Advertisement
MIRROR FOCUS

WHO ಆಗ್ನೇಯ ಏಷ್ಯಾದ 78 ನೇ ಅಧಿವೇಶನ ಮುಕ್ತಾಯ | ನಿರೀಕ್ಷೆಯಂತೆಯೇ ಅಡಿಕೆಯ ಉತ್ಪನ್ನದ ಮೇಲೆ ಬಿಗುವಿನ ಕ್ರಮದ ನಿರ್ಧಾರ

Share

ಹೊಗೆರಹಿತ ತಂಬಾಕು, ಹೊಸಬಗೆಯ ನಿಕೋಟಿನ್ ಉತ್ಪನ್ನಗಳು ಮತ್ತು ಅಡಿಕೆಗಳ ಬಳಕೆಯನ್ನು ನಿಯಂತ್ರಿಸಲು  ವಿಶ್ವ ಆರೋಗ್ಯ ಸಂಸ್ಥೆ(WHO) ಸದಸ್ಯ ರಾಷ್ಟ್ರಗಳು ಪ್ರಾದೇಶಿಕ ಕಾರ್ಯತಂತ್ರಗಳನ್ನು ಅನುಮೋದಿಸಿದೆ. WHO ಆಗ್ನೇಯ ಏಷ್ಯಾದ ಸದಸ್ಯ ರಾಷ್ಟ್ರಗಳಲ್ಲಿ ಬಾಂಗ್ಲಾದೇಶ, ಭೂತಾನ್, ಭಾರತ, ಇಂಡೋನೇಷ್ಯಾ, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್ ಮತ್ತು ಟಿಮೋರ್ ಸೇರಿದೆ.

ಇದು ರಾಷ್ಟ್ರೀಯ ಶಾಸನ, ನಿಯಂತ್ರಕ ಚೌಕಟ್ಟುಗಳು ಮತ್ತು ಜಾರಿ ಮಾಡುವ ಕಾರ್ಯವಿಧಾನಗಳನ್ನು ಬಲಪಡಿಸುವುದರ ಮೇಲೆ ಕೇಂದ್ರೀಕರಿಸಿದೆ.  ಇದರಲ್ಲಿ ಈ ಉತ್ಪನ್ನಗಳ ತಯಾರಿಕೆ, ಮಾರಾಟ, ಜಾಹೀರಾತು, ಪ್ರಚಾರ ಮತ್ತು ಪ್ರಾಯೋಜಕತ್ವದ ಮೇಲೆ ಸಮಗ್ರ ನಿಷೇಧಗಳು ಕೂಡಾ ಸೇರಿವೆ. ಈ ಉತ್ಪನ್ನಗಳ ಲಭ್ಯತೆಯನ್ನು ನಿರ್ಬಂಧಿಸಲು, ಸ್ಥಗಿತ ಮತ್ತು ಕಣ್ಗಾವಲು ಹೆಚ್ಚಿಸಲು ಸೇರಿದಂತೆ ನೀತಿಗಳನ್ನು ಜಾರಿಗೆ ತರುವುದರ ಮೇಲೆ ಆದ್ಯತೆ ನೀಡಲಾಗುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

WHO ಆಗ್ನೇಯ ಏಷ್ಯಾದ 78 ನೇ ಅಧಿವೇಶನವು ಸೋಮವಾರದಂದು ಆರಂಭವಾಗಿ ಬುಧವಾರ ಮುಕ್ತಾಯವಾಗಿತ್ತು. ಈ ವರ್ಷ ಶ್ರೀಲಂಕಾ ಆಯೋಜಿಸಿದ್ದ ಮೂರು ದಿನಗಳ ಆಡಳಿತ ಮಂಡಳಿಯ ಸಭೆಯನ್ನು ಶ್ರೀಲಂಕಾ ಸಂಸತ್ತಿನ ಸ್ಪೀಕರ್ ಡಾ. ಜಗತ್ ವಿಕ್ರಮರತ್ನೆ ಉದ್ಘಾಟಿಸಿದರು. ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆರೋಗ್ಯಕರ ವೃದ್ಧಾಪ್ಯ, ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ದೀರ್ಘಕಾಲದ ಆರೋಗ್ಯ ಪರಿಸ್ಥಿತಿ, ತಂಬಾಕು ಅಥವಾ ಅಡಿಕೆ ಬಳಕೆ ಸೇರಿದಂತೆ ವಿವಿಧ ನೀತಿ ನಿರ್ಣಯಗಳ ಬಗ್ಗೆ ಚರ್ಚೆಯಾದವು.  ಸಭೆಯ ಕೊನೆಯಲ್ಲಿ ಎಲ್ಲರಿಗೂ ಆರೋಗ್ಯವನ್ನು ಸುಧಾರಿಸಲು ಅಗತ್ಯವಾಗಿರುವ ಪ್ರಮುಖ ನಿರ್ಧಾರಗಳು ಮತ್ತು ಸದಸ್ಯ ರಾಷ್ಟ್ರಗಳು ಪ್ರಮುಖ ಸಾರ್ವಜನಿಕ ಆರೋಗ್ಯ ಸವಾಲುಗಳ ಕುರಿತು ನಿರ್ಣಯ ಕೈಗೊಂಡರು. 2050 ರ ವೇಳೆಗೆ ಈ ಪ್ರದೇಶದಲ್ಲಿ ಬದಲಾವಣೆಯ ನಿರೀಕ್ಷೆಯನ್ನು ವ್ಯಕ್ತಪಡಿಸಲಾಯಿತು.

ಪ್ರಮುಖವಾಗಿ ಇಂದು ಜಾಗತಿಕವಾಗಿ ಕಾಡುವ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR)  ಎದುರಿಸಲು, ಹೆಚ್ಚಿನ ಮರಣ ಮತ್ತು ಸಾಮಾಜಿಕ ಆರ್ಥಿಕ ಹೊರೆಯನ್ನು ತಗ್ಗಿಸುವ ಬಗ್ಗೆ ಮೇಲ್ವಿಚಾರಣೆಯನ್ನು ಬಲಪಡಿಸಲು ನಿರ್ಣಯವನ್ನು ಅಂಗೀಕರಿಸಿದವು. 2021 ರಲ್ಲಿ ಜಾಗತಿಕವಾಗಿ ಅಂದಾಜು 4.71 ಮಿಲಿಯನ್ AMR ಸಂಬಂಧಿತ ಸಾವುಗಳು ಬ್ಯಾಕ್ಟೀರಿಯಾದ AMR ಗೆ ಸಂಬಂಧಿಸಿವೆ, ಅವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಕಂಡುಬಂದಿವೆ.

Advertisement

ವಿಶ್ವ ಆರೋಗ್ಯ ಸಂಸ್ಥೆ(WHO) ಸದಸ್ಯ ರಾಷ್ಟ್ರಗಳ ಪ್ರದೇಶದಲ್ಲಿ 280 ಮಿಲಿಯನ್‌ಗಿಂತಲೂ ಹೆಚ್ಚು  ಹೊಗೆರಹಿತ ತಂಬಾಕು ಬಳಕೆದಾರರು ಇದ್ದಾರೆ.  ಸುಮಾರು 11 ಮಿಲಿಯನ್ ಹದಿಹರೆಯದ ತಂಬಾಕು ಬಳಕೆದಾರರಿದ್ದಾರೆ. ಸದಸ್ಯ ರಾಷ್ಟ್ರಗಳು ಹೊಗೆರಹಿತ ತಂಬಾಕು, ಎಲೆಕ್ಟ್ರಾನಿಕ್ ಸಿಗರೇಟ್‌ಗಳು, ನಿಕೋಟಿನ್ ಪೌಚ್‌ಗಳು ಮತ್ತು ಅಡಿಕೆಗಳ ಬಳಕೆಯನ್ನು ನಿಯಂತ್ರಿಸಲು ಇದೇ ವೇಳೆ ಚರ್ಚೆ ನಡೆಯಿತು.  ಹೀಗಾಗಿ ಹೊಗೆರಹಿತ ತಂಬಾಕು,  ನಿಕೋಟಿನ್ ಉತ್ಪನ್ನಗಳು ಮತ್ತು ಅಡಿಕೆಗಳ ಬಳಕೆಯನ್ನು ಎದುರಿಸಲು, ಸದಸ್ಯ ರಾಷ್ಟ್ರಗಳು ಪ್ರಾದೇಶಿಕ  ಚೌಕಟ್ಟನ್ನು ಅನುಮೋದಿಸಿವೆ. ಈ ನಿಯಮದಲ್ಲಿ  ಉತ್ಪನ್ನಗಳ ತಯಾರಿಕೆ, ಮಾರಾಟ, ಜಾಹೀರಾತು, ಪ್ರಚಾರ ಮತ್ತು ಪ್ರಾಯೋಜಕತ್ವದ ಮೇಲೆ ಸಮಗ್ರ ನಿಷೇಧಗಳು ಸೇರಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಹವಾಮಾನ ಬಿಕ್ಕಟ್ಟನ್ನು ಕೂಡಾ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಗುರುತಿಸಿ, ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಆರೋಗ್ಯ ಮತ್ತು ಯೋಗಕ್ಷೇಮವನ್ನು ರಕ್ಷಿಸಲು ಎಲ್ಲಾ ಹಂತಗಳಲ್ಲಿ ತುರ್ತು ಮತ್ತು ಸಂಘಟಿತ ಕ್ರಮದ ಅಗತ್ಯವಿದೆ ಎಂದು ಗುರುತಿಸಿದ ಸದಸ್ಯ ರಾಷ್ಟ್ರಗಳು, ಸ್ಥಳೀಯ ಸಂದರ್ಭಗಳಿಗೆ ಅನುಗುಣವಾಗಿ ಸಾಧನಗಳನ್ನು ಬಳಸಿಕೊಂಡು ಎಲ್ಲರಿಗೂ, ವಿಶೇಷವಾಗಿ ಅತ್ಯಂತ ದುರ್ಬಲ ಜನಸಂಖ್ಯೆಗೆ, ಗುಣಮಟ್ಟದ ಆರೋಗ್ಯ ಸೇವೆಯನ್ನು ಖಚಿತಪಡಿಸಿಕೊಳ್ಳಲು ಒಪ್ಪಿಕೊಂಡವು. ಈ ಬಗ್ಗೆ WHO ತನ್ನ ವೆಬ್‌ಸೈಟ್‌ನಲ್ಲಿ ಸಭೆಯ ವರದಿ ಪ್ರಕಟಿಸಿದೆ.

ಈ ಹಿಂದೆ WHO ಸಭೆಯಲ್ಲಿ ಕೂಡಾ ಅಡಿಕೆಯ ಬಗ್ಗೆ ಪ್ರಸ್ತಾಪವಾಗಿತ್ತು. ಅಡಿಕೆ ಹಾನಿಕಾರಕ ಎಂದು ಹೇಳಿದ್ದು. ಹೀಗಾಗಿ ಶ್ರೀಲಂಕಾದಲ್ಲಿ ನಡೆಯುವ  WHO ಆಗ್ನೇಯ ಏಷ್ಯಾದ ಸಭೆಯಲ್ಲಿ ಕೂಡಾ ಈ ಬಗ್ಗೆ ಪ್ರಸ್ತಾಪದ ಬಗ್ಗೆ ನಿರೀಕ್ಷೆ ಇತ್ತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…

2 minutes ago

ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…

39 minutes ago

ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ

ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…

49 minutes ago

2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು

ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…

53 minutes ago

ಕುಕ್ಕುಟ ಸಂಜೀವಿನಿ ಯೋಜನೆ : ಉಚಿತ ಕೋಳಿ ಮರಿ ಶೇಡ್ ನಿರ್ಮಾಣಕ್ಕೆ ಆರ್ಥಿಕ ನೆರವು

ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…

58 minutes ago

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

18 hours ago