Advertisement
The Rural Mirror ಫಾಲೋಅಪ್

ಮಲೆನಾಡು ತಪ್ಪಲಲ್ಲಿ ಮೇಘಸ್ಫೋಟ- ಭಾರೀ ಮಳೆ ಯಾಕಿರಬಹುದು ?| ವಾಯವ್ಯ ಮೋಡಗಳು ಏನು ಮಾಡುತ್ತವೆ…? | ಮೋಡಗಳ ವಿಸ್ತರಣೆಗೆ ಅವಕಾಶ ಏಕಿಲ್ಲ…? |

Share
ಮಲೆನಾಡು ತಪ್ಪಲು ಪ್ರದೇಶದಲ್ಲಿ ಭಾರೀ ಮಳೆ. ಮೇಘಸ್ಫೋಟ-ಭಾರೀ ಮಳೆ.ಈ ಕಾರಣದಿಂದ ಭೂಕುಸಿತ. ಇದೆಲ್ಲಾ ಒಂದಕ್ಕೊಂದು ಲಿಂಕ್‌ ಆಗುತ್ತಿವೆ. ಇದಕ್ಕೂ ಮೊದಲು ಭೂಕಂಪನ. ಒಟ್ಟಾರೆ ತಪ್ಪಲು ಪ್ರದೇಶ ಜನರಿಗೆ ಭಯ. ಹಾಗಿದ್ದರೆ ಏನು ಕಾರಣ? ಮೋಡಗಳ ಚಲನೆ ಏನು ? ಈ ಬಗ್ಗೆ ಹವಾಮಾನ ವೀಕ್ಷಣೆ ಮಾಡುವ ಹಾಗೂ ವಿಶ್ಲೇಷಣೆ ಮಾಡುವ ಕೃಷಿಕರುಗಳಾ ಸಾಯಿಶೇಖರ್‌ ಕರಿಕಳ ಹಾಗೂ ರಘುರಾಮ ಕಂಪದಕೋಡಿ ಹೀಗೆ ಅಂದಾಜಿಸಿದ್ದಾರೆ….

ಈ ಸಲ ನೈರುತ್ಯ ಮುಂಗಾರು ಅಂತ ಹೆಸರು ಮಾತ್ರ. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಬೆರಳೆಣಿಕೆಯಷ್ಟು ದಿನಗಳಲ್ಲಿ ಮಾತ್ರ ಮೋಡ ನೈರುತ್ಯದಿಂದ ಈಶಾನ್ಯಕ್ಕೆ ಸಂಚರಿಸಿದೆ. ಹೆಚ್ಚಿನ ದಿನಗಳಲ್ಲಿ ವಾಯವ್ಯದಿಂದ ಆಗ್ನೇಯಕ್ಕೆ ಚಲಿಸಿದೆ.ಈಗಿನ  ಪರಿಸ್ಥಿತಿಗೆ ಈ ವೈಪರೀತ್ಯ ಕಾರಣ ಇರಬಹುದಾದರೂ, ವಾಯವ್ಯ ಮೋಡಗಳಿಂದ ನಿರೀಕ್ಷೆಗಿಂತ ಕಡಿಮೆ ಮಳೆಯಾಗುತ್ತಿದೆ. ಈ ಮೋಡಗಳು ಘಟ್ಟದ ತಪ್ಪಲ ಭಾಗಕ್ಕೆ ತಲುಪಿದಾಗ ಒತ್ತಡ ಹೆಚ್ಚಾಗಿ ಮಳೆಯಾಗುತ್ತಿದೆ. ಸುರಿಯುತ್ತಿದೆ.

Advertisement
Advertisement

ಮೊದಲು ಮುಂಗಾರು ದುರ್ಬಲಗೊಂಡಾಗ ಮೋಡಗಳು ಪಶ್ಚಿಮದಿಂದ ಪೂರ್ವಕ್ಕೆ ಚಲಿಸುತ್ತಿತ್ತು. ಆಗ ಸಾಮಾನ್ಯವಾಗಿ ಮಡಿಕೇರಿಯಿಂದ ಧರ್ಮಸ್ಥಳದ ತನಕ ವಿಶಾಲತೆ ಸಿಕುತ್ತಿತ್ತು. ಪೂರ್ವದಲ್ಲಿ ಶೇಖರಣೆಗೊಂಡ ಮೋಡಗಳ ಒತ್ತಡದಿಂದ ಗಾಳಿ ಬೀಸುತ್ತಿತ್ತು. ಮೋಡಗಳು ಚದುರಿ ಮಳೆ ಹಂಚಿಕೆಯಾಗುತ್ತಿತ್ತು. ವಾಯವ್ಯ ಮೋಡಗಳಿಗೆ ವಿಸ್ತರಣೆಗೆ ಅವಕಾಶ ಕಡಿಮೆಯಾದಂತಿದೆ. ಇನ್ನು ಮುಂದೆ ಸರಿಯಾಗಲಿ ಎಂದು ನಂಬೋಣ.

Advertisement

ಇದರ ಜೊತೆಗೆ  ಶಿರಾಡಿ ಘಾಟಿಯ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಬೃಹತ್ ಯೋಜನೆಗಳ ಫಲವಾಗಿ ಅರಣ್ಯ ಕಡಿಮೆಯಾಗಿದೆ. ಉಷ್ಣಾಂಶ ಏರಿಕೆಯಿಂದ ಬಿಸಿ ಗಾಳಿಯ ಜೊತೆಗೆ ಮೋಡಗಳು ತಂಪಾದ ಅರಣ್ಯದ ಕಡೆಗೆ ಸೆಳೆಯಲ್ಪಡುತ್ತಿದೆ. ಅಂದರೆ ಹರಿಹರ, ಕೊಲ್ಲಮೊಗ್ರ, ಸಂಪಾಜೆ, ಮಡಿಕೇರಿ ಬೆಟ್ಟದ ಸಾಲುಗಳ ಕಡೆಗೆ. ಹೀಗಾದಾಗ ಮೋಡಗಳು ವಾಯವ್ಯದಿಂದ ಆಗ್ನೇಯಕ್ಕೆ ಚಲಿಸಿದೆಂತೆ ಭಾಸವಾಗುತ್ತದೆ. ಮೋಡಗಳ ವಿಸ್ತರಣೆಗೆ ಅವಕಾಶವಿಲ್ಲದ್ದರಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮೇಘಸ್ಪೋಟದಂತಹ ಮಳೆಗೆ ಕಾರಣವಾಗುವಾಗಿರಬಹುದು. ಇದು ಈಗಿನ ಸ್ಥಿತಿಗೆ ಕಾರಣವಿರಲೂಬಹುದು.

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ  ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…

12 hours ago

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

21 hours ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

2 days ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

2 days ago

ಅಡಿಕೆ ಹಳದಿ ಎಲೆರೋಗ – ಚುನಾವಣೆ

ಅಡಿಕೆ ಕೂಡಾ ಇಂದು ಬಹುಮುಖ್ಯವಾದ ಚುನಾವಣಾ ವಿಷಯ. ಹೀಗಾಗಿ ಅಡಿಕೆ ಹಳದಿ ಎಲೆರೋಗ…

2 days ago

ವಾರದ ಅತಿಥಿ | ಸುಬ್ರಾಯ ಚೊಕ್ಕಾಡಿ ಮಾತು

https://youtu.be/Vh1tYlOKav0?si=M4grG9euj6dXmkE2 ರೂರಲ್ ಮಿರರ್‌ ವಾರದ ಅತಿಥಿಯಾಗಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅವರು…

2 days ago