ಅಜ್ಜಾವರ : ವೃದ್ಧೆಗೆ ನೆರವು ನೀಡಿದ ಸ್ಥಳೀಯರು

September 6, 2019
10:13 AM

ಅಜ್ಜಾವರ: ಅಜ್ಜಾವರ ಗ್ರಾಮದ ನೆಹರುನಗರದಲ್ಲಿ ತಂಗುಣಿ ಎಂಬ ವೃದ್ದೆಯ ಮನೆಯು ಧಾರಕಾರ ಸುರಿದ ಮಳೆಗೆ ಕುಸಿದುಬಿದ್ದಿದ್ದು ಸ್ಥಳೀಯರು ತಕ್ಷಣ ಸಹಾಯ ಮಾಡಿದ್ದಾರೆ.

ಮನೆ ಕುಸಿತವಾದದ್ದನ್ನು ಗಮನಿಸಿದ ಸ್ಥಳೀಯ ವ್ಯಕ್ತಿ ಅಬ್ದಲ್ ಖಾದರ್ ಅವರು ತಕ್ಷಣವೇ  ಸಮಾಜಸೇವಕ ಮಿಧುನ್ ಕರ್ಲಾಪ್ಪಾಡಿಯವರಿಗೆ ತಿಳಿಸಿ ತಕ್ಷಣ ಗ್ರಾಮ ಕಾರಣಿಕರ ಮುಖಾಂತರ  ತಹಶಿಲ್ದಾರರ ಗಮನಕ್ಕೆ ತಂದು ಅವರಿಗೆ ಪಡಿತರ ಚೀಟಿ, 94 C ಯ ಮುಖಾಂತರ ಸ್ಧಳವನ್ನು ನೀಡುವುದು ಮತ್ತು ಇನ್ನಿತರ ವ್ಯವಸ್ಥೆಯಗಳನ್ನು ಮಾಡಿಸಿಕೊಟ್ಟು ಇದೀಗ ಒಬ್ಬಂಟಿ ವೃದ್ದೆ ತಂಗುಣಿ ಅವರಿಗೆ  ನೆರವಾಗಲು ಒಂದು ದಿನದ ಶ್ರಮಾದಾನದ ಮೂಲಕ ಟರ್ಪಲ್ ಹಾಕಿ ತಾತ್ಕಾಲಿಕ ಛಾವಣಿ ರಚಿಸಿ ನೀಡಲಾಯಿತು.

ಟರ್ಪಲ್ಲನ್ನು ಗ್ರಾಮ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ಎ ಪಿ ಮತ್ತು ಅಬ್ದಲ್ಲ ಅಜ್ಜಾವ ಅವರು ಪಂಚಾಯತ್ ಪರವಾಗಿ ನೀಡಿದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ಶ್ರಮದಾನದ ಸಂದರ್ಭದಲ್ಲಿ ಭೇಟಿ ನೀಡಿದರು .

ಮುಂದೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು ಈ ಶ್ರಮದಾನದಲ್ಲಿ ವಿಶ್ವನಾಧ , ರವಿ , ಬಾಬು , ಮಿಧುನ್ ಕರ್ಲಾಪ್ಪಾಡಿ ,ಅಬ್ದಲ್ ಖಾದರ್ , ಹನೀಫ್ , ಅಬ್ದಲ್ಲ ಮತ್ತಿತರರು ಉಪಸ್ಥಿತಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ
July 22, 2026
3:55 PM
by: ಸಾಯಿಶೇಖರ್ ಕರಿಕಳ
ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ
July 21, 2026
11:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ
July 21, 2026
4:32 PM
by: ಸಾಯಿಶೇಖರ್ ಕರಿಕಳ
ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ
July 20, 2026
10:59 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror