ಅಂಕಣ

ಇಂದು ವಿಶ್ವ ಪುಸ್ತಕ ದಿನ | ಪುಸ್ತಕ ಓದೋಣ… ಉತ್ತಮ ಸ್ನೇಹಿತನ ಆಯ್ಕೆ ಮಾಡೋಣ… |

Share

ಸಮಯವಿದ್ದಾಗ ಓದುವುದಕ್ಕಿಂತ ಸಮಯ ಮಾಡಿಕೊಂಡು ಓದುವುದು ಉತ್ತಮ ಯಾರು ಪುಸ್ತಕಗಳನ್ನು ಪ್ರೀತಿಸುತ್ತಾರೋ ಅವರು ಏಕಾಂಗಿತನವನ್ನು ಯಾವತ್ತೂ ಅನುಭವಿಸಲಾರರು. ಜೀವನದಲ್ಲಿ ಉತ್ತಮ ಸ್ನೇಹಿತ ಅಂತ ಇರುವುದಾದರೆ ಅವುಗಳು ಪುಸ್ತಕಗಳೇ ಸರಿ. ಪುಸ್ತಕ ಓದುವಿಕೆ ಸಂತೋಷ, ಮಾನಸಿಕ ನೆಮ್ಮದಿ, ಜ್ಞಾನ, ವೃಧ್ದಿಸುವ ಶಬ್ದಭಂಡಾರ, ಭಾಷಾ ಕೌಶಲ್ಯ ಎಲ್ಲವನ್ನೂ ಕೊಡುತ್ತದೆ . ಪ್ರತಿಯಾಗಿ ನಮ್ಮ ಸಮಯವನ್ನು ಮಾತ್ರ ಬಯಸುತ್ತದೆ.

ಓದು ಅವರವರ ಭಾವಕ್ಕೆ , ಆಯ್ಕೆಯ ಮೇಲೆ ಅವಲಂಬಿತ. ಇಲ್ಲಿ ನಮ್ಮ ಆರಿಸುವ ಜಾಣ್ಮೆ ಮುಖ್ಯವಾಗಿರುತ್ತವೆ. ಎಷ್ಟೋ ಒಳ್ಳೆಯ ಪುಸ್ತಕ ಗಳು ಓದುಗರನ್ನು ತಲುಪದೇ ಇರಬಹುದು. ಗಡಿಬಿಡಿಯಲ್ಲಿ ನಾವು ಯಾವತ್ತೂ ಗ್ರಂಥಾಲಯ ಅಥವಾ ಪುಸ್ತಕಗಳ ಅಂಗಡಿಗೆ ಹೋಗಬಾರದು. ಬಹಳಷ್ಟು ಸಮಯ ನಮಗೆ ಇದ್ದಾಗ ತಾಳ್ಮೆಯಿಂದ ಆಯ್ಕೆ ಮಾಡಬಹುದು. ಓದುಗ ವರ್ಗ ಇಂದು ವಿಸ್ತಾರವಾಗಿದೆ, ಆಯ್ಕೆಯೂ ಕೂಡ. ಎಲ್ಲಾ ವಿಭಾಗಗಳಲ್ಲೂ ಸಾಕಷ್ಟು ಪುಸ್ತಕಗಳು ಪ್ರಕಟಗೊಳ್ಳುತ್ತಿವೆ. ಮನರಂಜನೆ, ಜ್ಞಾನವರ್ಧನೆಗಾಗಿ, ಆರೋಗ್ಯ ಸಂಬಂದಿ, ವೈಜ್ಞಾನಿಕ, ತಂತ್ರಜ್ಞಾನ, ಮಕ್ಕಳ ಪುಸ್ತಕಗಳು ಅಲ್ಲದೆ ಇನ್ನೂ ಬೇಕಾದಷ್ಟು ರೀತಿಯ ಪುಸ್ತಕ ಗಳು ಪ್ರಕಟವಾಗುತ್ತಿವೆ. ಓದುಗ ವರ್ಗವೂ ಬೆಳೆಯುತ್ತಿರುವುದು ಸಂತಸದ ಸಂಗತಿ.
1995 ರಲ್ಲಿ ಯುನೆಸ್ಕೋ ಮೊದಲ ಬಾರಿಗೆ ವಿಶ್ವ ಪುಸ್ತಕ ದಿನಾಚರಣೆಯ ಘೋಷಣೆ ಮಾಡಿತು. ಓದುವಿಕೆ, ಪ್ರಕಾಶನ ಮತ್ತು ಕೃತಿಸ್ವಾಮ್ಯ ಗಳ ಬಗ್ಗೆ ಅರಿವು ಮತ್ತು ಪ್ರಚಾರ ಇದರ ಉದ್ದೇಶ.

ಬನ್ನಿ ಪುಸ್ತಕ ಓದೋಣ. “ಪ್ರತಿಯೊಬ್ಬ ವ್ಯಕ್ತಿಯೂ ಒಂದು ಪುಸ್ತಕ, ಪ್ರತಿವರ್ಷ ವೂ ಒಂದು ಅಧ್ಯಾಯ”

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ 

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಸರ್ಕಾರಿ ವೈದ್ಯರು ಆಸ್ಪತ್ರೆಗಳಲ್ಲಿ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಇರಬೇಕು- ಸಚಿವ ಶರಣಪ್ರಕಾಶ್ ಪಾಟೀಲ್

ಸರ್ಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಕರ್ತವ್ಯ ನಿರ್ವಹಿಸುವ ವೈದ್ಯರು ಬೆಳಗ್ಗೆ 9 ಗಂಟೆಯಿಂದ…

14 hours ago

ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧ

ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾದ ಕೃಷಿ ಉತ್ಪನ್ನಗಳ ದೇಸಿ ತಳಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ ಎಂದು ಗದಗ…

14 hours ago

ಕೆಂಪು ಮೆಣಸಿನಕಾಯಿ ಬೆಳೆಗಾರರಿಗೆ ಸಂಕಷ್ಟ | ಬೆಂಬಲ ಬೆಲೆ ಯೋಜನೆ ರಾಜ್ಯಕ್ಕೂ ವಿಸ್ತರಿಸುವಂತೆ ಮುಖ್ಯಮಂತ್ರಿ ಪತ್ರ | ಕೇಂದ್ರದ ಗಮನ ಸೆಳೆದ ಸಚಿವರು |

ಕೆಂಪು ಮೆಣಸಿನಕಾಯಿಗೆ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ-ಎಂಐಎಸ್ ಅಡಿಯಲ್ಲಿ ಬೆಲೆ ಕೊರತೆ ಪಾವತಿ-ಪಿಡಿಪಿ ಯೋಜನೆಯನ್ನು…

14 hours ago

ಅಕ್ರಮ ಮರಳು ಗಣಿಗಾರಿಕೆ | 5 ವರ್ಷಗಳಲ್ಲಿ 47 ಕೋಟಿ ರೂಪಾಯಿ ದಂಡ ಸಂಗ್ರಹ

ಅನಧಿಕೃತ ಮರಳು ಸಾಗಾಟ ತಡೆಯಲು ಜಿಲ್ಲಾ ಮಟ್ಟದಲ್ಲಿ ರಚಿಸಲಾಗಿರುವ ಕಾರ್ಯಪಡೆ ಮರಳು ಸಮಿತಿಗೆ…

14 hours ago

ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಯಶಸ್ಸು ಲಭಿಸುತ್ತದೆ – ಶಿಕ್ಷಣ ತಜ್ಞ ಗುರುರಾಜ ಕರ್ಜಗಿ

ವಿದ್ಯಾರ್ಥಿಗಳು ಪರೀಕ್ಷೆಯ ಬಗ್ಗೆ ಭಯ ಬಿಟ್ಟು, ಪೂರ್ವಭಾವಿ ತಯಾರಿ ಮಾಡಿಕೊಂಡು, ಆತ್ಮವಿಶ್ವಾಸದಿಂದ ಪರೀಕ್ಷೆ…

14 hours ago

ಎಪ್ರಿಲ್‌ನಲ್ಲಿ ಶುಕ್ರನು 9 ರಾಶಿಗಳಲ್ಲಿ ವಿವಿಧ ಪರಿಣಾಮಗಳನ್ನು ಉಂಟುಮಾಡಬಹುದು

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490.

14 hours ago