The Rural Mirror ಫಾಲೋಅಪ್

ಮಲೆನಾಡು ತಪ್ಪಲಲ್ಲಿ ಮೇಘಸ್ಫೋಟ- ಭಾರೀ ಮಳೆ ಯಾಕಿರಬಹುದು ?| ವಾಯವ್ಯ ಮೋಡಗಳು ಏನು ಮಾಡುತ್ತವೆ…? | ಮೋಡಗಳ ವಿಸ್ತರಣೆಗೆ ಅವಕಾಶ ಏಕಿಲ್ಲ…? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಮಲೆನಾಡು ತಪ್ಪಲು ಪ್ರದೇಶದಲ್ಲಿ ಭಾರೀ ಮಳೆ. ಮೇಘಸ್ಫೋಟ-ಭಾರೀ ಮಳೆ.ಈ ಕಾರಣದಿಂದ ಭೂಕುಸಿತ. ಇದೆಲ್ಲಾ ಒಂದಕ್ಕೊಂದು ಲಿಂಕ್‌ ಆಗುತ್ತಿವೆ. ಇದಕ್ಕೂ ಮೊದಲು ಭೂಕಂಪನ. ಒಟ್ಟಾರೆ ತಪ್ಪಲು ಪ್ರದೇಶ ಜನರಿಗೆ ಭಯ. ಹಾಗಿದ್ದರೆ ಏನು ಕಾರಣ? ಮೋಡಗಳ ಚಲನೆ ಏನು ? ಈ ಬಗ್ಗೆ ಹವಾಮಾನ ವೀಕ್ಷಣೆ ಮಾಡುವ ಹಾಗೂ ವಿಶ್ಲೇಷಣೆ ಮಾಡುವ ಕೃಷಿಕರುಗಳಾ ಸಾಯಿಶೇಖರ್‌ ಕರಿಕಳ ಹಾಗೂ ರಘುರಾಮ ಕಂಪದಕೋಡಿ ಹೀಗೆ ಅಂದಾಜಿಸಿದ್ದಾರೆ….

ಈ ಸಲ ನೈರುತ್ಯ ಮುಂಗಾರು ಅಂತ ಹೆಸರು ಮಾತ್ರ. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಬೆರಳೆಣಿಕೆಯಷ್ಟು ದಿನಗಳಲ್ಲಿ ಮಾತ್ರ ಮೋಡ ನೈರುತ್ಯದಿಂದ ಈಶಾನ್ಯಕ್ಕೆ ಸಂಚರಿಸಿದೆ. ಹೆಚ್ಚಿನ ದಿನಗಳಲ್ಲಿ ವಾಯವ್ಯದಿಂದ ಆಗ್ನೇಯಕ್ಕೆ ಚಲಿಸಿದೆ.ಈಗಿನ  ಪರಿಸ್ಥಿತಿಗೆ ಈ ವೈಪರೀತ್ಯ ಕಾರಣ ಇರಬಹುದಾದರೂ, ವಾಯವ್ಯ ಮೋಡಗಳಿಂದ ನಿರೀಕ್ಷೆಗಿಂತ ಕಡಿಮೆ ಮಳೆಯಾಗುತ್ತಿದೆ. ಈ ಮೋಡಗಳು ಘಟ್ಟದ ತಪ್ಪಲ ಭಾಗಕ್ಕೆ ತಲುಪಿದಾಗ ಒತ್ತಡ ಹೆಚ್ಚಾಗಿ ಮಳೆಯಾಗುತ್ತಿದೆ. ಸುರಿಯುತ್ತಿದೆ.

Advertisement

ಮೊದಲು ಮುಂಗಾರು ದುರ್ಬಲಗೊಂಡಾಗ ಮೋಡಗಳು ಪಶ್ಚಿಮದಿಂದ ಪೂರ್ವಕ್ಕೆ ಚಲಿಸುತ್ತಿತ್ತು. ಆಗ ಸಾಮಾನ್ಯವಾಗಿ ಮಡಿಕೇರಿಯಿಂದ ಧರ್ಮಸ್ಥಳದ ತನಕ ವಿಶಾಲತೆ ಸಿಕುತ್ತಿತ್ತು. ಪೂರ್ವದಲ್ಲಿ ಶೇಖರಣೆಗೊಂಡ ಮೋಡಗಳ ಒತ್ತಡದಿಂದ ಗಾಳಿ ಬೀಸುತ್ತಿತ್ತು. ಮೋಡಗಳು ಚದುರಿ ಮಳೆ ಹಂಚಿಕೆಯಾಗುತ್ತಿತ್ತು. ವಾಯವ್ಯ ಮೋಡಗಳಿಗೆ ವಿಸ್ತರಣೆಗೆ ಅವಕಾಶ ಕಡಿಮೆಯಾದಂತಿದೆ. ಇನ್ನು ಮುಂದೆ ಸರಿಯಾಗಲಿ ಎಂದು ನಂಬೋಣ.

ಇದರ ಜೊತೆಗೆ  ಶಿರಾಡಿ ಘಾಟಿಯ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಬೃಹತ್ ಯೋಜನೆಗಳ ಫಲವಾಗಿ ಅರಣ್ಯ ಕಡಿಮೆಯಾಗಿದೆ. ಉಷ್ಣಾಂಶ ಏರಿಕೆಯಿಂದ ಬಿಸಿ ಗಾಳಿಯ ಜೊತೆಗೆ ಮೋಡಗಳು ತಂಪಾದ ಅರಣ್ಯದ ಕಡೆಗೆ ಸೆಳೆಯಲ್ಪಡುತ್ತಿದೆ. ಅಂದರೆ ಹರಿಹರ, ಕೊಲ್ಲಮೊಗ್ರ, ಸಂಪಾಜೆ, ಮಡಿಕೇರಿ ಬೆಟ್ಟದ ಸಾಲುಗಳ ಕಡೆಗೆ. ಹೀಗಾದಾಗ ಮೋಡಗಳು ವಾಯವ್ಯದಿಂದ ಆಗ್ನೇಯಕ್ಕೆ ಚಲಿಸಿದೆಂತೆ ಭಾಸವಾಗುತ್ತದೆ. ಮೋಡಗಳ ವಿಸ್ತರಣೆಗೆ ಅವಕಾಶವಿಲ್ಲದ್ದರಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮೇಘಸ್ಪೋಟದಂತಹ ಮಳೆಗೆ ಕಾರಣವಾಗುವಾಗಿರಬಹುದು. ಇದು ಈಗಿನ ಸ್ಥಿತಿಗೆ ಕಾರಣವಿರಲೂಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

14 hours ago

ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

14 hours ago

ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…

14 hours ago

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ

ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…

22 hours ago

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು  ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…

1 day ago

ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…

1 day ago