ಕಳೆದ ಮೇ ತಿಂಗಳಲ್ಲಿ ಮರಗಳ ಸಮೀಕ್ಷೆ ಪೂರ್ಣಗೊಂಡು, ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ 2022ರ ಜೂ.9ರಂದು ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಸಭೆ ನಿಗದಿಪಡಿಸಲಾಗಿತ್ತು. ಈ ಸಮಯ 35 ಕಿಮೀ ವ್ಯಾಪ್ತಿಯ ಈ ರಸ್ತೆಯನ್ನು ಹೆಚ್ಚು ನೇರಗೊಳಿಸುವ ಕುರಿತು ಆದೇಶ ಹೊರ ಬಿದ್ದ ಕಾರಣ ಅಹವಾಲು ಸ್ವೀಕಾರ ಸಭೆಯನ್ನು ಮುಂದೂಡಲಾಗಿತ್ತು.
ರಸ್ತೆ ನೇರಗೊಳ್ಳುವ ಕಾರಣ 35 ಕಿಮೀ ದೂರದ ವ್ಯಾಪ್ತಿ 33.1 ಕಿಮೀ.ಗೆ ಇಳಿಕೆಗೊಂಡು ತೆರವುಗೊಳ್ಳಬೇಕಾದ ಮರಗಳ ಮರು ಸಮೀಕ್ಷೆಗೆ ಆದೇಶ ನೀಡಲಾಗಿತ್ತು. ಇದರ ಪ್ರಕಾರ ಹಿಂದಿನ ರಸ್ತೆ ವ್ಯಾಪ್ತಿಯ ಹಲವಾರು ಸ್ಥಳಗಳು ಬದಲಾವಣೆಯಾಗಿ ರಸ್ತೆಯು ಕಾಡು ಪ್ರದೇಶಗಳಲ್ಲಿ ಹೆಚ್ಚು ಹಾದು ಹೋಗುವ ಕಾರಣದಿಂದ ಕಳೆದ ಬಾರಿಗಿಂತ ದುಪ್ಪಟ್ಟಿಗಿಂತಲೂ ಅಧಿಕ ಮರಗಳು ತೆರವು ಗೊಳ್ಳಬೇಕಾಗಿದೆ.
5,494 ಮರಗಳು: ಬೆಳ್ತಂಗಡಿ ತಾಲೂಕಿನ ಅರಣ್ಯ ಇಲಾಖೆಯ 5 ಉಪವಲಯಗಳ ಮೂಲಕ ಕಳೆದ ಬಾರಿಯ ಸಮೀಕ್ಷೆಯಲ್ಲಿ ರಸ್ತೆ ಅಭಿವೃದ್ಧಿಗೆ 2,452 ಮರಗಳನ್ನು ತೆರವುಗೊಳಿಸಲು ಗುರುತಿಸಲಾಗಿತ್ತು. ಆದರೆ ಮರು ಸಮೀಕ್ಷೆ ಪ್ರಕಾರ ಪಟ್ಟಾ, ಕಂದಾಯ ಹಾಗೂ ಅರಣ್ಯ ಇಲಾಖೆಗೆ ಸೇರಿದ 5,494 ಮರಗಳು ತೆರವುಗೊಳ್ಳಬೇಕಾಗಿದೆ. ಕಳೆದ ಬಾರಿ ಗುರುತಿಸಲ್ಪಟ್ಟ ಕೆಲವು ಮರಗಳು ಹೊಸ ಸಮೀಕ್ಷೆಯಿಂದ ಹೊರ ಬಿದ್ದಿವೆ. ಮರಗಳ ಜಾತಿ ಹಾಗೂ ಅವುಗಳ ಗಾತ್ರಕ್ಕನುಗುಣವಾಗಿ ತೆರವುಗೊಳ್ಳುವ ಪ್ರತಿ ಮರಕ್ಕೆ ಇಲಾಖೆ ದರ ನಿಗದಿಪಡಿಸಲಿದೆ. ತೆರವುಗೊಳ್ಳುವ ಮರವೊಂದರ ಹತ್ತು ಪಟ್ಟು ದರವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೂಲಕ ಅರಣ್ಯ ಇಲಾಖೆಗೆ ಪಾವತಿಸಬೇಕು.
ಕಾಮಗಾರಿ ಆರಂಭ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಗಿಡಗಂಟಿ ತೆರವು ಕಾಮಗಾರಿ ಮಡಂತ್ಯಾರು ಕಡೆಯಿಂದ ನಡೆಯುತ್ತಿದೆ. ಪ್ರಕ್ರಿಯೆಗಳು ಪೂರ್ಣಗೊಂಡ ಕೂಡಲೇ ಮರಗಳ ತೆರವು ನಡೆಯಲಿದ್ದು, ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ವೇಗ ಸಿಗಲಿದೆ."ತಾಯಿಯ ಹೆಸರಲ್ಲಿ ಒಂದು ಸಸಿ"-2.0 ಅಭಿಯಾನದಡಿ 10 ಕೋಟಿ ಗಿಡಗಳನ್ನು ನೆಡುವ ಗುರಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…
"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…
ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ ಆಶಯವನ್ನೇ ಕಳೆದುಕೊಳ್ಳುತ್ತದೆ.…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490