“ವಿಶ್ವ ಮಹಿಳಾ ದಿನ” ದ ಶುಭಾಶಯಗಳು
ಸಣ್ಣಪುಟ್ಟ ಸಂಗತಿಗಳು ದಿನನಿತ್ಯದ ಬದುಕಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಅದೊಂದು ನಗುವಿರಬಹುದು, ಬೆಳಗಿನ ನಮಸ್ಕಾರವಿರಬಹುದು, ಶುಭಾಶಯಗಳಿರ ಬಹುದು . ನಿನ್ನೆಯಿಂದಲೇ ಒಬ್ಬೊಬ್ಬ ರದೇ ಮೆಸೇಜ್ ಗಳನ್ನು ಓದುವಾಗಲೇ ನಿರ್ಧರಿಸಿದ್ದೆ ಇವತ್ತು ಖುಷಿಯಿಂದಲೇ ಇಡೀ ದಿನವನ್ನು ಸವಿಯಬೇಕೆಂದು. ಅದರಲ್ಲೇನಿದೆ ನಿನ್ನೆಯಂತೆಯೇ ಅಲ್ಲವೇ ಇಂದು ಎಂದು ಪ್ರಶ್ನೆ ತಯಾರಿದೆಯಲ್ಲವೇ? ಹೌದು ನಿನ್ನೆಯಂತೆಯೇ ಇಂದು. ತಾರೀಖು, ವಾರ ಮಾತ್ರ ವ್ಯತ್ಯಾಸ. ಅದೇ ಮುಂಜಾವಿನ ಸೂರ್ಯೋದಯ,ಅದೇ ಹಕ್ಕಿಗಳ ಕಲರವ. ಅದೇ ನಿತ್ಯಕರ್ಮಗಳು, ಅದೇ ಜನ, ಸೇಮ್ ಟು ಸೇಮ್. ಆದರೂ ಕೂಡ ನನಗಿಂದು ವಿಶೇಷ ದಿನವೇ. !
ಮಾರ್ಚ್ 8 ವಿಶ್ವ ಮಹಿಳಾ ದಿನ. ಯಾಕೆ ಈ ಆಚರಣೆಗಿಷ್ಟು ಪ್ರಚಾರ? ಮನಸು ಮೃದು, ಮಾತು ಕಠೋರ. ತನ್ನೆಲ್ಲ ನಿರ್ಧಾರಗಳನ್ನು ಭವಿಷ್ಯದ ಕುರಿತು ಲಕ್ಷ್ಯವಿಟ್ಟು ತೆಗೆದುಕೊಳ್ಳುವುದು ಮಹಿಳೆಯ ವಿಶೇಷತೆ.
ಅಂದು ಅದೊಂದು ಪ್ರಮುಖ ಹೋರಾಟ ಒಬ್ಬ ಸಾಮಾನ್ಯ ಮಹಿಳೆಯನ್ನು ಅಸಾಮಾನ್ಯವಾಗಿಸಿತು. ನ್ಯೂಯಾರ್ಕ್ ನ ಕಾರ್ಮಿಕ ಮಹಿಳೆ ಕ್ಲಾರಾ ಜೆಟ್ ಕಿನ್ ಕೆಲಸಕ್ಕಾಗಿ , ಸಮಾನ ವೇತನಕ್ಕಾಗಿ, ಹೆರಿಗೆ ಸೌಲಭ್ಯ ಕ್ಕಾಗಿ ತಿಂಗಳಾನುಗಟ್ಟಲೆ ಹೋರಾಟ ಮಾಡಿ ಗೆಲುವು ಸಾಧಿಸಿದ ದಿನ. ಆದ್ದರಿಂದ ಈ ದಿನವನ್ನು ಸಾಧನೆಯ ದಿನ, ಮಹಿಳಾ ಯಶಸ್ಸಿನ ದಿನವೆಂದು ಸಂಭ್ರಮಿಸುತ್ತೇವೆ.
1975 ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ‘ ವಿಶ್ವ ಮಹಿಳಾ ದಿನ’ವೆಂದು ಘೋಷಿಸಿತು. ದೊಡ್ಡ ದೊಡ್ಡ ಪ್ರಶಸ್ತಿಗಳು ಸಿಕ್ಕಿದರಷ್ಟೇ ಯಶಸ್ವಿ ಮಹಿಳೆ ಎಂಬ ಮಾತು ಯಾಕೋ ಬೇಸರವುಂಟು ಮಾಡುತ್ತದೆ. ಬದುಕಿನ ಪ್ರತಿಯೊಂದು ನಡೆಯಲ್ಲೂ ಎದುರಾಗುವ ಸಮಸ್ಯೆಗಳು ನಿರಂತರವಾಗಿ ಪ್ರಶ್ನೆ ಪತ್ರಿಕೆಗಳಾಗಿ ಕಾಡುತ್ತವೆ. ತಾಳ್ಮೆ ಯಿಂದ ಉಪಾಯವಾಗಿ ಉತ್ತರಿಸುತ್ತಾ ಮುನ್ನಡೆದಾಗ ಗೋಜಲುಗಳು ನಿವಾರಣೆಯಾಗುತ್ತಾ ಪರಿಹಾರ ತಾನಾಗಿಯೇ ದೊರೆಯಿತ್ತದೆ. ದೈಹಿಕ ಆರೋಗ್ಯ ದೊಂದಿಗೆ ಮನಸ್ಸಿನ ಆರೋಗ್ಯವನ್ನು ಸಮರ್ಥವಾಗಿ ಕಾಪಾಡಿಕೊಂಡಾಗ ಮಹಿಳೆ ಯಶಸ್ವಿಯಾಗಿ , ಗಟ್ಟಿಗಿತ್ತಿಯಾಗಿ ಹೊರಹೊಮ್ಮುತ್ತಾಳೆ.
ಎಲ್ಲಾ ಹೆಣ್ಣು ಮಕ್ಕಳಿಗೂ ‘ ವಿಶ್ವ ಮಹಿಳಾ ದಿನ’ದ ಶುಭಾಶಯಗಳು.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.
''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…
ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…
ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.
ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…
ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…