ಮಳೆಗಾಲದಲ್ಲಿ ರುಚಿಸುವ ಕಾಡು ಅಣಬೆ | ಕಾಡು ಅಣಬೆ ಸಂಗ್ರಹಿಸುವ ಮುನ್ನ ಬೇಕಿದೆ ಎಚ್ಚರಿಕೆ |

July 20, 2024
12:21 PM

ಮಳೆಗಾಲದಲ್ಲಿ ಸಿಗುವ ಆಹಾರ ಪದಾರ್ಥಗಳು ಬಹಳ ಖುಷಿ ಕೊಡುತ್ತವೆ. ಕೆಲವಂತೂ ಮಳೆಗಾಲದಲ್ಲಿ ಮಾತ್ರವೇ ಸಿಗುತ್ತವೆ. ಮಲೆನಾಡು(Malenadu) ಕರಾವಳಿಗಳಲ್ಲಂತೂ ಮಳೆಗಾಲ ಆಹಾರ ಪದ್ದತಿಯೇ(Coastal food system) ಬೇರೆ. ಪತ್ರೊಡೆ, ಕಳಲೆ, ಹಲಸಿನ ಹಣ್ಣು, ಕಾಡು ಅಣಬೆ, ಹೊಳೆಯ ಮೀನು, ಏಡಿ… ಇತ್ಯಾದಿ. ಅದರಲ್ಲೂ ಕಾಡಿನಲ್ಲಿ ಮಳೆಗಾಲದಲ್ಲಿ ಕಾಡು ಅಣಬೆ ಶಿಕಾರಿ(Mushroom Harvest) ಮಾಡೋದಂದ್ರೆ ಅದರ ಮಜನೇ ಬೇರೆ. ಆದ್ರೆ ನಾವು ಕಾಡಿನಲ್ಲಿ ಶಿಕಾರಿ ಬೇಟೆ ಮಾಡಬೇಕಾದರೆ ಒಂದಷ್ಟು ಕ್ರಮಗಳನ್ನು ಅನುಭವಿಸಲೇ ಬೇಕು.

ಅಣಬೆ ಶಿಕಾರಿ..! : ಮಳೆಗಾಲದ ಪದಾರ್ಥಗಳ ರಾಣಿ, ಕಾಡಿನ ಅಂಚಲ್ಲಿ ಬೆಳೆದು ಮನೆಯಲ್ಲಿ ಮಸಾಲೆಯೊಡನೆ ಬೆರೆಯುವ ದುಬಾರಿ ಅಣಬೆಯನ್ನು ಈಗೀಗ ತುಂಬಾ ಜನ ಮನೆಯಲ್ಲಿ ಬೆಳೆಯುತ್ತಿದ್ದಾರೆ‌. ಆದರೆ ಕಾಡಿನ ಅಣಬೆಯ ಮುಂದೆ ಅವು ಸಪ್ಪೆ. ಇಂತಿಪ್ಪ, ಕಾಡಿನ ಅಣಬೆಗಳ ಪ್ರಭೇದಗಳೂ ಬಹಳ. ಆದರೆ ಅವುಗಳನ್ನು ಕೀಳುವ ವಿಚಾರಕ್ಕೆ ಬಂದರೆ ನೂರಾರು ರೀತಿ ರಿವಾಜು ಇದೆ. ಅದೇ ಒಂದು ಇಂಟೆರೆಸ್ಟಿಂಗ್‌ ಕಥೆ ಕೂಡಾ.

ಹೀಗಿದೆ ರೀತಿ..! : ಅಣಬೆಯನ್ನು ನೇರವಾಗಿ ಕೀಳಲಾಗುವುದಿಲ್ಲ. ಅಣಬೆಯ ಜಾಗದಲ್ಲಿ ಗಲೀಜು ಮಾಡುವ ಹಾಗಿಲ್ಲ, ಅಣಬೆ ಕೀಳುವಾಗ ಕಾಲು ಮಡಿಚಿ ಕೂರುವಂತಿಲ್ಲ. ಅಷ್ಟೇ ಅಲ್ಲ ಅಣಬೆ ಕೀಳುವಾಗ ಶಬ್ದ ಮಾಡುವ ಆಗೂ ಇಲ್ಲ. ಇಷ್ಟಲ್ಲ ರಿವಾಜುಗಳು ಪಾಲಿಸೋದಿದ್ರಷ್ಟೇ ನಿಮ್ಗೂ ಅಣಬೆ ಶಿಕಾರಿಗೆ ಹೋಗ್ಬಹದು.

