ಕೊರೊನಾ ಲಾಕ್ಡೌನ್ | ಹೇರ್ ಕಟ್ಟಿಂಗ್ ಮಾಡಿಸಲಾಗದೆ ತಡಕಾಡುವ ಜನ | ಈಗ ಫೇಮಸ್ಸಾಗುತ್ತಿದೆ ಕೊರೊನಾ ಕಟ್ಟಿಂಗ್ |

April 15, 2020
8:18 PM

ಸುಳ್ಯ: ಕೊರೊನಾ ಲಾಕ್ಡೌನ್ ಇನ್ನೂ ಮುಂದುವರಿದಿದೆ. ಮೇ.3 ರವೆರೆಗೆ ಕೊರೊನಾ ಲಾಕ್ಡೌನ್ ಕಾರಣದಿಂದ ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಇತರ ಅಂಗಡಿಗಳು ತೆರೆಯುವಂತಿಲ್ಲ. ಹೀಗಾಗಿ ಸೆಲೂನ್ ಅಂಗಡಿಗಳೂ ಬಂದ್. ಈ ಕಾರಣದಿಂದ ಜನರು ಹೇರ್ ಕಟ್ಟಿಂಗ್ ಮಾಡಿಸಲಾಗದೆ ತಡಕಾಡುತ್ತಿದ್ದಾರೆ. ಅನೇಕರು ತಾವೇ ಸ್ವತ: ಹೇರ್ ಕಟ್ಟಿಂಗ್ ಮಾಡಿಸಿ ಕೊರೊನಾ ಕಟ್ಟಿಂಗ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ನಡುವೆಯೂ ಸುಳ್ಯ ಸೇರಿದಂತೆ ಕೆಲವು ಕಡೆ ಬೆಳ್ಳಂಬೆಳಗ್ಗೆ ಕೆಲವು ಪ್ರಮುಖ ಅಂಗಡಿಗಳು ಅರ್ಧ ಬಾಗಿಲು ತೆರೆದು ಕೆಲವೇ ವ್ಯಕ್ತಿಗಳ ಹೇರ್ ಕಟ್ಟಿಂಗ್ ಗೆ ಅವಕಾಶ  ನೀಡುತ್ತಿದೆ ಎಂಬ ಮಾಹಿತಿ  ಇದೆ. ಇಂತಹ ಅವಕಾಶಗಳು ಗ್ರಾಮೀಣ ಭಾಗದವರೆಗೂ ಸಿಗಲಿ ಎಂದೂ ಒತ್ತಾಯ ಕೇಳಿಬಂದಿದೆ.

Advertisement
Advertisement

ಕೊರೊನಾ ವೈರಸ್ ಹರಡುವುದನ್ನು  ತಡೆಯಲು ಬ್ಯೂಟಿ ಪಾರ್ಲರ್, ಮೆನ್ಸ್ ಪಾರ್ಲರ್ ಸೇರಿದಂತೆ ಸೆಲೂನ್ ಗಳು ಬಂದ್ ಆಗಿದ್ದವು. ಇದ್ದಕ್ಕಿದ್ದಂತೆ ಬಂದ್ ಆದ ಪರಿಣಾಮ ಹೇರ್ ಕಟ್ಟಿಂಗ್ ಮಾಡಿಸಲಾಗದೇ ಉಳಿದವರು  ತಲೆ ಕೆಡಿಸಿಕೊಂಡಿದ್ದಾರೆ. ಇದೇ ಕಾರಣದಿಂದ ಹಲವರಿಗೆ ಶೀತ-ತಲೆನೋವು ಕಂಡುಬಂದು ಸ್ವತ: ಹೇರ್ ಕಟ್ಟಿಂಗ್ ಗೆ ಮುಂದಾದರು. ಇದಕ್ಕೆ ಕೊರೊನಾ ಕಟ್ಟಿಂಗ್ ಎಂದೂ ಹೆಸರಿಟ್ಟಿದ್ದಾರೆ. ಅಗತ್ಯ ಸೇವೆ ಇದು ಎಂದು ಮುಂಜಾಗ್ರತಾ ಕ್ರಮಗಳೊಂದಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಜನರು ಮಾಡಿದರೆ,  ವೃತ್ತಿಯವರಿಗೆ ಮುಂದಿನ ರಶ್ ಕಡಿಮೆ ಮಾಡಲು ಈಗಲೂ ಮುಂಜಾಗ್ರತಾ ಕ್ರಮಗಳೊಂದಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಇದೆ. ಈ ನಡುವೆ ಕೆಲವು ಕಡೆ ಬೆಳಗ್ಗೆ ಅಂಗಡಿಗಳು ಅರ್ಧ ಬಾಗಿಲಿನಿಂದ ಕೆಲಸ ಮಾಡುತ್ತವೆ ಎಂದೂ ಹೇಳಲಾಗುತ್ತದೆ. ಹೀಗಾಗಿ ಅವಕಾಶ ಇದ್ದರೆ ಎಲ್ಲಾ ಕಡೆಯೂ ಅವಕಾಶ ಸಿಗಬೇಕು ಎಂಬುದು ಇನ್ನೊಂದು ಒತ್ತಾಯ.

ಒಟ್ಟಿನಲ್ಲಿ ಕೊರೊನಾ ವೈರಸ್ ಈಗ ಹೇರ್ ಕಟ್ಟಿಂಗ್ ಗೂ ಸಂಕಷ್ಟ ತಂದಿಟ್ಟಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದಿಶಾಂತ್‌ ಕೆ ಎಸ್
July 23, 2025
7:46 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಪ್ರಣಮ್ಯ ಡಿ
July 23, 2025
7:39 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಆಧಾರಿತ ಬೆಳೆ ವಿಮೆಗೆ ಸಮಸ್ಯೆ | ಮಳೆ ಮಾಪನ ಯಂತ್ರಗಳ ನಿರ್ವಹಣೆ ಅವ್ಯವಸ್ಥೆ ಸರಿಪಡಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ
July 23, 2025
7:21 AM
by: The Rural Mirror ಸುದ್ದಿಜಾಲ
ಅರಣ್ಯ ಪ್ರದೇಶದೊಳಗೆ ದನ-ಕರು, ಕುರಿ ಮೇಯಿಸುವುದಕ್ಕೆ ನಿಷೇಧ ಹೇರಿದ ಅರಣ್ಯ ಇಲಾಖೆ
July 23, 2025
7:09 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group