Advertisement
MIRROR FOCUS

ಅಡಿಕೆ ಉತ್ಪಾದನೆ ಕಡಿಮೆಯಾದರೂ ಮಾರುಕಟ್ಟೆ ನಿರೀಕ್ಷೆಯ ಮಟ್ಟಕ್ಕೆ ಏಕೆ ಏರಿಕೆಯಾಗುತ್ತಿಲ್ಲ? ಅಡಿಕೆ ಮಾರುಕಟ್ಟೆಯ ಸ್ಥಿರತೆ ಕಾಪಾಡುವುದು ಹೇಗೆ..? ಯಾರು..?

Share

ಅಡಿಕೆ ಉತ್ಪಾದನೆ ಕಡಿಮೆಯಾದರೂ ಮಾರುಕಟ್ಟೆ ನಿರೀಕ್ಷೆಯ ಮಟ್ಟಕ್ಕೆ ಏಕೆ ಏರಿಕೆಯಾಗುತ್ತಿಲ್ಲ? ಅಡಿಕೆ ಬೆಳೆಗಾರರಿಗೆ ಸಾಮಾನ್ಯವಾಗಿ ಎದುರಾಗುವ ಪ್ರಶ್ನೆ. ಹೀಗಿರುವಾಗ ಅಡಿಕೆ ಧಾರಣೆ, ಅಡಿಕೆ ಮಾರುಕಟ್ಟೆ ಸ್ಥಿರತೆ ಮಾಡುವವರು ಯಾರು..? . ಫಸಲು ಕಡಿಮೆಯಾದರೆ ಬೆಲೆ ಏರಬೇಕು ಎಂಬ ನಿರೀಕ್ಷೆ ಇರುತ್ತದೆ. ಆದರೆ ಮಾರುಕಟ್ಟೆ ಕೆಲವೊಮ್ಮೆ ಆ ರೀತಿಯಲ್ಲಿ ನಡೆಯುವುದಿಲ್ಲ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆ ಸ್ಥಿರತೆ ತರಬೇಕಾದ್ದು ಯಾರು..?

Advertisement

ಫಸಲು ಕಡಿಮೆಯಾದರೆ ಬೆಲೆ ಏರಬೇಕು ಎಂಬ ನಿರೀಕ್ಷೆ ಇರುತ್ತದೆ. ಆದರೆ ಮಾರುಕಟ್ಟೆ ಕೆಲವೊಮ್ಮೆ ಆ ರೀತಿಯಲ್ಲಿ ನಡೆಯುವುದಿಲ್ಲ. ಇದಕ್ಕೆ ಕಾರಣಗಳು ಹಲವು..

  1. ಹಳೆಯ ಸ್ಟಾಕ್ (ಹಿಂದಿನ ವರ್ಷದ ಸಂಗ್ರಹ) ಇರುವುದರಿಂದ ಕೊರತೆ ತಕ್ಷಣ ಕಾಣುವುದಿಲ್ಲ.  ವ್ಯಾಪಾರಿಗಳು, ದಲ್ಲಾಳಿಗಳು, ಪಾನ್‌ಮಸಾಲಾ ಕಂಪನಿಗಳು ಹಿಂದಿನ ವರ್ಷಗಳ ಬಹಳಷ್ಟು ಅಡಿಕೆ ಸಂಗ್ರಹಿಸಿಕೊಂಡಿರುತ್ತಾರೆ. ಹೊಸ ಫಸಲು ಕಡಿಮೆಯಾದರೂ, ಅವರು ಹಳೆಯ ಅಡಿಕೆಯನ್ನು ನಿಧಾನವಾಗಿ ಮಾರುಕಟ್ಟೆಗೆ ಬಿಡುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ಅಡಿಕೆ ಕೊರತೆ ತಕ್ಷಣ ಕಾಣಿಸುವುದಿಲ್ಲ. ಹೀಗಾಗಿ ಬೆಲೆ ಏಕಾಏಕಿ ಏರುವುದಿಲ್ಲ.
  2. ಅಡಿಕೆ ಬೇಡಿಕೆ ತಕ್ಷಣ ಹೆಚ್ಚಾಗುವುದಿಲ್ಲ, ಅಡಿಕೆ ಬಳಕೆ ಒಂದು ಮಟ್ಟಕ್ಕೆ ಮಾತ್ರ ಸೀಮಿತವಾಗಿದೆ. ಫಸಲು ಕಡಿಮೆಯಾದರೆ ಜನರು ಹೆಚ್ಚು ಅಡಿಕೆ ಬಳಕೆ ಮಾಡುವುದಿಲ್ಲ. ಪಾನ್‌ಮಸಾಲಾ ಕಂಪನಿಗಳು ಬೆಲೆ ಏರಿದಾಗ ಅಡಿಕೆ ಬಳಕೆಯನ್ನು ಕಡಿಮೆ ಮಾಡುತ್ತಾರೆ ಅಥವಾ ಮಿಶ್ರಣದಲ್ಲಿ ಬದಲಾವಣೆ ಮಾಡುತ್ತಾರೆ. ಇದರಿಂದಾಗಿ ಫಸಲು ಕಡಿಮೆಯಾದರೂ ಬೇಡಿಕೆ ಹೆಚ್ಚಾಗುವುದಿಲ್ಲ.
  3. ಆಮದು ಮತ್ತು ಅಕ್ರಮವಾಗಿ ಅಡಿಕೆ ಬರುವುದರಿಂದ ದೇಶೀಯ ಉತ್ಪಾದನೆ ಕಡಿಮೆಯಾದ ವರ್ಷಗಳಲ್ಲಿಯೂ ಸಮಸ್ಯೆ ಆಗಿಲ್ಲ. ಕಾನೂನುಬದ್ಧ ಆಮದು ಕೂಡಾ ನಡೆಯುತ್ತದೆ. ನೇಪಾಳ, ಮ್ಯಾನ್ಮಾರ್, ಬಾಂಗ್ಲಾದೇಶ ಮಾರ್ಗದಿಂದ ಅಕ್ರಮ ಅಡಿಕೆ ಸಾಗಣೆ. ಈ ಅಡಿಕೆಯನ್ನು ಮಿಶ್ರಣಕ್ಕಾಗಿ ಬಳಸುತ್ತಾರೆ, ಮಾರುಕಟ್ಟೆ ಬೆಲೆಯನ್ನು ಕುಗ್ಗಿಸುತ್ತದೆ. ಇದರಿಂದ  ದೇಶೀಯ  ಕೊರತೆ ಪರಿಣಾಮ ಕಾಣುವುದಿಲ್ಲ. ಮಾರುಕಟ್ಟೆ ಏರಿಕೆ ಆಗದು.
  4. ಗುಣಮಟ್ಟದ ಸಮಸ್ಯೆ ಕೂಡಾ ಫಸಲು ಕಡಿಮೆಯಾದ ವರ್ಷಗಳಲ್ಲಿ ಸಾಮಾನ್ಯವಾಗಿ ಕಂಡುಬಂದಿದೆ. ಅಧಿಕ ಮಳೆ, ಕೊಳೆ ರೋಗ, ಎಲೆ ಚುಕ್ಕಿ ರೋಗ, ಹಳದಿ ಎಲೆ ರೋಗ ಗಳಿಂದಾಗಿ ಅಡಿಕೆಯ ಗುಣಮಟ್ಟ ಕಡಿಮೆಯಾಗುತ್ತದೆ.  ವ್ಯಾಪಾರಿಗಳು ಉತ್ತಮ ಗುಣಮಟ್ಟದ ಅಡಿಕೆಗೆ ಮಾತ್ರ ಉತ್ತಮ ದರ ಕೊಡುತ್ತಾರೆ. ಕಡಿಮೆ ಗುಣಮಟ್ಟದ ಅಡಿಕೆಗೆ ಕಡಿಮೆ ದರ ಸಿಗುತ್ತದೆ. ಇದರಿಂದ ಅಡಿಕೆ ಪ್ರಮಾಣ ಕಡಿಮೆ ಆದರೂ ಸರಾಸರಿ ಬೆಲೆ ಕಡಿಮೆಯಾಗುತ್ತದೆ.
  5. ಮಾರುಕಟ್ಟೆ ನಿಯಂತ್ರಣ ರೈತರ ಕೈಯಲ್ಲಿ ಇಲ್ಲ ಹೀಗಾಗಿ ದೊಡ್ಡ ಸಮಸ್ಯೆ. ದೊಡ್ಡ ವ್ಯಾಪಾರಿಗಳು ಮತ್ತು ಪಾನ್‌ಮಸಾಲಾ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ ಮತ್ತು ಖರೀದಿ ಸಮಯವನ್ನು ನಿಯಂತ್ರಿಸುತ್ತಾರೆ. ರೈತರು ತಕ್ಷಣ ಹಣದ ಅಗತ್ಯದಿಂದ ಅಡಿಕೆ ಮಾರಾಟಕ್ಕೆ ಒತ್ತಡದಲ್ಲಿರುತ್ತಾರೆ. ಇದರಿಂದಾಗಿ ಫಸಲು ಕಡಿಮೆಯಾದರೂ ಬೆಲೆ ನಿಯಂತ್ರಣ ಖರೀದಿದಾರರ ಕೈಯಲ್ಲಿರುತ್ತದೆ.
  6. ರೈತರು ಒಗ್ಗಟ್ಟಾಗಿ ಮಾರಾಟ ಮಾಡದಿರುವುದು ಕೂಡಾ ಇನ್ನೊಂದು ಕಾರಣ.  ರೈತರು ಪ್ರತ್ಯೇಕವಾಗಿ ಮಾರಾಟ ಮಾಡುತ್ತಾರೆ. ಕನಿಷ್ಠ ಬೆಂಬಲ ಬೆಲೆ (MSP) ಇಲ್ಲ. ಬಫರ್ ಸ್ಟಾಕ್ ವ್ಯವಸ್ಥೆ ಇಲ್ಲ. ಹೀಗಾಗಿ ಫಸಲು ಕಡಿಮೆಯಾದರೂ ಅದನ್ನು ಮಾರುಕಟ್ಟೆಯಲ್ಲಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
  7. ರೈತರ ನಿರೀಕ್ಷೆ ಮತ್ತು ಮಾರುಕಟ್ಟೆ ವಾಸ್ತವದಲ್ಲಿ “ಫಸಲು ಕಡಿಮೆಯಾದರೆ ಬೆಲೆ ಏರಬೇಕು, ಏರುತ್ತದೆ” ಎಂದು ಹೇಳುತ್ತಾರೆ. ಆದರೆ ಮಾರುಕಟ್ಟೆಯ ವಾಸ್ತವದಲ್ಲಿ ಲಭ್ಯವಿರುವ ಒಟ್ಟು ಅಡಿಕೆ + ಆಮದು + ನಿಜವಾದ ಬೇಡಿಕೆ + ವ್ಯಾಪಾರಿಗಳ ತಂತ್ರ ಇದರಲ್ಲಿ ಯಾವುದಾದರೂ ಒಂದು ಸಮತೋಲನ ಸಾಧಿಸಿದರೆ ಬೆಲೆ ಏರಿಕೆಯಾಗುವುದಿಲ್ಲ.

ಅಡಿಕೆ ಬೆಲೆ ಫಸಲು ಕಡಿಮೆಯಾದಾಗ ಅಲ್ಲ, ಮಾರುಕಟ್ಟೆಯಲ್ಲಿ ಲಭ್ಯವಿರುವ ಒಟ್ಟು ಅಡಿಕೆ ನಿಜವಾದ ಬೇಡಿಕೆಗೆ ಕಡಿಮೆಯಾದಾಗ ಮಾತ್ರ ಏರುತ್ತದೆ.ಇತ್ತೀಚಿನ ವರ್ಷಗಳಲ್ಲಿ: ಫಸಲು ಇಳಿಕೆ, ಆದರೆ ಹಳೆಯ ಸ್ಟಾಕ್ + ಆಮದು + ನಿಯಂತ್ರಿತ ಖರೀದಿ ಹೆಚ್ಚಳ ಇದೆ. ಆದ್ದರಿಂದ ನಿರೀಕ್ಷಿತ ಬೆಲೆ ಏರಿಕೆ ಕಂಡುಬರುತ್ತಿಲ್ಲ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

ಮಾರುಕಟ್ಟೆ ಸುಧಾರಣೆಗೆ ಏನು ಮಾಡಬೇಕು?

  • ಅಕ್ರಮ ಅಡಿಕೆ ಆಮದು ತಡೆಯುವುದು
  • ಕ್ಯಾಂಪ್ಕೋ ಮಾದರಿಯ ಸಹಕಾರಿ ಸಂಗ್ರಹ ವ್ಯವಸ್ಥೆ ಬಲಪಡಿಸುವುದು
  • ಗುಣಮಟ್ಟ ಆಧಾರಿತ ಬ್ರ್ಯಾಂಡಿಂಗ್ (ಮಂಗಳೂರು ಚಾಲಿ, MAN ಗ್ರೇಡ್)
  • ಆತುರದ ಮಾರಾಟ ತಪ್ಪಿಸಿ ಹಂತ ಹಂತವಾಗಿ ಮಾರಾಟ
  • ಅಡಿಕೆ ಮತ್ತು ಮೌಲ್ಯವರ್ಧಿತ ಅಡಿಕೆ ಉತ್ಪನ್ನಗಳ ರಫ್ತು ಉತ್ತೇಜನ.

ಕ್ಯಾಂಪ್ಕೊ ಹಾಗೂ ಸಹಕಾರಿ ಸಂಸ್ಥೆಗಳ ಪಾತ್ರ ದೊಡ್ಡದು :  ಕ್ಯಾಂಪ್ಕೋ (Central Arecanut and Cocoa Marketing and Processing Co-operative Limited) ಅನ್ನು ಅಡಿಕೆ ಮಾರುಕಟ್ಟೆಯ ಬೆನ್ನೆಲುಬು ಹಾಗೂ ಮಾರುಕಟ್ಟೆ ಸ್ಥಿರತೆ ಸಂಸ್ಥೆ ಎಂದು ಕರೆಯಲಾಗುತ್ತದೆ. ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣ ಭಾರತದ ಅಡಿಕೆ ಬೆಳೆಗಾರರಿಗೆ ಕ್ಯಾಂಪ್ಕೋ ನೀಡಿರುವ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಸದ್ಯ  ಕ್ಯಾಂಪ್ಕೊ ಅಡಿಕೆ ಮಾರುಕಟ್ಟೆಯನ್ನು ಏಕೆ ಮತ್ತು ಹೇಗೆ ಸ್ಥಿರಗೊಳಿಸುತ್ತದೆ?.…… ಮುಂದೆ ಓದಿ……

 ಬೆಲೆ ಕುಸಿತದ ಹಿನ್ನೆಲೆ ಮತ್ತು ಕ್ಯಾಂಪ್ಕೊ ಸ್ಥಾಪನೆಯ ಉದ್ದೇಶ : 1970 ರ ದಶಕದ ಆರಂಭದಲ್ಲಿ ಅಡಿಕೆ ದರಗಳು ತೀವ್ರವಾಗಿ ಕುಸಿದಾಗ, ಬೆಳೆಗಾರರು ಭಾರೀ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಆ ಸಮಯದಲ್ಲಿ ಖಾಸಗಿ ವರ್ತಕರು ಮತ್ತು ಮಧ್ಯವರ್ತಿಗಳು ಕಡಿಮೆ ದರಕ್ಕೆ ಅಡಿಕೆ ಖರೀದಿ ಮಾಡಿ ಲಾಭ ಪಡೆಯುತ್ತಿದ್ದರು. ಈ ಅನ್ಯಾಯವನ್ನು ತಡೆಗಟ್ಟಲು ಮತ್ತು ಬೆಳೆಗಾರರ ಹಿತವನ್ನು ಕಾಪಾಡಲು 1973ರಲ್ಲಿ ವಾರಣಾಸಿ ಸುಬ್ರಾಯ ಭಟ್ಟರಿಂದ ಕ್ಯಾಂಪ್ಕೊ ಸ್ಥಾಪನೆಯಾಯಿತು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಹಾಗೂ ಎಸ್‌ಕೆಸಿಎಂಎಸ್‌ ಮೊದಲಾದ ಸಂಸ್ಥೆಗಳು ಅಂದು ನೆರವಾದವು. ಇವರೆಲ್ಲಾ ಮೂಲ ಉದ್ದೇಶವೇ ಅಡಿಕೆ ಬೆಳೆಗಾರರಿಗೆ ಕನಿಷ್ಠ ನ್ಯಾಯಸಮ್ಮತ ದರ ಒದಗಿಸುವುದು. ಇದಕ್ಕಾಗಿ ಸುಬ್ರಾಯ ಭಟ್ಟರು ಹಾಗೂ ಅವರ ಜೊತೆಗಾರರು ಹಲವು ಕಾಲ ಓಡಾಟ ಮಾಡಿದ್ದರು.

ಬೆಲೆ ಏರಿಳಿತಗಳನ್ನು ನಿಯಂತ್ರಿಸುವ ಪ್ರಮುಖ ಪಾತ್ರ :  ಅಡಿಕೆ ಮಾರುಕಟ್ಟೆ ವರ್ಷದಿಂದ ವರ್ಷಕ್ಕೆ ಬೇಡಿಕೆ–ಸರಬರಾಜಿನ ಆಧಾರದಲ್ಲಿ ಅತಿಯಾಗಿ ಏರುಪೇರಾಗುತ್ತದೆ. ಕೊಯ್ಲು ಕಾಲದಲ್ಲಿ (ನವೆಂಬರ್–ಡಿಸೆಂಬರ್) ಅಡಿಕೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬಂದಾಗ ದರ ಕುಸಿಯುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕ್ಯಾಂಪ್ಕೊ ಮಾರುಕಟ್ಟೆಗೆ ಪ್ರವೇಶಿಸಿ ಅಡಿಕೆ ಖರೀದಿ ಹೆಚ್ಚಿಸುವ ಮೂಲಕ ದರ ಕುಸಿತವನ್ನು ತಡೆಗಟ್ಟುತ್ತದೆ. ದರಗಳು ಅತಿಯಾಗಿ ಏರಿದಾಗ, ಸಂಗ್ರಹಿತ ಅಡಿಕೆಯನ್ನು ಹಂತ ಹಂತವಾಗಿ ಮಾರಾಟ ಮಾಡಿ ಮಾರುಕಟ್ಟೆಗೆ ಸಮತೋಲನ ತರುತ್ತದೆ. ಈ ಕ್ರಮದಿಂದ ಮಾರುಕಟ್ಟೆಯಲ್ಲಿ ತೀವ್ರ ಅಸ್ಥಿರತೆ ತಪ್ಪುತ್ತದೆ.

ಮಧ್ಯವರ್ತಿಗಳ ಶೋಷಣೆಯಿಂದ ಬೆಳೆಗಾರರ ರಕ್ಷಣೆ:  ಕ್ಯಾಂಪ್ಕೊ ಸ್ಥಾಪನೆಗೆ ಮೊದಲು ಬಹುತೇಕ ಬೆಳೆಗಾರರು ಸ್ಥಳೀಯ ದಲ್ಲಾಳಿಗಳು ಮತ್ತು ಖಾಸಗಿ ವ್ಯಾಪಾರಿಗಳ ಮೇಲೆ ಅವಲಂಬಿತರಾಗಿದ್ದರು. ಇವರು ಅಡಿಕೆಯ ಗುಣಮಟ್ಟದ ನೆಪದಲ್ಲಿ ಕಡಿಮೆ ದರ ನಿಗದಿ ಮಾಡುತ್ತಿದ್ದರು. ಕ್ಯಾಂಪ್ಕೊ ನೇರ ಖರೀದಿ ವ್ಯವಸ್ಥೆಯಿಂದ ಮಧ್ಯವರ್ತಿಗಳ ಹಿಡಿತ ದುರ್ಬಲವಾಯಿತು. ಬೆಳೆಗಾರರಿಗೆ ದರದಲ್ಲಿ ಪಾರದರ್ಶಕತೆ ದೊರಕಿತು.

ವ್ಯಾಪಕ ಖರೀದಿ ಮತ್ತು ಮಾರಾಟ ಜಾಲ : ಕ್ಯಾಂಪ್ಕೊ ಕರ್ನಾಟಕ, ಕೇರಳ ಮತ್ತು ದೇಶದ ವಿವಿಧ ಭಾಗಗಳಲ್ಲಿ ಖರೀದಿ ಕೇಂದ್ರಗಳು, ಮಾರಾಟ ಡಿಪೋಗಳು, ಗೋದಾಮುಗಳನ್ನು ನಿರ್ವಹಿಸುತ್ತದೆ. ಇದರಿಂದ ಅಡಿಕೆ ಒಂದು ಮಾರುಕಟ್ಟೆಗೆ ಮಾತ್ರ ಸೀಮಿತವಾಗದೆ ದೇಶಾದ್ಯಂತ ಸಮಾನವಾಗಿ ಹರಡುತ್ತದೆ, ಇದು ದರ ಸ್ಥಿರತೆಗೆ ಮುಖ್ಯ ಕಾರಣ.

ಸಂಗ್ರಹಣೆ, ಪ್ರೊಸೆಸಿಂಗ್ ಮತ್ತು ಮೌಲ್ಯವರ್ಧನೆ : ಕ್ಯಾಂಪ್ಕೊ ಕೇವಲ ಖರೀದಿ–ಮಾರಾಟ ಮಾತ್ರವಲ್ಲದೇ, ಸರಿಯಾದ ಸಂಗ್ರಹಣೆ, ಗ್ರೇಡಿಂಗ್, ಪ್ರೊಸೆಸಿಂಗ್ ಮಾಡುವ ಮೂಲಕ ಗುಣಮಟ್ಟ ಕಾಪಾಡುತ್ತದೆ. ಇದರಿಂದ ಅಡಿಕೆ ದೀರ್ಘಕಾಲ ಮಾರಾಟಕ್ಕೆ ಯೋಗ್ಯವಾಗಿದ್ದು, ತಕ್ಷಣದ ಒತ್ತಡದ ಮಾರಾಟದಿಂದ ದರ ಕುಸಿಯುವುದನ್ನು ತಡೆಯುತ್ತದೆ.…… ಮುಂದೆ ಓದಿ……

ಸಹಕಾರ ತತ್ವ ಮತ್ತು ಸಾಮೂಹಿಕ ಶಕ್ತಿ : ಕ್ಯಾಂಪ್ಕೊ ಒಂದು ಸಹಕಾರ ಸಂಘವಾಗಿರುವುದರಿಂದ, ಅದರ ಮಾಲೀಕರು ಬೆಳೆಗಾರರು. ಬೆಳೆಗಾರರು ಸದಸ್ಯರಾಗಿದ್ದು ಲಾಭವೂ ಅವರಿಗೇ ಮರಳುತ್ತದೆ.  ಒಟ್ಟುಗೂಡಿದ ಶಕ್ತಿಯಿಂದ ಸರ್ಕಾರದ ಮುಂದೆ ಮತ್ತು ಮಾರುಕಟ್ಟೆಯಲ್ಲಿ ಬೆಳೆಗಾರರ ಧ್ವನಿ ಬಲವಾಗುತ್ತದೆ.

ದರ ಕುಸಿತದ ಸಂದರ್ಭದಲ್ಲಿ ಬೆಳೆಗಾರರಿಗೆ ರಕ್ಷಣೆ ಆಗಿ ನಿಲ್ಲುವುದರಿಂದ, ಮಧ್ಯವರ್ತಿಗಳ ಶೋಷಣೆಯನ್ನು ಕಡಿಮೆ ಮಾಡುತ್ತದೆ. ಸಂಗ್ರಹಣೆ, ಪ್ರೊಸೆಸಿಂಗ್ ಮತ್ತು ಮೌಲ್ಯವರ್ಧನೆಯಿಂದ, ಸಹಕಾರ ತತ್ವದ ಮೂಲಕ ಬೆಳೆಗಾರರಿಗೆ ವಿಶ್ವಾಸ ನೀಡುವುದರಿಂದ ಕ್ಯಾಂಪ್ಕೊ ಅಡಿಕೆ ಮಾರುಕಟ್ಟೆಯ ಸ್ಥಿರೀಕಾರಕವಾಗಿದೆ. ಅಡಿಕೆ ಮಾರುಕಟ್ಟೆಯಲ್ಲಿ ಕ್ಯಾಂಪ್ಕೊ ಇಲ್ಲದಿದ್ದರೆ ದರಗಳ ಅಸ್ಥಿರತೆ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂಬುದು ಬಹುತೇಕ ಬೆಳೆಗಾರರ ಅನುಭವ. ಆದರೆ ಈಚೆಗೆ ಕ್ಯಾಂಪ್ಕೊ ದರ ಇಳಿಕೆ ಮಾಡುವುದು, ಇದು ಮೊದಲೇ ವ್ಯಾಪಾರಿಗಳಿಗೂ ತಿಳಿಯುವುದು ಸಹಕಾರಿ ತತ್ತ್ವ ಹಾಗೂ ಬೆಳೆಗಾರರ ನಡುವೆ ಚರ್ಚೆಗೂ ಕಾರಣವಾಗುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅರುಣ್‌ ಕುಮಾರ್ ಕಾಂಚೋಡು

ಅರುಣ್‌ ಕುಮಾರ್‌ ಕಾಂಚೋಡು ಅವರು ಸಸ್ಯಶಾಸ್ತ್ರ ವಿಭಾಗದಲ್ಲಿ ಎಂಎಸ್ಸಿ ಪದವೀಧರರು. ಸದ್ಯ ಕೃಷಿ ಮಾಡುತ್ತಿದ್ದಾರೆ. ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳಿಗೆ ಆದ್ಯತೆ ನೀಡುವ ಯುವ ಕೃಷಿಕ. Arun Kumar Kanchodu is an MSc graduate in Botany. He is currently engaged in farming. He is a young farmer who prefers scientific methods in farming.

Published by
ಅರುಣ್‌ ಕುಮಾರ್ ಕಾಂಚೋಡು

Recent Posts

ಹವಾಮಾನ ವರದಿ | 19-02-2026 | ಕರಾವಳಿ–ಮಲೆನಾಡಿನಲ್ಲಿ ಫೆ.21 ರಿಂದ ಮಳೆ ಸಾಧ್ಯತೆ ಹೆಚ್ಚಳ

ಬಂಗಾಳಕೊಲ್ಲಿಯಲ್ಲಿ ಉಂಟಾಗುವ ತಿರುವಿಕೆಯ ಪರಿಣಾಮವಾಗಿ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ…

2 hours ago

ಬೆಂಗಳೂರು ಕಸ ವಿಲೇವಾರಿ ತಡೆದರೆ ಕಠಿಣ ಕ್ರಮ : ಎಸ್ಮಾ ಕಾಯ್ದೆ ಜಾರಿ ಎಚ್ಚರಿಕೆ

ಬೆಂಗಳೂರು ಕಸ ವಿಲೇವಾರಿಗೆ ಅಡ್ಡಿಪಡಿಸುವವರ ವಿರುದ್ಧ ಎಸ್ಮಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಡಿ.ಕೆ.…

6 hours ago

ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ – WHOಗೆ ಅಧಿಕೃತ ಮನವಿ ಮಾಡಿದ ಉತ್ತರ ಕನ್ನಡ ಸಂಸದ

ಅಡಿಕೆಯನ್ನು Group-1 ಕ್ಯಾನ್ಸರ್ ಕಾರಕ ಪಟ್ಟಿಯಿಂದ ಮರುಪರಿಶೀಲನೆ ಮಾಡಲು WHO ಮತ್ತು IARCಗೆ…

7 hours ago

ಕ್ಯಾಂಪ್ಕೊಗೆ ಸಂಸದ ಬ್ರಿಜೇಶ್ ಚೌಟ ಭೇಟಿ, ಅಡಿಕೆ ಸಮಸ್ಯೆಗಳ ಕುರಿತು ಚರ್ಚೆ

ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಸಂಸದ ಬ್ರಿಜೇಶ್ ಚೌಟರೊಂದಿಗೆ ಅಡಿಕೆ ಬೆಳೆಗಾರರ ಸಮಸ್ಯೆಗಳು,…

7 hours ago

ಹವಾಮಾನ ವರದಿ | 18-02-2026 | ಕರ್ನಾಟಕದಲ್ಲಿ ಬಿಸಿಲಿನ ನಡುವೆ ತುಂತುರು ಮಳೆ ಸಾಧ್ಯತೆ

19.02.2026 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

15 hours ago

ಅಡಿಕೆ ವೈಜ್ಞಾನಿಕ ವಿಶ್ಲೇಷಣೆಯ ಪುಸ್ತಕ “ARECANUT” ಬಿಡುಗಡೆ

 ಮಂಗಳೂರು ಕ್ಯಾಂಪ್ಕೊ ಕೇಂದ್ರ ಕಚೇರಿಯಲ್ಲಿ ಅಡಿಕೆ ಕುರಿತಾದ ವೈಜ್ಞಾನಿಕ ಸಂಶೋಧನಾ ಪುಸ್ತಕ"ARECANUT" ಬಿಡುಗಡೆ…

16 hours ago