣು, ಮಾವಿನ ಹಣ್ಣು, ದ್ರಾಕ್ಷಿ, ಚಿಕ್ಕು, ಇವುಗಳಲ್ಲಿ ಸಕ್ಕರೆಯ ಪ್ರಮಾಣ (High Glycemic Index ) ಅಧಿಕವಿರುವುದರಿಂದ ಸೇವಿಸದೆ ಇರುವುದು ಉತ್ತಮ. ಉತ್ತಮ ಆಹಾರಪದ್ದತಿ ವ್ಯಾಯಾಮ ಯೋಗ ವಾಕ್ ಉತ್ತಮ ಜೀವನಶೈಲಿ ಇವುಗಳಿಂದ ಮಧುಮೇಹ ನಿಯಂತ್ರಿಸಬಹುದು.
( ಸಂಗ್ರಹ ಮಾಹಿತಿ)
ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…
"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…
ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ ಆಶಯವನ್ನೇ ಕಳೆದುಕೊಳ್ಳುತ್ತದೆ.…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು…
ಈಶಾನ್ಯ ರಾಜ್ಯಗಳ ಬಹುತೇಕ ಭಾಗಗಳಲ್ಲಿ ಮುಂದುವರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಮಣಿಪುರ,…