ಅಡಿಕೆ ಧಾರಣೆ ಏರಿಕೆಯೂ… ಕಳ್ಳರ ಭಯವೂ….!

December 12, 2019
10:13 AM

ಸುಳ್ಯ: ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿದೆ. ದಿನದಿಂದ ದಿನಕ್ಕೆ ಅಡಿಕೆ ಧಾರಣೆ ಉತ್ತಮವಾಗಿದೆ. ಕಳೆದ ವರ್ಷದ ಕೊಳೆರೋಗದ ಪರಿಣಾಮ ಹಾಗೂ ಮಾರುಕಟ್ಟೆಯಲ್ಲಿ  ಅಡಿಕೆಯ ಕೊರತೆಯ ಕಾರಣದಿಂದ ಈಗ ಧಾರಣೆ ಏರುಹಾದಿಯಲ್ಲಿದೆ. ಇದರ ಜೊತೆಗೇ ಈಗ ಕಳ್ಳರ ಭಯವೂ ಆರಂಭವಾಗಿದೆ. ಹೀಗಾಗಿ ಗ್ರಾಮೀಣ ಭಾಗಗಳಲ್ಲಿ  ರಾತ್ರಿ ವೇಳೆ ಪೊಲೀಸ್ ಬೀಟ್ ವ್ಯವಸ್ಥೆ ಬಲಗೊಳ್ಳಬೇಕು ಎಂಬ ಬೇಡಿಕೆ ವ್ಯಕ್ತವಾಗುತ್ತಿದೆ.

ಅಡಿಕೆ ಸೇರಿದಂತೆ ಯಾವುದೇ ಕೃಷಿ ವಸ್ತುಗಳ ಧಾರಣೆ ಏರಿದಂತೆ ಆ ವಸ್ತುಗಳ ಕಳ್ಳತನವೂ ಹೆಚ್ಚಾಗುತ್ತದೆ. ಕಳೆದ ಬಾರಿಯೂ ಧಾರಣೆ ಏರಿದ ನಂತರ ಕಳ್ಳರ ಭಯವೂ ಹೆಚ್ಚಾಗಿತ್ತು. ವಿಟ್ಲ, ಪುತ್ತೂರು ಪ್ರದೇಶದಲ್ಲಿ  ಅಡಿಕೆ ಗೋಡೌನ್ ಗಳಿಂದ ಕಳ್ಳತನವಾದ ವರದಿಯಾಗಿದೆ. ಕಳ್ಳರೂ ಸೆರೆಯಾಗಿದ್ದಾರೆ. ಈ ಬಾರಿಯೂ ಕಳ್ಳರ ಭಯ ಶುರುವಾಗಿದೆ. ರಾತ್ರಿ ವೇಳೆ ಅನುಮಾಸ್ಪದವಾಗಿ ಓಮ್ನಿ ಕಾರುಗಳು, ಪಿಕ್ ಅಪ್ ಗಳು ತಿರುಗಾಡಲು ಶುರುವಾಗಿದೆ ಎಂಬ ವದಂತಿ ಇದೆ. ಹೀಗಾಗಿ ಬೆಳೆಗಾರರು ಹಾಗೂ ವ್ಯಾಪಾರಿಗಳ ಹಿತದೃಷ್ಠಿಯಿಂದ  ಅಲ್ಲಲ್ಲಿ ಸಿಸಿ ಕ್ಯಾಮಾರಗಳು ಸುಸ್ಥಿತಿಯಲ್ಲಿಡುವಂತೆ ಮಾಡುವುದು ಸೇರಿದಂತೆ ಕೃಷಿಕರು, ವ್ಯಾಪಾರಿಗಳು ಸಂಶಯ ಕಂಡುಬಂದರೆ ತಕ್ಷಣವೇ ಎಚ್ಚೆತ್ತು ಸ್ಥಳೀಯ ತಂಡ ಮಾಡಿ ಪೊಲೀಸರಿಗೆ ಮಾಹಿತಿ ನೀಡುವ ಕೆಲಸ ಆಗಬೇಕಾಗಿದೆ. ಇದರ ಜೊತೆಗೆ ಪೊಲೀಸ್ ಬೀಟ್ ಗಳು ಬಲಗೊಳ್ಳಬೇಕು ಹಾಗೂ ರಾತ್ರಿ ವೇಳೆ ತಪಾಸಣೆ ಆರಂಭವಾಗಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ಈಚೆಗೆ ಸುಳ್ಯ ತಾಲೂಕಿನ ಪಂಜದಲ್ಲಿ ಅನುಮಾಸ್ಪದವಾಗಿ ತಿರುಗಾಡುತ್ತಿದ್ದ ಕಾರೊಂದರ ಬಗ್ಗೆ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror