ಪರಿಸರ ದಿನಕ್ಕೊಂದು ನಮನ | ಹಸಿರಾಗಲಿ ಪರಿಸರ…. ಹಸಿರಾಗಿರಲಿ ಮನಸು….

June 5, 2021
12:30 PM
ಎರಡು ಸುಂದರವಾದ ದೃಶ್ಯ ಗಳ ಚಿತ್ರಣ.‌ ವ್ಯತ್ಯಾಸ ಇಷ್ಟೇ,  ಒಂದು ಹಳ್ಳಿಪ್ರದೇಶದ್ದು, ಇನ್ನೊಂದು  ನಗರ ಪ್ರದೇಶದ್ದು.  ನೋಡಲು ಎರಡು ಚೆಂದವೇ . ಆದರೆ ಮನಸಿಗೆ ಆಪ್ತವಾಗುವುದು  ಹಸಿರಿನ ಹಳ್ಳಿ ಚಿತ್ರವೇ.
ಪರಿಸರ ನಮಗೇನೆಲ್ಲಾ ಕೊಟ್ಟಿದೆ. ತನ್ನೊಳಗಿರುವುದನ್ನೇಲ್ಲಾ ಬಗೆಬಗೆದೇ ಕೊಟ್ಟಾಗಿದೆ. ಶುದ್ಧ ಗಾಳಿ, ನೀರು, ಫಲವತ್ತಾದ ಮಣ್ಣು ಎಲ್ಲವನ್ನೂ  ನಮಗೆ ಕೊಟ್ಟಿದೆ. ಇದರ ಮಡಿಲಲ್ಲಿ ನಮ್ಮನ್ನು ಮಕ್ಕಳಂತೆ ಸಲಹುತ್ತಿದೆ.  ಆದರೆ ನಾವು ಕೊಟ್ಟದ್ದಾದರೂ ಏನು?   ಬರೀ ನೋವನ್ನು.   ನಮ್ಮ ಸುಂದರ ಪರಿಸರ  ನಿರಂತರ ದಬ್ಬಾಳಿಕೆಗೆ  ನಲುಗಿ ಹೋಗಿದೆ.  ಯಾವ ರೀತಿ ರೀತಿ ಎಲ್ಲಾ ಸಾದ್ಯವೋ ಆ ರೀತಿಯೆಲ್ಲಾ  ಉಪಯೋಗಿಸಿ ಕೊಂಡಿದ್ದೇವೆ.  ಒಂದೇ ಎರಡೇ ಹಲವು ರೀತಿಯ ಮಾಲಿನ್ಯಗಳು ನಿಯಂತ್ರಣ ಮೀರಿ  ನಡೆಯುತ್ತಿದೆ. ವಾಯು, ಜಲ, ಶಬ್ದ ಮಾಲಿನ್ಯ ಗಳು ಸೇರಿ ಪರಿಸರವನ್ನು ಹಾಳುಗೆಡವುತ್ತಿದ್ದೇವೆ.  ಇದರ ಕುರಿತು ಜಾಗೃತಿ ಮೂಡಿಸುವ  ಸಲುವಾಗಿ ವಿಶ್ವದಾದ್ಯಂತ ಜೂನ್ 5 ರಂದು   ‘ವಿಶ್ವ ಪರಿಸರ ದಿನ’ ವೆಂದು ಆಚರಿಸಲಾಗುತ್ತದೆ.  1974  ನೇ ಇಸವಿಯಿಂದ ಈ ಆಚರಣೆ ಆರಂಭವಾಯಿತು.   ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ರೀತಿಯ ಕಾರ್ಯಗಳನ್ನು ಜಗತ್ತಿನಾದ್ಯಂತ ಹಮ್ಮಿ ಕೊಳ್ಳಲಾಗುತ್ತಿದೆ.
  ಅನಿರೀಕ್ಷಿತವಾಗಿ  ಬಂದೆರಗಿದ   ಕೋವಿಡ್, ಜನರನ್ನು  ಪರಿಸರದತ್ತ ಮುಖ ಮಾಡುವಂತೆ ಮಾಡಿದೆ.   ಕೃತಕತೆಯಿಂದ ಹೊರಬಂದು ನೈಜತೆಯಲ್ಲಿ ಬದುಕುವ ದಾರಿಯನ್ನು ಕಂಡುಕೊಳ್ಳ ಬೇಕಾದ ಅಗತ್ಯ ಮನಗಾಣುವ ಸಮಯ ಮನುಜನದ್ದು.  ಮನಸು‌ ಶುದ್ಧ ವಾಗಿದ್ದಾಗ ನೋಡುವ ದೃಷ್ಟಿ ಯೂ ಶುದ್ಧವಾಗಿರುತ್ತದೆ. ಮನಸಿನ ಕೊಳಕನ್ನು ದೂರ ಮಾಡಿ ಪರಿಸರದತ್ತ ಮುಖ ಮಾಡುವುದೇ  ನಾವು ಪ್ರಕೃತಿಗೆ  ಕೊಡುವ ಉಡುಗೊರೆ.
“ಪರಿಸರ ವ್ಯವಸ್ಥೆಯ ಪುನರ್ ಸ್ಥಾಪನೆ” ಈ ಬಾರಿಯ ಘೋಷ ವಾಕ್ಯ.
ಬನ್ನಿ ಪ್ರಕೃತಿಯ  ಮತ್ತೆ ಹಸಿರು ಮಾಡುವಲ್ಲಿ ಕೈ ಜೋಡಿಸೋಣ ಆಗದೇ?
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಇಲ್ಲಿ ರೈತರು ಕೀಟನಾಶಕಗಳ ಬದಲಿಗೆ ಬಾತುಕೋಳಿಗಳನ್ನು ಬಳಸುತ್ತಾರೆ..!
June 22, 2025
12:00 PM
by: The Rural Mirror ಸುದ್ದಿಜಾಲ
ರಸ್ತೆ ಬದಿ ನೆಡಲಾಗಿರುವ ಮರಗಳ ಸುತ್ತ ಕನಿಷ್ಠ 1 ಮೀಟರ್ ರಸ್ತೆ  ಬ್ಲಾಕ್ ತೆರವಿಗೆ ಆದೇಶ
June 22, 2025
11:00 AM
by: The Rural Mirror ಸುದ್ದಿಜಾಲ
ಕೃಷಿಯಲ್ಲಿ ಹೆಚ್ಚಿನ ಇಳುವರಿಗಾಗಿ ಎಐ ಕೃಷಿ ನೀತಿ | ಅನುಷ್ಠಾನಕ್ಕಾಗಿ ಸರ್ಕಾರ 500 ಕೋಟಿ ಮೀಸಲು
June 22, 2025
10:00 AM
by: The Rural Mirror ಸುದ್ದಿಜಾಲ
ಭರದಿಂದ ನಡೆಯುತ್ತಿದೆ ಎತ್ತಿನಹೊಳೆ ಯೋಜನೆ | 2027ರೊಳಗೆ ಎತ್ತಿನಹೊಳೆ ನೀರು ಕೋಲಾರ ಭಾಗಕ್ಕೆ
June 22, 2025
9:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group