MIRROR FOCUS

ಕೃಷಿಗೆ ತಂತ್ರಜ್ಞಾನ ಏಕೆ ಬೇಕು..? | ಗ್ರಾಮೀಣ ಭಾಗದ ಈ ಕೃಷಿ ಕಾರ್ಮಿಕ ನೀಡಿದ ಸಂದೇಶ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಡಿಕೆ ಬೆಳೆಗಾರರಿಗೆ ಈಗ ಸವಾಲಿನ ದಿನಗಳು. ಮಳೆಗಾಲ ಆರಂಭವಾದ ಬಳಿಕ ಅಡಿಕೆಗೆ ಔಷಧಿ ಸಿಂಪಡಣೆ ಮಾಡಬೇಕು, ಕೊಳೆರೋಗ ಬಾರದಂತೆ ತಡೆಯಬೇಕು. ಆದರೆ  ಮಳೆ ಯಾವಾಗ ಬರುತ್ತದೆ..? ಯಾವಾಗ ಕಡಿಮೆಯಾಗುತ್ತದೆ ಎನ್ನುವುದೇ ತಿಳಿಯದ ಕಾರಣ ಅಡಿಕೆ ಬೆಳೆಗಾರರಿಗೆ ಸವಾಲು. ಅದರ ಜೊತೆಗೇ ಕಾರ್ಮಿಕರಿಗೂ ಸಂಕಷ್ಟ. ಇಂತಹ ಸಮಸ್ಯೆಗೆ ಕೃಷಿ ಕಾರ್ಮಿಕ ಹವಾಮಾನ ಮಾಹಿತಿಯನ್ನು ವೆದರ್‌ ಆಪ್‌ ಮೂಲಕ ಪಡೆದು ಔಷಧಿ ಸಿಂಪಡಣೆಗೆ ತೆರಳುವ ಬಗ್ಗೆ ಕೃಷಿಕ ರಾಜಗೋಪಾಲ ಕೈಪಂಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಕೂಡಾ ಇದೆ.

Advertisement
Advertisement
ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ

ಕೃಷಿಗೆ ಈಗ ತಂತ್ರಜ್ಞಾನ ಏಕೆ ಬೇಕು? ಅದೂ ಸಾಮಾನ್ಯ ಕೃಷಿಕರಿಗೂ, ಕೃಷಿ ಕಾರ್ಮಿಕರಿಗೂ ಲಭ್ಯವಾಗುವಂತೆ ಇರಬೇಕು ?. ಇದಕ್ಕೊಂದು ಉದಾಹರಣೆಯಾಗಿ ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಬಳಿಯ ಕೃಷಿ ಕಾರ್ಮಿಕ ರಾಮಕೃಷ್ಣ ಇಳಂತೋಡಿ ಅವರು.ಅಡಿಕೆಗೆ ಔಷಧಿ ಸಿಂಪಡಣೆಗೆ ತೆರಳುವ ಮುನ್ನ ಹವಾಮಾನ ಮಾಹಿತಿಯ “ವೆದರ್‌ ಆಪ್”‌ ಮೂಲಕ ಯಾವಾಗ ಮಳೆಯಾಗುತ್ತದೆ ಎನ್ನುವುದನ್ನು ಗಮನಿಸಿ ಸಿಂಪಡಣೆಗೆ ತೆರಳುತ್ತಾರೆ.ಕೃಷಿಕ ರಾಜಗೋಪಾಲ ಕೈಪಂಗಳ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈಗ ಎಲ್ಲರ ಬಳಿಯೂ ಆಧುನಿಕ ತಂತ್ರಜ್ಞಾನಗಳು ಒಳಗೊಂಡ ಮೊಬೈಲ್‌ ಇದೆ. ಈ ಮೊಬೈಲ್‌ ಮೂಲಕ ಲಭ್ಯವಾಗುವ ಹವಾಮಾನ ಮಾಹಿತಿ ಪಡೆದು ಔಷಧಿ ತಯಾರಿಸುವುದು ಹಾಗೂ ಔಷಧಿ ಸಿಂಪಡಣೆಗೆ ಅನುಕೂಲವಾಗುತ್ತದೆ. ಇದರಿಂದ ಕಾರ್ಮಿಕರಿಗೂ ಇಡೀ ದಿನ ವ್ಯರ್ಥವಾಗುವುದಿಲ್ಲ, ಮಾನವ ಶ್ರಮವೂ ಸರಿಯಾಗಿ ಬಳಕೆಯಾಗುತ್ತದೆ. ಕೃಷಿಕನಿಗೂ ನಷ್ಟವೂ ಇಲ್ಲ, ಸರಿಯಾದ ಸಮಯಕ್ಕೆ ಔಷಧಿ ಸಿಂಪಡಣೆಯೂ ಸಾಧ್ಯವಾಗುತ್ತದೆ. ಕೃಷಿಕರು ಈಗಾಗಲೇ ಹವಾಮಾನ ಮಾಹಿತಿಯನ್ನು ಪಡೆಯುತ್ತಾರೆ. ಆದರೆ ಕೃಷಿ ಕಾರ್ಮಿಕರು ಕೂಡಾ ಇಂತಹ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳಬೇಕಾದ ಅಗತ್ಯವೂ ಇದೆ. ಗ್ರಾಮೀಣ ಭಾಗಕ್ಕೂ ತಂತ್ರಜ್ಞಾನಗಳು ಎಷ್ಟು ಅಗತ್ಯ ಎನ್ನುವುದಕ್ಕೂ ಕೂಡಾ ಇದೊಂದು ಸಂದೇಶವಾಗಿದೆ.

ಕೃಷಿ ಕಾರ್ಮಿಕ ರಾಮಕೃಷ್ಣ ಅವರ ಈ ಪ್ರಯತ್ನವು ಮಾದರಿಯಾಗಿದೆ. ಅಷ್ಟೇ ಅಲ್ಲ, ಕೃಷಿ ತಂತ್ರಜ್ಞಾನಗಳು ಅತ್ಯಂತ ಸಾಮಾನ್ಯ ಜನರೂ ಬಳಕೆ ಮಾಡಿದಾಗ ಮಾನವ ಶ್ರಮವೂ ಸರಿಯಾಗಿ ಬಳಕೆಯಾಗುತ್ತದೆ ಎನ್ನುವುದಕ್ಕೆ ಇದೊಂದು ಮಾದರಿಯಾಗಿದೆ.

Why do we need technology in farming these days? It’s important that everyday farmers have access to it too. Take Ramakrishna Ilanthodi, for example, an agricultural worker near Nettanige in the Kasaragod district. Before he heads out to spray pesticides on  arecanut crops, he checks the “Weather App” to see if it’s going to rain, so he can plan his day better.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |

ಮೈಸೂರಿನಲ್ಲಿ ಕಾರ್ಯಾಚರಿಸುತ್ತಿರುವ ಇಲೆಕ್ಟ್ರಾನಿಕ್ಸ್‌  ಉತ್ಪನ್ನಗಳ ತಯಾರಿಕಾ ಕಂಪನಿ "ಬ್ರಿವೆರಾ"ದಲ್ಲಿ ಉದ್ಯೋಗಾವಕಾಶಗಳು ಇವೆ. ಐಟಿಐ,…

32 minutes ago

ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ

ಕೊಂಕಣ, ಗೋವಾ, ಮಹಾರಾಷ್ಟ್ರ, ಕೇರಳ, ಕರ್ನಾಟಕ, ಚಂಡೀಗಢ, ಬಿಹಾರ ಸೇರಿದಂತೆ ಹಲವು ರಾಜ್ಯಗಳ…

1 hour ago

ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?

ರಾತ್ರಿ ಊಟ ಮಾಡಿ ಮಲಗಿದ್ದ ಒಂದೇ ಕುಟುಂಬದ ಮೂವರು ಹೊಟ್ಟೆ ನೋವಿನಿಂದ ಸಾವನಪ್ಪಿದ …

1 hour ago

ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |

ಇಂದು ವಿಶ್ವ ಮಾವು ದಿನಾಚರಣೆ. ಪ್ರತೀ ವರ್ಷ  ಜುಲೈ 22 ರಂದು ಮಾವಿನಹಣ್ಣಿನ…

2 hours ago

ಜನನ-ಮರಣ 21 ದಿನಗಳೊಳಗೆ  ನೋಂದಣಿ ಕಡ್ಡಾಯ – ದ ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ

ಪ್ರತಿಯೊಂದು ಜನನ ಮರಣದ ನೋಂದಣಿ ಕಡ್ಡಾಯವಾಗಿದ್ದು, ಘಟನೆ ಸಂಭವಿಸಿದ 21 ದಿನಗಳೊಳಗೆ ನಗರ/…

2 hours ago

ಸಸ್ಯ ಪರಿಚಯ – ಕಿರಾತಕಡ್ಡಿ | ಮನೆಯಲ್ಲಿರಬೇಕಾದ ಗಿಡಗಳಲ್ಲಿ ಇದೂ ಒಂದು |

ಈ ಗಿಡದ ಸಸ್ಯ ಶಾಸ್ತ್ರೀಯ ಹೆಸರು Andrographis Paniculata. ಕಿರಾತಕಡ್ಡಿಗೆ ನೆಲಬೇವು ಎಂಬ…

9 hours ago