Advertisement
ವಿಶೇಷ ವರದಿಗಳು

ಸುಬ್ರಹ್ಮಣ್ಯದಲ್ಲಿ ಅಂಬುಲೆನ್ಸ್‌ ಸೇವೆ ಲೋಕಾರ್ಪಣೆ | ಒಂದು ತಿಂಗಳಲ್ಲಿ ಯೋಜನೆ ಪೂರೈಸಿದ “ಯುವತೇಜಸ್ಸು” | ಸಾಬೀತಾದ ಯುವಶಕ್ತಿಯ “ತೇಜಸ್ಸು” |

Share

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿಯ ಸಡಗರ. ಈ ನಡುವೆ ಯುವಶಕ್ತಿಯ ತೇಜಸ್ಸು ಎಲ್ಲೆಡೆಯೂ ಕಂಡಿತು. ಅದು ಆರೋಗ್ಯದ ಸೇವೆಯ ಮೂಲಕ…!. ಸುಬ್ರಹ್ಮಣ್ಯದಲ್ಲಿ ಯುವ ತೇಜಸ್ಸು ಟ್ರಸ್ಟ್ ವತಿಯಿಂದ ಅಂಬ್ಯುಲೆನ್ಸ್ ಲೋಕಾರ್ಪಣೆಯ ಕಾರ್ಯಕ್ರಮ ಅದು. ಆಧ್ಯಾತ್ಮ ಗುರು ವಿನಯ ಗುರೂಜಿ ಅವರು ಅಂಬುಲೆನ್ಸ್‌ ಸೇವೆ ಲೋಕಾರ್ಪಣೆ ಮಾಡಿದರು.ಯುವತೇಜಸ್ಸಿನಿಂದ ಇದು ಎರಡನೇ ಅಂಬುಲೆನ್ಸ್‌ ಸೇವೆ.

Advertisement
Advertisement
Advertisement

ಸಮಾಜ ಸೇವೆಯ ಉದ್ದೇಶವಿಟ್ಟುಕೊಂಡು ಹುಟ್ಟಿಕೊಂಡ ಯುವ ತೇಜಸ್ಸು ಒಂದಿಷ್ಟು ಸಮಾಜಕ್ಕಾಗಿ ಎಂಬ ಧ್ಯೇಯೋದ್ದೇಶದೊಂದಿಗೆ ಕೆಲಸ ಮಾಡುತ್ತಿದೆ. ಇದೀಗ ಯುವತೇಜಸ್ಸು  ವತಿಯಿಂದ ಸುಬ್ರಹ್ಮಣ್ಯದಲ್ಲಿ ಅಂಬ್ಯುಲೆನ್ಸ್ ಸೇವೆಯು ಪವಿತ್ರ ಷಷ್ಠಿಯ ದಿನದಂದು  ಲೋಕಾರ್ಪಣೆಗೊಂಡಿತು. ಯುವ ತೇಜಸ್ಸು ಬಳಗ ಇದುವರೆಗೆ ನೂರಾರು ಜನರ ನೋವಿಗೆ ಸ್ಪಂದಿಸಿ ನೆರವಾಗುವ ಮೂಲಕ ಸಮಾಜ ಸೇವೆ ಮಾಡುತ್ತಾ ಬಂದಿದೆ.ಇದೀಗ ಅಂಬುಲೆನ್ಸ್‌ ಸೇವೆಯ ಮೂಲಕ ಸಮಾಜಕ್ಕೆ ಬೆಳಕಾಗಿದೆ.

Advertisement

ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೊಂದು ಅಂಬ್ಯುಲೆನ್ಸ್ ಯೋಜನೆಯಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ ಅಂಬ್ಯುಲೆನ್ಸ್ ಖರೀದಿಗೆ ಬೇಕಾದ ಧನ ಸಹಾಯ ಸಂಗ್ರಹವಾಗಲು ಯುವ ತೇಜಸ್ಸಿನ ಎಲ್ಲಾ ಸದಸ್ಯರು ಒಂದಾಗಿ ಕೆಲಸ ಮಾಡಿದರು. ಅನೇಕ ದಾನಿಗಳು ಯುವ ತೇಜಸ್ಸಿನ ಪರವಾಗಿ ನಿಂತರು. ಹೀಗಾಗಿ ಅತಿ ಶೀಘ್ರದಲ್ಲಿ ಸಮಾಜಮುಖಿ ಕೆಲಸ ಮಾಡಲು ಸಾಧ್ಯವಾಯಿತು.ತುರ್ತು ಸಂದರ್ಭಗಳಲ್ಲಿ ಅಂಬ್ಯುಲೆನ್ಸ್ ನ ಸೇವೆ ಪಡೆಯಬಹುದಾಗಿದೆ.

Advertisement

ನೂತನ ಸೇವೆಯನ್ನು ಆಧ್ಯಾತ್ಮ ಗುರು  ವಿನಯ್ ಗುರೂಜಿ ಅವರು ಆಂಬ್ಯುಲೆನ್ಸ್ ಚಲಾಯಿಸಿ ಶುಭಾರ್ಶೀವಾದ ಮಾಡಿದರು.

ಈ ಸಂದರ್ಭ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳದ ಕಾರ್ಯನಿರವಹಣಾಧಿಕಾರಿ ನಿಂಗಯ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ. ರಂಗಯ್ಯ ಶೆಟ್ಟಿಗಾರ್ , ಉದ್ಯಮಿ ರವಿ ಕಕ್ಕೆಪದವು ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರಿನ ಎಸ್‌ಆರ್‌ಕೆ ಲಾಡರ್ಸ ಮಾಲಕರು  ಕೇಶವ ಎ., ಶಿವಕುಮಾರ್ ಹೊಸೊಳಿಕೆ, ಅಶೋಕ್ ನೆಕ್ರಾಜೆ ಮೊದಲಾದವರು, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀವತ್ಸ ಬೆಂಗಳೂರು ಇದ್ದರು.

Advertisement

Advertisement

ಗ್ರಾಮ ಪಂಚಾಯತು ಸದಸ್ಯರುಗಳಾದ ಎಚ್‌.ಎಲ್. ವೆಂಕಟೇಶ್ ಹಾಗೂ  ಭಾರತಿ ದಿನೇಶ್, ವಿಮಲಾ ರಂಗಯ್ಯ, ಪುಷ್ಷಾ ಡಿ ಕಾನತ್ತೂರು,  ಶ್ಯಾಮಲ ಕಲ್ಲಾಜೆ ಉಪಸ್ಥಿತರಿದ್ದರು.

ಅಶ್ವಮೇಧ,ಯುವ ಬ್ರಿಗೇಡ್,ಗಾಂಗೇಯ ಕ್ರಿಕೆಟರ್ಸ್,ಜೆಸಿಐ ಕುಕ್ಕೆ ಸುಬ್ರಹ್ಮಣ್ಯ, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ, ಶ್ರೀರಾಮ್ ಕ್ರಿಕೆಟರ್ಸ್ ದೇವರಹಳ್ಳಿ, ಕುಕ್ಕೆಶ್ರೀ ಟ್ಯಾಕ್ಸಿ ಚಾಲಕ ಮಾಲ್ಹಕರು, ವರ್ತಕರ ಸಂಘದ ಪದಾಧಿಕಾರಿಗಳು,
ಕುಕ್ಕೆಶ್ರೀ ಅಟೋ ಚಾಲಕ ಮಾಲಕರು, ತುಳುವಪ್ಪೆ ಜೋಕುಲು ವಾಟ್ಸಾಪ್ ಗ್ರೂಪ್, ಬಿ.ಎಮ್.ಎಸ್ ಅಟೋ ಚಾಲಕ ಮಾಲಕರು ಇದರ ಪದಾಧಿಕಾರಿಗಳು,ಯುವ ತೇಜಸ್ಸಿನ ಸದಸ್ಯರು ಹಾಗೂ ದಾನಿಗಳು ಮತ್ತು ಹಿತೈಷಿಗಳು  ಜೊತೆಯಲ್ಲಿದ್ದರು.

Advertisement

 

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |

ದಶಕಗಳ ಹಿಂದೆ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು ರೈತರ ಷೇರು ಪಡೆದುಕೊಂಡು ಹತ್ತೊ…

8 hours ago

ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ

ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು…

8 hours ago

ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜೇನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…

13 hours ago

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |

ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…

13 hours ago

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |

ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…

14 hours ago

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |

ಮಳೆಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ ಪರ್ಜನ್ಯ ಜ‌ಪ ನೆರವೇರಿತು.

15 hours ago