ವಿಶಿಷ್ಟ ನಂಬಿಕೆ : ಅಣಬೆ ಕೀಳಬೇಕಾದರೆ ಅಣಬೆ ಬೆಳೆದ ಜಾಗದಲ್ಲಿ ಬೆನ್ನನ್ನು ಮಾತ್ರ ಬಗ್ಗಿಸಿ ಒಂದು ಚೂಪಾದ ಕೋಲು ಅಥವಾ ರಾಡ್ ತೆಗೆದುಕೊಂಡು ಅಣಬೆಯನ್ನು ನೆಲದಿಂದ ಕೀಳಬೇಕು. ಈ ಸಂದರ್ಭದಲ್ಲಿ ಎಂತಾ ಕಷ್ಟವಿದ್ದರೂ ಮಾತನಾಡಬಾರದು, ನಂತರ ಆ ಜಾಗವನ್ನು ಗಲೀಜು ಮಾಡದೇ ಅಲ್ಲಿ ಯಾವುದೇ ರೀತಿಯ ಕಸ ಹಾಕದೇ ಅಲ್ಲಿಂದ ಮೌನವಾಗಿ ಬರಬೇಕು. ಅಣಬೆಯನ್ನು ಸಂಗ್ರಹಿಸಿದ ನಂತರ ಬೇಕಾದರೆ ಮಾತನಾಡಬಹುದು, ಇದು ಜಾನಪದ ನಂಬಿಕೆ. ಒಮ್ಮೆ ಮೂರರಿಂದ ಆರು ಜಾಗದಲ್ಲಿ ಇವು ಬೆಳೆಯುತ್ತವೆ. ಅಲ್ಲದೇ ಆರು ದಿನ ಈ ಬೆಳೆ ಇರುತ್ತದೆ‌. ಈ ಸಲ ಅವಧಿಗೂ ಮುನ್ನ ಅಣಬೆ ಬಂದಿವೆ. ಒಂದು ವೇಳೆ ಮೇಲೆ ಹೇಳಿದ ನಿಯಮ ಅನುಸರಿಸದೇ ಇದ್ದಲ್ಲಿ ಅಣಬೆ ಮುಂದಿನ ವರ್ಷ ಬೆಳೆಯುದಿಲ್ಲ ಎಂಬ ನಂಬಿಕೆಯಿದೆ.

ಆದಾಯದ ಭಾಗವೂ ಹೌದು : ಇದನ್ನು ಬೆಳಗ್ಗೆ ನಸುಕಿನ ಜಾವ ಹಾಗೆಯೇ ಮುಸ್ಸಂಜೆ ಹೊತ್ತಲ್ಲಿ ಕಿತ್ತರೆ ಒಳ್ಳೆಯ ರಾಶಿಯಲ್ಲಿ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಮುಂಡಗೋಡು- ಹುಬ್ಬಳಿ ಭಾಗದ ಕಾಡಿನಲ್ಲಿ ಜೇನುಮುರಿ ಭಾಗದಲ್ಲಿ ಬಾಣಪ್ಪ ಲಮಾಣಿ ಈ ಅಣಬೆಯನ್ನು ಬಾಲ್ಯದಿಂದ ಪ್ರತೀ ವರ್ಷ ಸಂಗ್ರಹಿಸುತ್ತಿದ್ದಾರೆ‌. ಸೀಸನ್ ಅಲ್ಲಿ ಪ್ರತೀ ವರ್ಷ ಇವರ ಹತ್ತಿರ ಕಾಡು ಅಣಬೆಗಳು ಸಿಗುತ್ತವೆ. ದಿನಕ್ಕೆ 2000 ರೂಪಾಯಿ ಇದರಿಂದ ದೊರೆಯುತ್ತದೆ. ಉಳಿದಂತೆ ಇವರು ಕೃಷಿ ಕೂಲಿಕಾರನಾಗಿದ್ದಾರೆ.
– ಅಂತರ್ಜಾಲ ಮಾಹಿತಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಎಳೆಅಡಿಕೆ ಮಾತ್ರವಲ್ಲ, ಬಲಿತ ಅಡಿಕೆಯೂ ಒಡೆದು ಬೀಳುತ್ತಿದೆ…! ಕಾರಣ ಏನು?
June 13, 2026
1:49 PM
by: ಮಹೇಶ್ ಪುಚ್ಚಪ್ಪಾಡಿ
ಜಾಗತಿಕ ಮಾರುಕಟ್ಟೆಯಲ್ಲಿ ರಬ್ಬರ್‌ಗೆ ಐತಿಹಾಸಿಕ ದರ – ಕೆಜಿಗೆ ₹300 ಗಡಿ ದಾಟಿದ ಬೆಲೆ, ಭಾರತದಲ್ಲಿ RSS-4 ರಬ್ಬರ್‌ ಗೆ ಏರಿಕೆ
June 13, 2026
7:41 AM
by: ಮಿರರ್‌ ಡೆಸ್ಕ್
ಹಣ್ಣುಗಳಲ್ಲಿ ಕೀಟನಾಶಕ ಅವಶೇಷಗಳ ಭಯವೇ? ನೈಸರ್ಗಿಕವಾಗಿ ಸ್ವಚ್ಛಗೊಳಿಸುವ ಸರಳ ವಿಧಾನಗಳು
June 13, 2026
7:23 AM
by: ದ ರೂರಲ್ ಮಿರರ್.ಕಾಂ
Facebook, Instagram ಏಕಾಏಕಿ ಸ್ಥಗಿತ – ಜಾಗತಿಕವಾಗಿ ಲಕ್ಷಾಂತರ ಬಳಕೆದಾರರಿಗೆ ತೊಂದರೆ
June 12, 2026
8:37 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror