ಅಸಹಾಯಕ ಸ್ಥಿತಿಯಲ್ಲಿ ಪುನೀತ್ ಕೆದ್ಕಾರು , ದಾನಿಗಳಿಂದ ನೆರವಿಗೆ ಮೊರೆ

August 27, 2019
1:00 PM

ನರಿಮೊಗರು: ಈ ಯುವಕ ನೋಡಲು ಎಲ್ಲರಂತೆಯೇ ಸಾಮಾನ್ಯರಂತೆಯೇ ಕಾಣುತ್ತಾರೆ.ಆದರೆ ಇವರ ಸಮಸ್ಯೆ ಮಾತ್ರ ವಿಶೇಷವಾದದು.ಸುಮಾರು 27 ವರ್ಷ ಪ್ರಾಯದ ಈ ಯುವಕನ ಹೆಸರು ಪುನೀತ್,ನರಿಮೊಗರು ಗ್ರಾಮದ ಕೆದ್ಕಾರು ನಿವಾಸಿ ಮೋನಪ್ಪ ಗೌಡರ ಪುತ್ರ.

ಈ ಯುವಕನಿಗೆ ಹುಟ್ಟುವಾಗಲೇ ಮೂತ್ರಕೋಶ ಹಾಗೆ ಜನನಾಂಗವಿಲ್ಲದೆ ಇದ್ದವರು.ಹೊಕ್ಕಳು ಮೂಲಕ ಮೂತ್ರ ಹೋಗುತ್ತಿದ್ದು,ಶಸ್ತ್ರ ಚಿಕಿತ್ಸೆ ಬಳಿಕ ಹೊರಗಡೆ ಚೀಲ ಜೋಡಿಸಿ ಮೂತ್ರ ಹೋಗುವಂತೆ ಪುನೀತ್ ಆವರು 5 ವರ್ಷದ ಬಾಲಕನಾಗಿದ್ದಾಗ ಮಾಡಲಾಗಿತ್ತು.ಇದು ವೈದ್ಯಕೀಯ ಲೋಕದಲ್ಲೇ ವಿಶೇಷ ಪ್ರಕರಣವೆಂದು ಮಾಧ್ಯಮಗಳಲ್ಲಿ 22 ವರ್ಷಗಳ ಹಿಂದೆ ಭಾರಿ ಸುದ್ದಿಯಾಗಿತ್ತು.ಹೀಗೆ ಬಾಲ್ಯದಿಂದ ಈಗಿನವರೆಗೂ ಈತನ ಚಿಕಿತ್ಸೆಗಾಗಿ ಮನೆಯವರು ಲಕ್ಷಾಂತರ ವ್ಯಯ ಮಾಡಿದ್ದಾರೆ.

ಹಲವು ಬಾರಿ ಕಿಡ್ನಿ ಸಮಸ್ಯೆ ಕಂಡು ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ.ಆದರೆ ಕೆಲ ಸಮಯದಿಂದ ತೀರಾ ಅನಾರೋಗ್ಯ ಎದುರಿಸುತ್ತಿರುವ ಈ ಯುವಕನ ಮನೆಯವರಿಗೆ ಈಗ ಮಗನ ಚಿಕಿತ್ಸೆಗೆ ಹಣ ಹೊಂದಿಸುವುದು ಸವಾಲಿನ ಕೆಲಸವಾಗಿದೆ.ಈಗ ಅನಾರೋಗ್ಯದಿಂದಾಗಿ ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈಗಾಗಲೇ ಚಿಕಿತ್ಸೆಗಾಗಿ ಲಕ್ಷಾಂತರ ವ್ಯಯಿಸಲಾಗಿದ್ದು,ಮುಂದಿನ ಚಿಕಿತ್ಸೆಗೆ ಆರ್ಥಿಕ ಅಡಚಣೆಯಲ್ಲಿದ್ದಾರೆ.  ಇವರು ದಾನಿಗಳು ಆರ್ಥಿಕ ಸಹಕಾರ ನೀಡುವಂತೆ ವಿನಂತಿಸಿಕೊಂಡಿದ್ದಾರೆ.
ಸಹಾಯ ಮಾಡುವ ದಾನಿಗಳು ಈ ಖಾತೆಗೆ ಜಮೆ ಮಾಡುವಂತೆ ಕೋರಿದ್ದಾರೆ. ಸಂಪರ್ಕ ಮೋನಪ್ಪ ಗೌಡ 8496827014, 9980575433

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ
September 9, 2026
1:50 PM
by: ಸಾಯಿಶೇಖರ್ ಕರಿಕಳ
ಕ್ಯಾಂಪ್ಕೋ ಅಭಿವೃದ್ಧಿಯ ಹಾದಿಯಲ್ಲಿ: ₹2,900 ಕೋಟಿ ಅಡಿಕೆ ವ್ಯವಹಾರದ ನಡುವೆ ಮುಂದಿರುವ ಸವಾಲುಗಳೇನು?
September 9, 2026
6:43 AM
by: ಅರುಣ್‌ ಕುಮಾರ್ ಕಾಂಚೋಡು
ಅಡಿಕೆಯಷ್ಟೇ ಅಲ್ಲ ಅದೇ ಮರಕ್ಕೆ ವೆನಿಲ್ಲಾ ಬಳ್ಳಿ | ಅಸ್ಸಾಂನಲ್ಲಿ ಅಡಿಕೆಯ ಜೊತೆಗೆ ಇನ್ನೊಂದು ಬೆಳೆ..
September 8, 2026
11:10 PM
by: ದ ರೂರಲ್ ಮಿರರ್.ಕಾಂ
ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ
September 8, 2026
10:02 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror