Advertisement
MIRROR FOCUS

ರೈತರು ತಮ್ಮ ಹೊಲದ ನಕ್ಷೆ ಏಕೆ ಇಟ್ಟುಕೊಳ್ಳಬೇಕು..? | ಹೊಲದ ನಕ್ಷೆಯನ್ನು ಬರೆಯುವುದಾದರೂ ಹೇಗೆ?

Share

ನಮ್ಮಲ್ಲಿನ ಅನೇಕ ರೈತರು ತಮ್ಮಲ್ಲಿರುವ ಹೊಲಗಳ ಸ್ಥಿತಿಗತಿಯನ್ನು ಸುಧಾರಿಸುವತ್ತ ಗಮನ ಹರಿಸುತ್ತಿದ್ದಾರೆ. ಹಾಗೆಯೇ ತಮ್ಮ ಹೊಲದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವತ್ತಲೂ ಆಸಕ್ತಿ ತೋರುತ್ತಿದ್ದಾರೆ. ಇದನ್ನು ಸಾಧಿಸುವತ್ತ ಯೋಜನೆಯೊಂದನ್ನು ರೂಪಿಸಿಕೊಳ್ಳಬೇಕು. ಈ ಯೋಜನೆಗೆ ಸಹಕಾರಿಯಾಗುವಂತೆ ನಮ್ಮ ಹೊಲದ ನಕ್ಷೆಯೊಂದನ್ನು ತಯಾರಿಸಲೇಬೇಕು.

ನಮ್ಮ ಹೊಲದ ನಕ್ಷೆಯಲ್ಲಿ ಇದಿಷ್ಟು ಇರಬೇಕು: 

  • ಹೊಲದ ದಿಕ್ಕುಗಳನ್ನು ತಿಳಿಸಬಹುದು. ಅದರ ಉದ್ದಗಲಗಳನ್ನು ಸ್ಪಷ್ಟವಾಗಿ ದಾಖಲಿಸಬಹುದು
  • ಹೊಲದ ಮೇಲ್ಮಣ್ಣು ಸವೆಯುತ್ತಿರುವ ಸ್ಥಳವನ್ನು ಹಾಗೂ ಹೊಲದಲ್ಲಿ ಬೀಳುವ ಮಳೆನೀರು ಹೊಲದಿಂದಾಚೆಗೆ ಹರಿದು ಹೋಗುವ ಪಥವನ್ನು ಗುರುತಿಸಬಹುದು.
  • ಅಳವಡಿಸಿಕೊಂಡಿರುವ ಕೃಷಿಪದ್ದತಿಯಿಂದ ಹೊಲದಲ್ಲಿರುವ ಮಣ್ಣು ಮತ್ತು ನೀರು ಮಾಲಿನ್ಯಗೊಳ್ಳುತ್ತಿರುವುದನ್ನು ಗಮನಿಸಬಹುದು
  • ಹೊಲದಲ್ಲಿನ ಪ್ರತಿಯೊಂದು ಕೋನಗಳಲ್ಲಾಗುತ್ತಿರುವ ಘಟನೆಗಳನ್ನು ಅರ್ಥಮಾಡಿಕೊಳ್ಳಬಹುದು
  • ಹೊಲವನ್ನು ಸುಧಾರಿಸುವತ್ತ ಮಾಡಬಹುದಾದ ಕ್ರಮಗಳನ್ನು ಕುರಿತು ಯೋಜನೆ ರೂಪಿಸಬಹುದು
  • ಹೊಲದಲ್ಲಿನ ಮಣ್ಣಿನ ವಿಧಗಳು ಹಾಗೂ ಅವುಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಬಹುದು.
  • ಹೊಲದಲ್ಲಿನ ಇಳಿಜಾರು ಪ್ರದೇಶವನ್ನು ಗುರುತಿಸಿ, ಆ ಇಳಿಜಾರಿನ ಕಾರಣ ಹೊಲದಿಂದ ಸವೆಯುತ್ತಿರುವ ಮೇಲ್ಮಣ್ಣು ಮತ್ತು ಹರಿದು ಹೊಲದಿಂದಾಚೆಗೆ ಪೋಲಾಗುತ್ತಿರುವ ಮಳೆನೀರು
  • ಇವುಗಳನ್ನು ಸಂರಕ್ಷಿಸುವತ್ತ ನಿರ್ವಹಣಾ ತಂತ್ರೋಪಾಯಗಳನ್ನು ರೂಪಿಸಬಹುದು
  • ಪ್ರತಿಯೊಂದು ಬೇಸಾಯ ಹಂಗಾಮಿನಲ್ಲಿ ಬೆಳೆಗಳ ಬದಲಾವಣೆಗಳತ್ತ ಆಲೋಚಿಸಬಹುದು
  • ಬೆಳೆಯುವ ಬೆಳೆಗಳಿಗೆ ಹಾಗೂ ಮಣ್ಣು ಜೀವಿಗಳಿಗೆ ಅಗತ್ಯವಾಗಿರುವ ಕಾಂಪೋಸ್ಟ್ ಮತ್ತಿತರ ಸಹಜ ಸಾವಯವ ಗೊಬ್ಬರಗಳನ್ನು ತಯಾರಿಸುವ ಸ್ಥಳಗಳನ್ನು ನಿರ್ಧರಿಸಬಹುದು
  • ಬೇಸಾಯದ ಅಂಗವೇ ದನದ ಅಥವಾ ಜಾನುವಾರುಗಳ ಕೊಟ್ಟಿಗೆಗಳು ಮತ್ತು ಉಪಕರಣಗಳನ್ನುಇರಿಸಲು ಅಗತ್ಯವಾಗಿರುವ ಕೋಣೆಗಳನ್ನು ನಿರ್ಮಿಸುವ ಸ್ಥಳವನ್ನು ನಿರ್ಧರಿಸಬಹುದು
  • ಹಾಗೆಯೇ, ಹೊಲದ ಬಂದೋಬಸ್ತಿಗಾಗಿ ಅಗತ್ಯ ಬೇಲಿಗಳನ್ನು ಹಾಕಿಕೊಳ್ಳಲು ಯೋಜನೆ ರೂಪಿಸಬಹುದು
  • ಮುಂದಿನ ದಿನಗಳಲ್ಲಿ ಹೊಲದ ಮೌಲ್ಯವನ್ನು ಹೆಚ್ಚಿಸುವ ಕ್ರಮಗಳ ಕುರಿತು ಯೋಜನೆಗಳನ್ನು ರೂಪಿಸಲು ನಮ್ಮ ಹೊಲದ ನಕ್ಷೆಯೊಂದನ್ನು ಇರಿಸಿಕೊಳ್ಳುವುದು ಒಳ್ಳೆಯದು.

ಮಾಹಿತಿ : ಡಿಜಿಟಲ್‌ ಮೀಡಿಯಾ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮೊಬೈಲ್ ನೋಡುತ್ತಾ ಊಟ ಮಾಡಬೇಡಿ, ಶಿಸ್ತಿನ ಜೀವನವೇ ಆರೋಗ್ಯದ ರಹಸ್ಯ – ರಾಘವೇಶ್ವರ ಶ್ರೀ

ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ಹಾಗೂ ಆಧ್ಯಾತ್ಮಿಕ ಪ್ರಗತಿ…

5 hours ago

ಭಾರೀ ಮಳೆಯ ಎಚ್ಚರಿಕೆ | ಕರಾವಳಿ ಕರ್ನಾಟಕದಲ್ಲಿ ಅತಿ ಭಾರೀ ಮಳೆ – ಪ್ರವಾಹ- ಭೂಕುಸಿತದ ಎಚ್ಚರಿಕೆ

ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಕರ್ನಾಟಕ ಹಾಗೂ ಕೇರಳದಲ್ಲಿ ಇಂದು ಭಾರೀ ಮಳೆಯ…

9 hours ago

ಕೇರಳದಲ್ಲಿ ಭಾರೀ ಮಳೆ ಅಬ್ಬರ : ಹಲವೆಡೆ ಭೂಕುಸಿತ, ಪ್ರವಾಹ ಭೀತಿ

ಕೇರಳದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ರೆಡ್ ಹಾಗೂ ಆರೆಂಜ್ ಅಲರ್ಟ್…

10 hours ago

ಹವಾಮಾನ ವರದಿ | 01-08-2026 | ಕರಾವಳಿಯ-ಮಲೆನಾಡಲ್ಲಿ ಮಳೆ ಹೆಚ್ಚಳಕ್ಕೆ ಕಾರಣವೇನು..? – ಆಗಸ್ಟ್ 3 ರಿಂದ ಮಳೆ ಕಡಿಮೆ ಸಾಧ್ಯತೆ

ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 2ರವರೆಗೆ ಬಿಟ್ಟು ಬಿಟ್ಟು ಮಳೆಯಾಗಲಿದ್ದು, ಆಗಸ್ಟ್ 3ರಿಂದ…

14 hours ago

ಪಶ್ಚಿಮ ಘಟ್ಟಕ್ಕೆ ಮತ್ತೆ ಕೇಂದ್ರದ ಹೊಸ ನೋಟಿಫಿಕೇಶನ್ – ಕರ್ನಾಟಕದ ಸಾವಿರಾರು ಗ್ರಾಮಗಳ ಮೇಲೆ ಪರಿಣಾಮವೇ?

ಪಶ್ಚಿಮ ಘಟ್ಟದ 56,825 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವಾಗಿ ಘೋಷಿಸಲು…

17 hours ago