ನವದೆಹಲಿ: ರಾಜ್ಯಸಭೆಯಲ್ಲಿ ಇಂದು (ಫೆ.11) ರಂದು ಮಹತ್ವದ ವಿಧೇಯಕ ಮಂಡನೆಯಾಗಲಿದೆ ಎನ್ನುವ ಸೂಚನೆ ಲಭ್ಯವಾಗಿದೆ. ಬಿಜೆಪಿ ಸಂಸದರು ಕಡ್ಡಾಯವಾಗಿ ಇಂದು ಹಾಜರಿರಬೇಕು ಎಂದು ವಿಪ್ ಜಾರಿ ಮಾಡಿದೆ. ನಿನ್ನೆ ಜಾರಿ ಮಾಡಿದ 3 ಸಾಲಿನ ವಿಪ್ ನಲ್ಲಿ ನಾಳೆ ಸದನಕ್ಕೆ ಹಾಜರಾಗುವಂತೆ ಮತ್ತು “ಸರ್ಕಾರದ ನಿಲುವನ್ನು ಬೆಂಬಲಿಸುವಂತೆ” ಹೇಳಿದೆ. ಯಾವ ನಿಲುವು ಇತ್ಯಾದಿಗಳ ಮಾಹಿತಿ ಇಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಏಕರೂಪ ನಾಗರಿಕ ಸಂಹಿತೆ ಕಾಯಿದೆ ಜಾರಿಗೆ ಬರಲಿದೆಯೇ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel