#Agriculture |ಸುಸ್ಥಿರ ಮತ್ತು ಸಮಗ್ರ ಕೃಷಿ ಅಭಿವೃದ್ಧಿ ಏಕೆ ಮತ್ತು ಹೇಗೆ…?

July 24, 2023
7:09 PM
ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆ ಕ್ಷೀಣಗೊಂಡು, ಅವಶ್ಯಕ ಪೋಷಕಾಂಶಗಳ ಕೊರತೆ ಮತ್ತು ಭೂಮಿಯ ಫಲವತ್ತತೆ ಕಡಿಮೆಯಾಗಿ, ಮೇಲ್ಪದರದ ಮಣ್ಣು ಗಡುಸಾಗುತ್ತಿದೆ. ಇದಕ್ಕಾಗಿ ಕೃಷಿ ಪದ್ದತಿಯಲ್ಲಿ ಬದಲಾವಣೆ ಅಗತ್ಯವಾಗಿ ಬೇಕಿದೆ.

ನಮ್ಮ ಬಹುತೇಕ ರೈತರು ಹೆಚ್ಚು ರಾಸಾಯನಿಕ ಗೊಬ್ಬರ #ChemicalFertilizers ಮತ್ತು ಔಷಧಿಗಳನ್ನು ಬಳಸುತ್ತಿರುದರಿಂದ, ಆಧುನಿಕ ಕಾಲದಲ್ಲಿ ಅಪರಿಮಿತ ಹಣ ಮಾಡುವ ಆಸೆಗೆ ಸಿಲುಕಿ ವಾಣಿಜ್ಯದಾಯಕ ಏಕಬೆಳೆಗಳನ್ನು ನಿರಂತರವಾಗಿ ಬೆಳೆಯುತ್ತಿರುವದರಿಂದ ಮಣ್ಣಿನ ರಚನೆ ಹದಗೆಟ್ಟು, ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿ #micro-organism ಗಳ ಸಂಖ್ಯೆ ಕ್ಷೀಣಗೊಂಡು, ಅವಶ್ಯಕ ಪೋಷಕಾಂಶಗಳ ಕೊರತೆ ಮತ್ತು ಭೂಮಿಯ ಫಲವತ್ತತೆ ಕಡಿಮೆಯಾಗಿ, ಮೇಲ್ಪದರದ ಮಣ್ಣು ಗಡುಸಾಗುತ್ತಿದೆ. ಮಣ್ಣಿನಲ್ಲಿ ನೀರು ಇಂಗದೇ, ಮಣ್ಣು #soil ನೀರನ್ನು ಹಿಡಿದಿಡಲಾಗದ ಸ್ಥಿತಿಯನ್ನು ತಲುಪಿದೆ.

Advertisement
Advertisement

ಇಂತಹ ಮಣ್ಣಿನಲ್ಲಿ ಬೆಳೆ ಮತ್ತು ನಿವ್ವಳ ಆದಾಯ ಅನಿಶ್ಚಿತತೆಯಿಂದ ಕೂಡಿರುವುದರಿಂದ ವ್ಯವಸಾಯದ ಖರ್ಚು ಅಧಿಕವಾಗಿ, ರೈತರು ಸಾಲಭಾಧೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಇದಕ್ಕಿರುವ ಸುಲಭ ಪರಿಹಾರ ಸಾವಯವ, ಸುಸ್ಥಿರ ಮತ್ತು ಸಮಗ್ರ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳುವುದು.

Advertisement

1. ಮಣ್ಣು ಮತ್ತು ನೀರನ್ನು ಸಂರಕ್ಷಣೆಗಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವದು. ಬದುಗಳನ್ನು ನಿರ್ಮಿಸುವದು, ಜಮೀನಿನ ಸುತ್ತ ಹಸಿರೆಲೆ ಗೊಬ್ಬರ ಮತ್ತು ಬಹುಪಯೋಗಿ ಮರಗಿಡಗಳನ್ನು ಬೆಳೆಸುವುದು, ಹೊದಿಕೆ ಬೆಳೆಗಳನ್ನು ಬೆಳೆಯುವುದು, ಸಾವಯವ ತ್ಯಾಜ್ಯವನ್ನು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಮೇಲ್ಪದರದಲ್ಲಿ ಹರಡುವುದು ಇತ್ಯಾದಿ.
ಕಾಡು ಜಾತಿಯ ಮರಗಳಾದ ತೇಗ, ಸಿಲ್ವರ್, ಮಹಾಘನಿ, ಹೆಬ್ಬೇವು, ಮುಂತಾದವುಗಳನ್ನು ಯಾವುದೇ ಕಾರಣಕ್ಕೂ ಬೆಳೆಯಬೇಡಿ.

2. ಮಣ್ಣಿನ ಫಲವತ್ತತೆ ಮತ್ತು ಸಾವಯವ ಇಂಗಾಲದ ಅಂಶವನ್ನು ಹೆಚ್ಚಿಸಲು ಕೊಟ್ಟಿಗೆ ಗೊಬ್ಬರ, ಹಸಿರು ಗೊಬ್ಬರ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರೆಹುಳು ಗೊಬ್ಬರ, ಜೈವಿಕ ಗೊಬ್ಬರ, ಎಣ್ಣೆಕಾಳುಗಳ ಹಿಂಡಿ, ಕುರಿ-ಕೋಳಿ ಗೊಬ್ಬರ ಇತ್ಯಾದಿಗಳನ್ನು ನಿಯಮಿತವಾಗಿ ಕೃಷಿಭೂಮಿಗೆ ಸೇರಿಸಬೇಕು.

Advertisement

3. ಬೆಳೆ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವುದು ಏಕಬೆಳೆಯ ಬದಲಿಗೆ ಬಹುಬೆಳೆ ಪದ್ದತಿ (ಅಡಿಕೆ, ತೆಂಗು, ಬಾಳೆ, ಅರಿಶಿನ, ಕೊಕೊ, ಸಾಂಬಾರು ಪದಾರ್ಥಗಳು) ಅಕಡಿ ಬೆಳೆ (ಶೇಂಗಾ, ತೊಗರಿ, ಅಲಸಂದೆ, ಹೆಸರು, ರಾಗಿ, ಸಿರಿಧಾನ್ಯ, ಹರಳು) ಅಂತರಬೆಳೆಗಳು (ಈರುಳ್ಳಿ, ಕೊತ್ತಂಬರಿ, ಬೆಂಡೆ, ತೊಗರಿ ಇತ್ಯಾದಿ) ಬದಲಿ ಬೆಳೆ, ಮೋಹಕ ಬೆಳೆ (ಹರಳು, ಚೆಂಡುಹೂ, ಬೆಂಡೆ), ಪರ್ಯಾಯ ಬೆಳೆ (ಕೊರಲೆ, ಕಡಲೆ, ಜೋಳ) ಇತ್ಯಾದಿ ಬೆಳೆಪದ್ದತಿಗಳ ಬಗ್ಗೆ ತಿಳಿದುಕೊಳ್ಳುವದು ಮತ್ತು ಸೂಕ್ತ ರೀತಿಯಲ್ಲಿ ಅಳವಡಿಸಿಕೊಳ್ಳವುದು.

4. ವ್ಯವಸ್ಥಿತ ಮತ್ತು ಸಮರ್ಪಕ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಳ್ಳುವುದು ಉತ್ತಮ ತಳಿ ಮತ್ತು ಬೀಜದ ಆಯ್ಕೆ, ತೇವಾಂಶಕ್ಕನುಗುಣವಾಗಿ ಬಿತ್ತನೆಯ ಸಮಯವನ್ನು ನಿರ್ಧರಿಸುವದು. ಮುಂಜಾಗ್ರತಾ ಕ್ರಮಗಳಿಗೆ ಹೆಚ್ಚು ಒತ್ತುಕೊಡುವುದು ಇತ್ಯಾದಿ.  ಬೀಜ ಸ್ವಾವಲಂಬನೆ : ಸಾಧ್ಯವಾದಷ್ಟು ಬಿತ್ತನೆ ಬೀಜಗಳನ್ನು ನೀವೇ ಸಂಗ್ರಹಿಸಿ ಇಟ್ಟುಕೊಳ್ಳುವುದನ್ನು ರೂಢಿಸಿಕೊಳ್ಳಿ.

Advertisement

5. ಕೃಷಿ ಅವಲಂಬಿತ ಜಾನುವಾರಗಳನ್ನು ಸಾಕುವದು.ಹಸು, ಕುರಿ, ಕೋಳಿ ಮುಂತಾದ ಜಾನುವಾರಗಳು ಕೃಷಿಗೆ ಪೂರಕ ಮತ್ತು ಹೆಚ್ಚುವರಿ ಆದಾಯ ತರುತ್ತವೆ.

6. ರಾಸಾಯನಿಕವಿಲ್ಲದೆ ಸಾವಯವ ಪದ್ದತಿಗಳಿಂದ ರೋಗ ಮತ್ತು ಕೀಟಗಳನ್ಬು ಹತೋಟಿ ಮಾಡುವದು

Advertisement

7. ಕೃಷಿಸಂಬಂಧಿತ ಉಪಕಸುಬುಗಳನ್ನು ಅಳವಡಿಸಿಕೊಳ್ಳುವುದು.

8. ರೈತ ಸಂಘಟನೆಗಳನ್ನು ಸೇರುವುದು, ತರಬೇತಿ ಮತ್ತು ಮೇಳಗಳಲ್ಲಿ ಭಾಗವಹಿಸುವುದರಿಂದ ಬಹಳಷ್ಟು ಮಾಹಿತಿ ದೊರೆಯುತ್ತದೆ ಮತ್ತು ಪರಸ್ಪರರ ಸಂಪರ್ಕದಿಂದ ಕೆಲಸಗಳು ಸುಲಲಿತವಾಗಿ ಸಾಗುತ್ತವೆ.

Advertisement

9. ಸಮುದಾಯಿಕವಾಗಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ, ಮಾರಾಟ ಮುಂತಾದ ತಾವು ಬೆಳೆದ ಪದಾರ್ಥಗಳಿಗೆ ದುಪ್ಪಟ್ಟು ಆದಾಯ ಗಳಿಸುವುದು. ಇದಕ್ಕಾಗಿ ಸರ್ಕಾರದಿಂದ ದೊರೆಯುವ ಪ್ರೋತ್ಸಾಹಧನವನ್ನು ಸಮರ್ಪಕವಾಗಿ ಬಳಸಿ.

(Source)

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ : ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?
May 14, 2024
12:42 PM
by: The Rural Mirror ಸುದ್ದಿಜಾಲ
ಇದು ಮಾರಣ್ಣನ ಕೋಟೆ ಕಣೋ…… : ಸಾರ್ವಜನಿಕರೇ ಎಚ್ಚರ, ತೀರಾ ಅಧೋಗತಿಗೆ ಇಳಿಯುತ್ತಿದೆ ನಮ್ಮ ಸಮಾಜ
May 14, 2024
12:26 PM
by: The Rural Mirror ಸುದ್ದಿಜಾಲ
ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ : ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ
May 14, 2024
12:08 PM
by: The Rural Mirror ಸುದ್ದಿಜಾಲ
ಸಕ್ಕರೆ ತಿನ್ನುವುದಕ್ಕಿಂತ ಶುಗರ್ ಫ್ರೀ ಸೇವನೆ ಹೆಚ್ಚು ಅಪಾಯಕಾರಿ, 92 ವಿಧದ ಅಪಾಯಗಳಿವೆ
May 14, 2024
11:56 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror