MIRROR FOCUS

ಪರಿಸರ ದಿನಕ್ಕೊಂದು ನಮನ | ಹಸಿರಾಗಲಿ ಪರಿಸರ…. ಹಸಿರಾಗಿರಲಿ ಮನಸು….

Share
ಎರಡು ಸುಂದರವಾದ ದೃಶ್ಯ ಗಳ ಚಿತ್ರಣ.‌ ವ್ಯತ್ಯಾಸ ಇಷ್ಟೇ,  ಒಂದು ಹಳ್ಳಿಪ್ರದೇಶದ್ದು, ಇನ್ನೊಂದು  ನಗರ ಪ್ರದೇಶದ್ದು.  ನೋಡಲು ಎರಡು ಚೆಂದವೇ . ಆದರೆ ಮನಸಿಗೆ ಆಪ್ತವಾಗುವುದು  ಹಸಿರಿನ ಹಳ್ಳಿ ಚಿತ್ರವೇ.
ಪರಿಸರ ನಮಗೇನೆಲ್ಲಾ ಕೊಟ್ಟಿದೆ. ತನ್ನೊಳಗಿರುವುದನ್ನೇಲ್ಲಾ ಬಗೆಬಗೆದೇ ಕೊಟ್ಟಾಗಿದೆ. ಶುದ್ಧ ಗಾಳಿ, ನೀರು, ಫಲವತ್ತಾದ ಮಣ್ಣು ಎಲ್ಲವನ್ನೂ  ನಮಗೆ ಕೊಟ್ಟಿದೆ. ಇದರ ಮಡಿಲಲ್ಲಿ ನಮ್ಮನ್ನು ಮಕ್ಕಳಂತೆ ಸಲಹುತ್ತಿದೆ.  ಆದರೆ ನಾವು ಕೊಟ್ಟದ್ದಾದರೂ ಏನು?   ಬರೀ ನೋವನ್ನು.   ನಮ್ಮ ಸುಂದರ ಪರಿಸರ  ನಿರಂತರ ದಬ್ಬಾಳಿಕೆಗೆ  ನಲುಗಿ ಹೋಗಿದೆ.  ಯಾವ ರೀತಿ ರೀತಿ ಎಲ್ಲಾ ಸಾದ್ಯವೋ ಆ ರೀತಿಯೆಲ್ಲಾ  ಉಪಯೋಗಿಸಿ ಕೊಂಡಿದ್ದೇವೆ.  ಒಂದೇ ಎರಡೇ ಹಲವು ರೀತಿಯ ಮಾಲಿನ್ಯಗಳು ನಿಯಂತ್ರಣ ಮೀರಿ  ನಡೆಯುತ್ತಿದೆ. ವಾಯು, ಜಲ, ಶಬ್ದ ಮಾಲಿನ್ಯ ಗಳು ಸೇರಿ ಪರಿಸರವನ್ನು ಹಾಳುಗೆಡವುತ್ತಿದ್ದೇವೆ.  ಇದರ ಕುರಿತು ಜಾಗೃತಿ ಮೂಡಿಸುವ  ಸಲುವಾಗಿ ವಿಶ್ವದಾದ್ಯಂತ ಜೂನ್ 5 ರಂದು   ‘ವಿಶ್ವ ಪರಿಸರ ದಿನ’ ವೆಂದು ಆಚರಿಸಲಾಗುತ್ತದೆ.  1974  ನೇ ಇಸವಿಯಿಂದ ಈ ಆಚರಣೆ ಆರಂಭವಾಯಿತು.   ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ರೀತಿಯ ಕಾರ್ಯಗಳನ್ನು ಜಗತ್ತಿನಾದ್ಯಂತ ಹಮ್ಮಿ ಕೊಳ್ಳಲಾಗುತ್ತಿದೆ.
ಅನಿರೀಕ್ಷಿತವಾಗಿ  ಬಂದೆರಗಿದ   ಕೋವಿಡ್, ಜನರನ್ನು  ಪರಿಸರದತ್ತ ಮುಖ ಮಾಡುವಂತೆ ಮಾಡಿದೆ.   ಕೃತಕತೆಯಿಂದ ಹೊರಬಂದು ನೈಜತೆಯಲ್ಲಿ ಬದುಕುವ ದಾರಿಯನ್ನು ಕಂಡುಕೊಳ್ಳ ಬೇಕಾದ ಅಗತ್ಯ ಮನಗಾಣುವ ಸಮಯ ಮನುಜನದ್ದು.  ಮನಸು‌ ಶುದ್ಧ ವಾಗಿದ್ದಾಗ ನೋಡುವ ದೃಷ್ಟಿ ಯೂ ಶುದ್ಧವಾಗಿರುತ್ತದೆ. ಮನಸಿನ ಕೊಳಕನ್ನು ದೂರ ಮಾಡಿ ಪರಿಸರದತ್ತ ಮುಖ ಮಾಡುವುದೇ  ನಾವು ಪ್ರಕೃತಿಗೆ  ಕೊಡುವ ಉಡುಗೊರೆ.
“ಪರಿಸರ ವ್ಯವಸ್ಥೆಯ ಪುನರ್ ಸ್ಥಾಪನೆ” ಈ ಬಾರಿಯ ಘೋಷ ವಾಕ್ಯ.
ಬನ್ನಿ ಪ್ರಕೃತಿಯ  ಮತ್ತೆ ಹಸಿರು ಮಾಡುವಲ್ಲಿ ಕೈ ಜೋಡಿಸೋಣ ಆಗದೇ?
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |

ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…

8 hours ago

ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…

8 hours ago

ತಾಂತ್ರಿಕ ಸಮಸ್ಯೆ | ದೇಶಾದ್ಯಂತ ಯುಪಿಐ, ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ

ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…

8 hours ago

ಹವಾಮಾನ ವರದಿ | 12-04-2025 | ಅಲ್ಲಲ್ಲಿ ಗುಡುಗಿನೊಂದಿಗೆ ಸಾಮಾನ್ಯ ಮಳೆ ಸಾಧ್ಯತೆ | ಎ.13 ರಿಂದ ಮಳೆಯ ಪ್ರಮಾಣ ಕಡಿಮೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶ ಸೇರಿದಂತೆ ಅಲ್ಲಲ್ಲಿ…

15 hours ago

ಕುರುವಾವ್ ಕರುಪ್ ಆಜ್ಞೆಯಂತೆ ಅಗ್ನಿ ಸೇವೆ ಮಾಡುವ ಮಹಾವಿಷ್ಣುಮೂರ್ತಿ

ತುಳುನಾಡಿನ ವಿವಿದೆಡೆ ವಿಷ್ಣುಮೂರ್ತಿ ದೈವದ ನೇಮ, ಒತ್ತೆಕೋಲ ನಡೆಯುತ್ತದೆ. ಈ ಆಚರಣೆಯ ಹಿಂದಿರುವ…

17 hours ago

ಪಟ್ಟೆ ವಿದ್ಯಾ ಸಂಸ್ಥೆಗಳು ಬಡಗನ್ನೂರು ಇನ್ನು ದ್ವಾರಕಾ ಪ್ರತಿಷ್ಠಾನ ಪುತ್ತೂರಿಗೆ ಸೇರ್ಪಡೆ

ಪಟ್ಟೆ ವಿದ್ಯಾ ಸಮಿತಿ (ರಿ)ಯಿಂದ ನಡೆಸಲ್ಪಡುವ ಪ್ರತಿಭಾ ಪ್ರೌಢ ಶಾಲೆ ಪಟ್ಟೆ ಹಾಗೂ…

17 hours ago