Advertisement
ಮನಸಿನ ಮಾತು

ಮನೆ ಬೆಳಗುವ ಮಹಿಳೆಯ ದಿನವಿಂದು | ವಿಶ್ವ ಮಹಿಳಾ ದಿನದ ಶುಭಾಶಯ

Share

“ವಿಶ್ವ ಮಹಿಳಾ ದಿನ” ದ ಶುಭಾಶಯಗಳು

ಸಣ್ಣಪುಟ್ಟ ಸಂಗತಿಗಳು ದಿನನಿತ್ಯದ ಬದುಕಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಅದೊಂದು ನಗುವಿರಬಹುದು,  ಬೆಳಗಿನ ನಮಸ್ಕಾರವಿರಬಹುದು, ಶುಭಾಶಯಗಳಿರ ಬಹುದು . ನಿನ್ನೆಯಿಂದಲೇ ಒಬ್ಬೊಬ್ಬ ರದೇ ಮೆಸೇಜ್ ಗಳನ್ನು  ಓದುವಾಗಲೇ ನಿರ್ಧರಿಸಿದ್ದೆ ಇವತ್ತು ಖುಷಿಯಿಂದಲೇ ಇಡೀ  ದಿನವನ್ನು  ಸವಿಯಬೇಕೆಂದು. ಅದರಲ್ಲೇನಿದೆ ನಿನ್ನೆಯಂತೆಯೇ ಅಲ್ಲವೇ ಇಂದು ಎಂದು ಪ್ರಶ್ನೆ ತಯಾರಿದೆಯಲ್ಲವೇ?  ಹೌದು ನಿನ್ನೆಯಂತೆಯೇ ಇಂದು. ತಾರೀಖು, ವಾರ  ಮಾತ್ರ ವ್ಯತ್ಯಾಸ. ಅದೇ ಮುಂಜಾವಿನ ಸೂರ್ಯೋದಯ,ಅದೇ ಹಕ್ಕಿಗಳ ಕಲರವ.  ಅದೇ ನಿತ್ಯಕರ್ಮಗಳು, ಅದೇ ಜನ, ಸೇಮ್ ಟು ಸೇಮ್. ಆದರೂ ಕೂಡ ನನಗಿಂದು ವಿಶೇಷ ದಿನವೇ. !

ಮಾರ್ಚ್ 8 ವಿಶ್ವ ಮಹಿಳಾ ದಿನ.  ಯಾಕೆ ಈ ಆಚರಣೆಗಿಷ್ಟು ಪ್ರಚಾರ?  ಮನಸು ಮೃದು, ಮಾತು ಕಠೋರ.  ತನ್ನೆಲ್ಲ ನಿರ್ಧಾರಗಳನ್ನು  ಭವಿಷ್ಯದ  ಕುರಿತು ಲಕ್ಷ್ಯವಿಟ್ಟು  ತೆಗೆದುಕೊಳ್ಳುವುದು ಮಹಿಳೆಯ  ವಿಶೇಷತೆ.

ಅಂದು ಅದೊಂದು ಪ್ರಮುಖ ಹೋರಾಟ ಒಬ್ಬ ಸಾಮಾನ್ಯ ಮಹಿಳೆಯನ್ನು ಅಸಾಮಾನ್ಯವಾಗಿಸಿತು.  ನ್ಯೂಯಾರ್ಕ್ ನ  ಕಾರ್ಮಿಕ ಮಹಿಳೆ ಕ್ಲಾರಾ ಜೆಟ್ ಕಿನ್  ಕೆಲಸಕ್ಕಾಗಿ , ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯ ಕ್ಕಾಗಿ ತಿಂಗಳಾನುಗಟ್ಟಲೆ ಹೋರಾಟ ಮಾಡಿ   ಗೆಲುವು ಸಾಧಿಸಿದ ದಿನ.  ಆದ್ದರಿಂದ ಈ ದಿನವನ್ನು ಸಾಧನೆಯ ದಿನ, ಮಹಿಳಾ ಯಶಸ್ಸಿನ ದಿನವೆಂದು  ಸಂಭ್ರಮಿಸುತ್ತೇವೆ.

1975 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ‘ ವಿಶ್ವ ಮಹಿಳಾ ದಿನ’ವೆಂದು ಘೋಷಿಸಿತು. ದೊಡ್ಡ ದೊಡ್ಡ ಪ್ರಶಸ್ತಿಗಳು ಸಿಕ್ಕಿದರಷ್ಟೇ ಯಶಸ್ವಿ ಮಹಿಳೆ  ಎಂಬ ಮಾತು ಯಾಕೋ ಬೇಸರವುಂಟು ಮಾಡುತ್ತದೆ.  ಬದುಕಿನ ಪ್ರತಿಯೊಂದು ನಡೆಯಲ್ಲೂ ಎದುರಾಗುವ ಸಮಸ್ಯೆಗಳು ನಿರಂತರವಾಗಿ ಪ್ರಶ್ನೆ ಪತ್ರಿಕೆಗಳಾಗಿ  ಕಾಡುತ್ತವೆ. ತಾಳ್ಮೆ ಯಿಂದ ಉಪಾಯವಾಗಿ ಉತ್ತರಿಸುತ್ತಾ ಮುನ್ನಡೆದಾಗ ಗೋಜಲುಗಳು ನಿವಾರಣೆಯಾಗುತ್ತಾ  ಪರಿಹಾರ ತಾನಾಗಿಯೇ ದೊರೆಯಿತ್ತದೆ. ದೈಹಿಕ ಆರೋಗ್ಯ ದೊಂದಿಗೆ  ಮನಸ್ಸಿನ ಆರೋಗ್ಯವನ್ನು ಸಮರ್ಥವಾಗಿ ಕಾಪಾಡಿಕೊಂಡಾಗ ಮಹಿಳೆ ಯಶಸ್ವಿಯಾಗಿ , ಗಟ್ಟಿಗಿತ್ತಿಯಾಗಿ  ಹೊರಹೊಮ್ಮುತ್ತಾಳೆ.
ಎಲ್ಲಾ ಹೆಣ್ಣು ಮಕ್ಕಳಿಗೂ ‘ ವಿಶ್ವ ಮಹಿಳಾ ದಿನ’ದ ಶುಭಾಶಯಗಳು.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಅಂಡಮಾನಿಗೆ ಮುಂಗಾರು ಶೀಘ್ರ ಪ್ರವೇಶ ಸಾಧ್ಯತೆ : ಕೇರಳಕ್ಕೆ ಮುಂಗಾರು ಬೇಗನೆ ಆಗಮನದ ಸೂಚನೆ

ಮೇ 15 ರ ಸುಮಾರಿಗೆ ಮುಂಗಾರು ಅಂಡಮಾನ್ ಸಮುದ್ರ ಪ್ರವೇಶಿಸುವ ಸಾಧ್ಯತೆ ಇದೆ.…

10 hours ago

ಹವಾಮಾನ ವರದಿ | 14-05-2026 | ಮೇ 20-25 ರೊಳಗೆ ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಮುಂದುವರಿದಿದೆ. ಮೇ 20-25ರೊಳಗೆ…

10 hours ago

ಹವಾಮಾನ ವರದಿ | 13-05-2026| ಕರ್ನಾಟಕದಲ್ಲಿ ಇನ್ನೂ ಕೆಲ ದಿನ ಗುಡುಗು ಸಹಿತ ಮಳೆ| ಮೇ 20-25ರೊಳಗೆ ಮುಂಗಾರು ಪ್ರವೇಶ ಸಾಧ್ಯತೆ!

ಕರ್ನಾಟಕದಲ್ಲಿ 14.05.2026ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ ಕರಾವಳಿ, ಮಲೆನಾಡು…

1 day ago

ಹವಾಮಾನ ವರದಿ | 12-05-2026 | ಮೇ 20ರ ಸುಮಾರಿಗೆ ಕರಾವಳಿಯಲ್ಲಿ ಮುಂಗಾರು ಮಾದರಿಯ ಮಳೆ ಸಾಧ್ಯತೆ..! |

ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು ಮುಂದುವರಿದರೂ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ…

2 days ago

ರೋಸ್ಟೆಡ್‌ ಅಡಿಕೆ- ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ | “ರೋಸ್ಟೆಡ್‌ ಅಡಿಕೆ” ವರ್ಗೀಕರಣಕ್ಕೆ ಮುದ್ರೆ, ಜಪ್ತಿ ಸರಕುಗಳಿಗೆ ಮಾರ್ಗಸೂಚಿ

‘ರೋಸ್ಟೆಡ್‌ ಅಡಿಕೆ’ ವರ್ಗೀಕರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ತಾತ್ಕಾಲಿಕ…

3 days ago