Advertisement
ಮನಸಿನ ಮಾತು

ಮನೆ ಬೆಳಗುವ ಮಹಿಳೆಯ ದಿನವಿಂದು | ವಿಶ್ವ ಮಹಿಳಾ ದಿನದ ಶುಭಾಶಯ

Share

“ವಿಶ್ವ ಮಹಿಳಾ ದಿನ” ದ ಶುಭಾಶಯಗಳು

ಸಣ್ಣಪುಟ್ಟ ಸಂಗತಿಗಳು ದಿನನಿತ್ಯದ ಬದುಕಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಅದೊಂದು ನಗುವಿರಬಹುದು,  ಬೆಳಗಿನ ನಮಸ್ಕಾರವಿರಬಹುದು, ಶುಭಾಶಯಗಳಿರ ಬಹುದು . ನಿನ್ನೆಯಿಂದಲೇ ಒಬ್ಬೊಬ್ಬ ರದೇ ಮೆಸೇಜ್ ಗಳನ್ನು  ಓದುವಾಗಲೇ ನಿರ್ಧರಿಸಿದ್ದೆ ಇವತ್ತು ಖುಷಿಯಿಂದಲೇ ಇಡೀ  ದಿನವನ್ನು  ಸವಿಯಬೇಕೆಂದು. ಅದರಲ್ಲೇನಿದೆ ನಿನ್ನೆಯಂತೆಯೇ ಅಲ್ಲವೇ ಇಂದು ಎಂದು ಪ್ರಶ್ನೆ ತಯಾರಿದೆಯಲ್ಲವೇ?  ಹೌದು ನಿನ್ನೆಯಂತೆಯೇ ಇಂದು. ತಾರೀಖು, ವಾರ  ಮಾತ್ರ ವ್ಯತ್ಯಾಸ. ಅದೇ ಮುಂಜಾವಿನ ಸೂರ್ಯೋದಯ,ಅದೇ ಹಕ್ಕಿಗಳ ಕಲರವ.  ಅದೇ ನಿತ್ಯಕರ್ಮಗಳು, ಅದೇ ಜನ, ಸೇಮ್ ಟು ಸೇಮ್. ಆದರೂ ಕೂಡ ನನಗಿಂದು ವಿಶೇಷ ದಿನವೇ. !

ಮಾರ್ಚ್ 8 ವಿಶ್ವ ಮಹಿಳಾ ದಿನ.  ಯಾಕೆ ಈ ಆಚರಣೆಗಿಷ್ಟು ಪ್ರಚಾರ?  ಮನಸು ಮೃದು, ಮಾತು ಕಠೋರ.  ತನ್ನೆಲ್ಲ ನಿರ್ಧಾರಗಳನ್ನು  ಭವಿಷ್ಯದ  ಕುರಿತು ಲಕ್ಷ್ಯವಿಟ್ಟು  ತೆಗೆದುಕೊಳ್ಳುವುದು ಮಹಿಳೆಯ  ವಿಶೇಷತೆ.

ಅಂದು ಅದೊಂದು ಪ್ರಮುಖ ಹೋರಾಟ ಒಬ್ಬ ಸಾಮಾನ್ಯ ಮಹಿಳೆಯನ್ನು ಅಸಾಮಾನ್ಯವಾಗಿಸಿತು.  ನ್ಯೂಯಾರ್ಕ್ ನ  ಕಾರ್ಮಿಕ ಮಹಿಳೆ ಕ್ಲಾರಾ ಜೆಟ್ ಕಿನ್  ಕೆಲಸಕ್ಕಾಗಿ , ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯ ಕ್ಕಾಗಿ ತಿಂಗಳಾನುಗಟ್ಟಲೆ ಹೋರಾಟ ಮಾಡಿ   ಗೆಲುವು ಸಾಧಿಸಿದ ದಿನ.  ಆದ್ದರಿಂದ ಈ ದಿನವನ್ನು ಸಾಧನೆಯ ದಿನ, ಮಹಿಳಾ ಯಶಸ್ಸಿನ ದಿನವೆಂದು  ಸಂಭ್ರಮಿಸುತ್ತೇವೆ.

1975 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ‘ ವಿಶ್ವ ಮಹಿಳಾ ದಿನ’ವೆಂದು ಘೋಷಿಸಿತು. ದೊಡ್ಡ ದೊಡ್ಡ ಪ್ರಶಸ್ತಿಗಳು ಸಿಕ್ಕಿದರಷ್ಟೇ ಯಶಸ್ವಿ ಮಹಿಳೆ  ಎಂಬ ಮಾತು ಯಾಕೋ ಬೇಸರವುಂಟು ಮಾಡುತ್ತದೆ.  ಬದುಕಿನ ಪ್ರತಿಯೊಂದು ನಡೆಯಲ್ಲೂ ಎದುರಾಗುವ ಸಮಸ್ಯೆಗಳು ನಿರಂತರವಾಗಿ ಪ್ರಶ್ನೆ ಪತ್ರಿಕೆಗಳಾಗಿ  ಕಾಡುತ್ತವೆ. ತಾಳ್ಮೆ ಯಿಂದ ಉಪಾಯವಾಗಿ ಉತ್ತರಿಸುತ್ತಾ ಮುನ್ನಡೆದಾಗ ಗೋಜಲುಗಳು ನಿವಾರಣೆಯಾಗುತ್ತಾ  ಪರಿಹಾರ ತಾನಾಗಿಯೇ ದೊರೆಯಿತ್ತದೆ. ದೈಹಿಕ ಆರೋಗ್ಯ ದೊಂದಿಗೆ  ಮನಸ್ಸಿನ ಆರೋಗ್ಯವನ್ನು ಸಮರ್ಥವಾಗಿ ಕಾಪಾಡಿಕೊಂಡಾಗ ಮಹಿಳೆ ಯಶಸ್ವಿಯಾಗಿ , ಗಟ್ಟಿಗಿತ್ತಿಯಾಗಿ  ಹೊರಹೊಮ್ಮುತ್ತಾಳೆ.
ಎಲ್ಲಾ ಹೆಣ್ಣು ಮಕ್ಕಳಿಗೂ ‘ ವಿಶ್ವ ಮಹಿಳಾ ದಿನ’ದ ಶುಭಾಶಯಗಳು.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?

ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…

5 hours ago

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

16 hours ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

20 hours ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

21 hours ago

ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ

ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸುವಂತೆ…

23 hours ago

ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ

ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕೃಷಿಕರ ಜೀವನೋಪಾಯಕ್ಕೆ ನಿರ್ಬಂಧ ಹೇರಬಾರದು, ಕಸ್ತೂರಿ ರಂಗನ್…

24 hours ago