Advertisement
ಅಂಕಣ

ಕ್ಷಯ ನಿರ್ಮೂಲನೆಗೆ ವ್ಯಯಿಸಿ, ಜೀವ ಉಳಿಸಿ | Invest to end T B , save lives – ಈ ಬಾರಿಯ ಘೋಷ ವಾಕ್ಯ |

Share

ಅಂದು ಆಕಸ್ಮಿಕವಾಗಿ ಗೆಳತಿ ಬಸ್ಸ್ ನಲ್ಲಿ ಸಿಕ್ಕಿದ್ದಳು. ಎಷ್ಟೋ ವರ್ಷಗಳ ನಂತರ ಸಿಕ್ಕಿದಾಗ ನನಗಂತು ಗೊತ್ತೇ ಆಗಲಿಲ್ಲ. ಅವಳ ಮುಖದಲ್ಲಿ ಕಣ್ಣು ಮಾತ್ರ ಕಾಣುತ್ತಿತ್ತು. ಅಷ್ಟು ವೀಕ್ ಆಗಿ ಬಿಟ್ಟಿದ್ದಳು. ಸದೃಢ ವಾಗಿದ್ದ ಗೆಳತಿ ಹೀಗೇಕಾದಳು ಎಂಬ ಚಿಂತೆ ಕಾಡ ತೊಡಗಿತು. ಬಸ್ಸ್ ಲ್ಲಿ ಸಿಕ್ಕಿದ ಕಾರಣ ಹೆಚ್ಚು ಮಾತಾಡಿಸದೆ ಧೈರ್ಯ ತುಂಬಿದೆ. ಅವಳನ್ನು ನೋಡುತ್ತಲೇ ಅರಿವಿಲ್ಲದೆ ಕಣ್ಣು ಹನಿಗೂಡಿತು.

Advertisement
Advertisement

ಒಂದೆರಡು ದಿನ ಕಳೆಯುತ್ತಲೇ ನಾನಾಕೆಗೆ ಫೋನಾಯಿಸಿದೆ. ಏನಾಯಿತೇ ನಿನಗೆ ಎಂದು ನೇರವಾಗಿ ಕೇಳಿಯೇ ಬಿಟ್ಟೆ. ನಿಟ್ಟುಸಿರು ಬಿಡುತ್ತಾ ಆಕೆ ಹೇಳಿದ ಶಬ್ದ ಕೇಳಿ ನಾನು ಹೌಹಾರಿದೆ. ಹೌದಾ ಹೇಗಾಯ್ತು ಮಾರಾಯಿತಿ ಎನ್ನುತ್ತಲೇ ಅವಳು ಎಲ್ಲಾ ವಿಷಯಗಳನ್ನು ಹೇಳ ತೊಡಗಿದಳು. ಮೊದಲಿಗೆ ಶೀತ ಸುರುವಾಯಿತು. ಅದಕ್ಕೆ ಮದ್ದು ತಗೊಂಡಾಯಿತು. ಸ್ವಲ್ಪ ಕಮ್ಮಿ ಆಯಿತು ಅನ್ನುತ್ತಲೇ ಮತ್ತೆ ಜೋರಾಗ ತೊಡಗಿತು. ಯಾವ ಮದ್ದಿಗೂ ಜಗ್ಗುತ್ತಲೇ ಇರಲಿಲ್ಲ. ಹಲವು ವೈದ್ಯ ರನ್ನು ಭೇಟಿಯಾದರೂ ಉತ್ತರ ಶೂನ್ಯ. ಕೊನೆಗೆ ಹಲವು ಪರೀಕ್ಷೆಗಳ ನಂತರ ಕ್ಷಯ ರೋಗದ ಪತ್ತೆಯಾಯಿತು. ಅದು ಹ್ಯಾಗೆ, ಎಲ್ಲಿಂದ ನನಗೆ ಬಂತೆಂದೇ ತಿಳಿಯದು. ಆದರೆ ಈಗ ಚಿಕಿತ್ಸೆಯ ನಂತರ ನಿಧಾನವಾಗಿ ಚೇತರಿಸಿ ಕೊಳ್ಳುತ್ತಿದ್ದೇನೆ. ದೇವರು ದೊಡ್ಡವನು , ಸಕಾಲದಲ್ಲಿ ಗೊತ್ತಾಯಿತು.

1882 ಮಾರ್ಚ್ 24  ರಂದು ಜರ್ಮನಿಯ ರಾಬರ್ಟ್ ಕೋಚ್ ಎಂಬ ಸಂಶೋಧಕ ಕ್ಷಯ ರೋಗಕ್ಕೆ ಕಾರಣವನ್ನು ಕಂಡು ಹಿಡಿದರು. ಹಾಗಾಗಿ ಈ ದಿನವನ್ನು ಕ್ಷಯ ದಿನವಾಗಿ ಆಚರಿಸಲಾಗುತ್ತದೆ. ಟ್ಯೂಬರ್ ಕ್ಯುಲೋಸಿಸ್ ಮತ್ತು ಮೈಕ್ರೋ ಬ್ಯಾಕ್ಟೀರಿಯಾ ಜಾತಿಯ ಹಲವು ಬ್ಯಾಕ್ಟೀರಿಯಾ ಗಳಿಂದ ಈ ಕಾಯಿಲೆ ಬರುತ್ತದೆ.ಪ್ರಮುಖವಾಗಿ ಶ್ವಾಸಕೋಶಕ್ಕೆ ಹಾನಿ ಮಾಡುವ ಈ ಕಾಯಿಲೆ ಸಾಂಕ್ರಾಮಿಕ ರೋಗ ವಾಗಿದೆ. ಆಮೇಲೆ ದೇಹದ ಇತರ ಅಂಗಗಳಿಗೂ ಹರಡಲಾರಂಭಿಸುತ್ತದೆ. ಆರಂಭದಲ್ಲಿ ಪತ್ತೆ ಹಚ್ಚಿದರೆ ಚಿಕಿತ್ಸೆ ಬೇಗನೆ ಪರಿಣಾಮಕಾರಿ. ಮಾಮೂಲು ಶೀತ ಕೆಮ್ಮೆಂದೇ ಭಾಸವಾಗುವ ಈ ಕಾಯಿಲೆ ಬಂದದ್ದೇ ಗೊತ್ತಾಗದು. ಕೂದಲು ಹಾಗೂ ಉಗುರಿನ ಹೊರತು ದೇಹದೆಲ್ಲಾ ಭಾಗಗಳಲ್ಲೂ ತನ್ನಾಟವನ್ನು ಕ್ಷಯ ತೋರಿಸಿ ಬಿಡ ಬಹುದು.
ಸಕಾಲದಲ್ಲಿ ಔಷಧೀಯ ಚಿಕಿತ್ಸೆ ದೊರೆತಾಗ. ಕ್ಷಯದಿಂದ ಸಂಪೂರ್ಣ ಗುಣಮುಖರಾಗ ಬಹುದು. ಪೌಷ್ಟಿಕ ಆಹಾರ, ಅಗತ್ಯ ಚಿಕಿತ್ಸೆ ಗಳಿಂದ ಪೂರ್ಣ ಗುಣಮುಖರಾಗ ಬಹುದು.
Advertisement
2025 ರ ವೇಳೆಗೆ ಕರ್ನಾಟಕ ದಿಂದ ಕ್ಷಯ ರೋಗವನ್ನು ಮುಕ್ತವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಹಲವು ಯೋಜನೆಗಳನ್ನು ಹಮ್ಮಿ ಕೊಂಡಿದೆ. ಅಗತ್ಯ ಆರೋಗ್ಯಾಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದೆ. ಜಾಗತಿಕ ಕ್ಷಯ ರೋಗದ ವರದಿಯ ಪ್ರಕಾರ ಜಗತ್ತಿನ ಶೇ 26 ರಷ್ಟು ಪಾಲು ಭಾರತದಲ್ಲೇ ಇದೆ. ಎರಡು ನಿಮಿಷಕ್ಕೆ ಮೂರು ಜನ ಸಾಯುತ್ತಿರುವುದು ಇದರ ಗಂಭೀರತೆಯನ್ನು ಸಾರುತ್ತದೆ. ಈ ನಿಟ್ಟಿನಲ್ಲಿ ಜನ ಜಾಗೃತಿಯೊಂದೇ ಪರಿಹಾರ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |

ದಶಕಗಳ ಹಿಂದೆ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು ರೈತರ ಷೇರು ಪಡೆದುಕೊಂಡು ಹತ್ತೊ…

5 hours ago

ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ

ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು…

5 hours ago

ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜೇನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…

9 hours ago

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |

ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…

9 hours ago

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |

ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…

10 hours ago

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |

ಮಳೆಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ ಪರ್ಜನ್ಯ ಜ‌ಪ ನೆರವೇರಿತು.

11 hours ago