ಪುಟ್ಟ ಕಿಂಡಿಯಿಂದ ದೊಡ್ಡ ಕಿಟಕಿಯತ್ತ

April 3, 2025
8:30 AM
ಮಹಿಳೆಯ ಸುರಕ್ಷಾ ವಲಯವೆಂದರೆ ಅದು ಅಡುಗೆ ಕೋಣೆ. ಈ ಅಡುಗೆ ಕೋಣೆಯೇ ಎಲ್ಲವೂ. ಇಂದಿನ ದಿನ ಎಲ್ಲವೂ ಇದೆ. ಸಣ್ಣ ಕಿಟಕಿಯಿಂದ ದೊಡ್ಡ ಕಿಟಕಿಗೆ ತಲಪಿದೆ ಅಡುಗೆ ಮನೆ.

ಮನೆಯಲ್ಲಿ ನಮ್ಮ( ಮಹಿಳೆಯರನ್ನು) ಮೆಚ್ಚಿನ ಜಾಗ ಯಾವುದು ಅಂತ ಏನಾದ್ರು ಕೇಳಿದರೆ ಅದು ಅಡುಗೆ ಮನೆಯೇ…! ಬಾಯಿ ಮಾತಿಗೆ ದೇವರ ಕೋಣೆ, ಪಡಸಾಲೆ, ಜಗುಲಿ, ಹೊರಗಿನ ಚಿಟ್ಟೆ, ಹಿತ್ತಿಲು ಅಂತೆಲ್ಲ ಹೇಳಿದರೂ ಸುತ್ತಿ ಬಳಸಿ ಬಂದು ನಿಲ್ಲುವುದು ಅಡುಗೆ ಮನೆಯಲ್ಲೇ.……..ಮುಂದೆ ಓದಿ…..

ಮನೆಯಾಕೆಯ ಸುರಕ್ಷಾ ವಲಯವದು. ತನ್ನ ನಗುವಿಗೆ, ದುಃಖಕ್ಕೆ , ಅಳುವಿಗೆ ಸ್ಪಂದಿಸಲ್ಪಡುವ ಏಕೈಕ ಜಾಗವೆಂದರೆ ಅದು ಅಡುಗೆ ಮನೆ. ದಿನದ ಇಪ್ಪತ್ತನಾಲ್ಕು ಗಂಟೆಯ ಬಹು ಪಾಲು ಮೀಸಲು ಅಡುಗೆಮನೆಗೆ. ನಾನು ಇಲ್ಲಿ ಉಲ್ಲೇಖಿಸುತ್ತಿರುವುದು ನನ್ನಂತಹ ಸಾಮಾನ್ಯ ಮಹಿಳೆಯ ಬಗ್ಗೆ ಮಾತ್ರ. ಮನೆಯ ಹೊರಗೆ, ಒಳಗೆ ಸಮನಾಗಿ ದುಡಿಯುವ ಸೂಪರ್ ಮಹಿಳೆಯರು ಈ ವಲಯಕ್ಕೆ ಬರುವುದಿಲ್ಲ.

ಅಡುಗೆ ಮನೆಯೇ ಕೇಂದ್ರ ಬಿಂದುವಾದರೂ ಹಿಂದಿನಿಂದಲೂ ಬಹು ಕಡೆಗಣನೆಗೆ ಗುರಿಯಾದ ಶಾಪಗ್ರಸ್ತ ಕೋಣೆಯದು. ಹಳೆಯ ಮನೆಗಳ ಅಡುಗೆ ಕೋಣೆಗಳನ್ನು ನೋಡಿದ್ದರೆ ನಿಮಗೆ ಅಂದಾಜು ಆಗಬಹುದು. ಮನೆಯ‌ ಒಂದು ಮೂಲೆಯಲ್ಲಿ‌ ಇರುತ್ತಿದ್ದ ಆ ಕೋಣೆಯಲ್ಲಿ ಯಾವಾಗಲೂ ಗಾಳಿ ಬೆಳಕಿಗೆ ಕೊರತೆಯೇ. ಒಂದು ಪುಟ್ಟ ಕಿಟಕಿ. ಅದು ಹೆಚ್ಚಾಗಿ ಮರದ ಎಳೆಯುವ ಕಿಟಕಿ. ಮಳೆಗಾಲದಲ್ಲಿ ತೆಗೆಯಲೂ ಬಾರದು, ತೆಗೆದರೆ ಹಾಕಲಾಗದು. ಹಾವು ಚೇಳುಗಳು ಮುಕ್ತವಾಗಿ ಬಂದು ಮೂಲೆಯಲ್ಲಿ ಇಡುವ ಸೌದೆಗೆ ಬಂದು ಸೇರಿ ಕೊಂಡರೆ ಗೊತ್ತೂ ಆಗದು. ಬೆಳಗ್ಗೆ ಮನೆಯಾಕೆ ‌ಒಲೆಯಿಂದ ಬೂದಿ ತೆಗೆದು ಸಾರಿಸಿ ಬೆಂಕಿ ಮಾಡಲು ಸೌದೆಗೆ ಕೈ ಹಾಕುತ್ತಲೂ ಚೇಳು ಕುಟುಕಿದರೆ ಆ ದಿನಕ್ಕೆ ನರಕಯಾತನೆಯೇ. ಬಿಡಿ ಈಗ ಎಷ್ಟೋ‌ ಬದಲಾವಣೆಗಳಾಗಿವೆ.

ಆದರೂ ಆ ಕತ್ತಲೆಯ , ಬುಡ್ಡಿ ದೀಪದ ಕೋಣೆಯೊಳಗಿನ ಆಪ್ತತೆ, ನೈಜತೆ, ಮಡಿಕೆಯ ಸಪ್ಪಳ, ಶುದ್ಧ ತೆಂಗಿನೆಣ್ಣೆಯ ಘಮ್ಮನ್ನೆವ ಪರಿಮಳ, ಕುಚ್ಚಲಕ್ಕಿ ಒಲೆಯಲ್ಲಿ ಬೇಯುವಾಗಿನ ಕುದಿಯುವ ಗೌಜು……. ಎಲ್ಲಾ ಒಂದೊಂದಾಗಿ ಕಳಚಿದ ನೆನಪುಗಳು……

ಇಂದಿನ ಅಡುಗೆಮನೆ ಕೋಣೆಯಾಗಿ ಉಳಿದಿಲ್ಲ. ಮನೆಯ ಕೇಂದ್ರ ಜಾಗದಲ್ಲೇ ಸ್ಥಾಪನೆಯಾಗಿ ಬಿಟ್ಟಿದೆ. ಎಲ್ಲಾ ಕೈಗೆಟುವಂತಹ ಸೌಕರ್ಯಗಳು. ಹೊಗೆರಹಿತ ಅಡುಗೆ ವ್ಯವಸ್ಥೆ. ಸರಳ ಸುಲಭ ಕಾರ್ಯವಿಧಾನ… ಆಧುನಿಕ‌ ಕೊಡುಗೆಗಳು ಬದುಕಿಗೆ ದೊರೆತ ಉಡುಗೊರೆಯೆನ್ನಲೇ ಶಾಪವಾ..!?,  ಉತ್ತರ ಹುಡುಕುತ್ತಿರುವೆ……, ಹಂಚಿ ಕೊಳ್ಳುವುದು ಬಹಳವಿದೆ…..

ಬರಹ :
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಹೊಸರುಚಿ | ಎಳೆಯ ಹಲಸಿನ ಕಾಯಿ ರೋಲ್ – ಕ್ರಿಸ್ಪಿ ಟೀ ಟೈಮ್ ಸ್ನ್ಯಾಕ್
March 21, 2026
5:00 PM
by: ದಿವ್ಯ ಮಹೇಶ್
ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ : ಯುವಜನತೆಗೆ ಕಾಲದ ಕರೆಯೇ?
March 20, 2026
8:07 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಹಲಸಿನ ಹಣ್ಣಿನಿಂದ ಇಷ್ಟು ರುಚಿ ಸಿಗುತ್ತದಾ…? ಈ ಕಸ್ಟರ್ಡ್ ಮಿಸ್ ಮಾಡ್ಬೇಡಿ…!
March 14, 2026
8:05 PM
by: ದ ರೂರಲ್ ಮಿರರ್.ಕಾಂ
ಯುವಶಕ್ತಿ ದಿಕ್ಕುತಪ್ಪದಿರಲು ಹಿರಿಯರ ಮಾರ್ಗದರ್ಶನವೇ ದೀಪಸ್ತಂಭ
March 13, 2026
7:02 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror