ಕುಶಾಲನಗರದಲ್ಲಿ ಸೇನಾ ಆಯ್ಕೆ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ತರಬೇತಿ ಶಿಬಿರ

October 27, 2019
6:37 PM

ಮಡಿಕೇರಿ : ಭಾರತೀಯ ಸೇನೆಗೆ ಸೇರಲು ಮಡಿಕೇರಿಯಲ್ಲಿ ನಡೆದ ಸೇನಾ ಆಯ್ಕೆ ಶಿಬಿರದಲ್ಲಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಕುಶಾಲನಗರದ ಅನುಗ್ರಹ ಕಾಲೇಜಿನಲ್ಲಿ ಆರಂಭಿಸಿದ ಲಿಖಿತ ಪರೀಕ್ಷೆಯ ಉಚಿತ ಕಾರ್ಯಾಗಾರವನ್ನು ನಿವೃತ್ತ ಯೋಧರಾದ ಗಣೇಶ್ ಪೊನ್ನಪ್ಪ ಉದ್ಘಾಟಿಸಿದರು.

Advertisement

ನಂತರ ಮಾತನಾಡಿದ ಅವರು, ಸೇನೆಗೆ ಸೇರಲು ಈಗಾಗಲೇ ಮೆಡಿಕಲ್ ಹಾಗೂ ಫಿಸಿಕಲ್ ವಿಭಾಗದಲ್ಲಿ ನೇಮಕವಾಗಿರುವ ಅಭ್ಯರ್ಥಿಗಳಿಗೆ ಬಹು ಮುಖ್ಯ ಘಟ್ಟ ಲಿಖಿತ ಪರೀಕ್ಷೆ ಎದುರಿಸುವುದಾಗಿದೆ. ಕುಶಾಲನಗರದ ನಿವೃತ್ತ ಯೋಧರಾದ ಜನಾರ್ಧನ್ ಅವರ ಪರಿಶ್ರಮದಿಂದ ಬಹಳಷ್ಟು ಯುವಕರು ಇತ್ತೀಚಿನ ವರ್ಷಗಳಲ್ಲಿ ಆಯ್ಕೆಯಾಗುತ್ತಿರುವುದು ಸಂತಸದ ವಿಚಾರ. ಅಭ್ಯರ್ಥಿಗಳು ಸೇನೆಗೆ ಸೇರುವುದು ಅದೊಂದು ಬದುಕಿನ ಸೌಭಾಗ್ಯ ಎಂಬಂತೆ ಸ್ವೀಕರಿಸಿ ದೇಶ ಸೇವೆ ಮಾಡುವ ಅವಕಾಶವನ್ನು ಪಡೆದುಕೊಳ್ಳಬೇಕು, ಸತತವಾದ ಅಧ್ಯಯನ ಹಾಗೂ ಪರಿಶ್ರಮದಿಂದ ಸೇನಾ ಲಿಖಿತ ಪರೀಕ್ಷೆ ಎದುರಿಸಲು ಕರೆಕೊಟ್ಟರು.

ನಿವೃತ್ತ ಹವಾಲ್ದಾರ್ ಜನಾರ್ಧನ್ ಮಾತನಾಡಿ, ಸೇನೆಗೆ ಸೇರುವ ಮಕ್ಕಳಿಗೆ ನಾವು ಉಚಿತವಾದ ಸೇವೆ ಒದಗಿಸುತ್ತಿದ್ದೇವೆ. ನುರಿತ ಸಂಪನ್ಮೂಲ ಶಿಕ್ಷಕರಿಂದ ಜನವರಿ 16 ರ ವರೆಗೂ ಉಚಿತವಾಗಿ ಪ್ರತೀ ಶನಿವಾರ ಹಾಗೂ ಭಾನುವಾರಗಳಂದು ತರಗತಿ ಕೊಡಲಿದ್ದೇವೆ. ಅಭ್ಯರ್ಥಿಗಳು ಸಮಯ ಪಾಲನೆ ಮತ್ತು ಶಿಸ್ತಿನಿಂದ ಈ ಉಚಿತ ಶಿಬಿರದ ಸದುಪಯೋಗ ಪಡೆಯಲು ಕರೆಕೊಟ್ಟರು.

ಅನುಗ್ರಹ ಕಾಲೇಜಿನ ಪ್ರಾಂಶುಪಾಲ ಪಂಡರೀನಾಥ ನಾಯ್ಡು ಅವರು ಉಪಸ್ಥಿತರಿದ್ದರು.

Advertisement

 

Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ
July 4, 2025
12:56 PM
by: ಸಾಯಿಶೇಖರ್ ಕರಿಕಳ
ಪುತ್ತೂರು ಪ್ರಕರಣ | ಶಾಸಕ ಅಶೋಕ್‌ ಕುಮಾರ್‌ ರೈ ಅವರ ಬರಹ ಇದು… | ನಾವೀಗ ಆಕೆಗೆ ನೀಡಬೇಕಾಗಿರುವುದು ಧೈರ್ಯ ಮತ್ತು ಸ್ಥೈರ್ಯ
July 4, 2025
9:45 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ
July 4, 2025
7:36 AM
by: The Rural Mirror ಸುದ್ದಿಜಾಲ
ಬುಧ ಮತ್ತು ಶನಿ ಕಾಟದಿಂದ ಈ ರಾಶಿಯವರು ಸ್ವಲ್ಪ ಜೋಪಾನವಾಗಿರಬೇಕು
July 4, 2025
7:24 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group