ಸುಳ್ಯ: ಇಂದು ಮುಂಜಾನೆ ನಿಧನರಾದ ಸುಳ್ಯದ ಹಿರಿಯ ಪತ್ರಕರ್ತ, ಪಯಸ್ವಿನಿ ಪತ್ರಿಕೆಯ ಸಂಪಾದಕರಾಗಿದ್ದ ಚಂದ್ರೇಶ್ ಗೋರಡ್ಕ (48) ಅವರ ಅಂತ್ಯ ಸಂಸ್ಕಾರ ಅಜ್ಜಾವರ ಗ್ರಾಮದ ಗೋರಡ್ಕದಲ್ಲಿ ನಡೆಯಿತು.
Advertisement
ಲಿವರ್ ಸಂಬಂಧಿ ಕಾಯಿಲೆಯಿಂದ ಬಳಲಿ ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಸೋಮವಾರ ಬೆಳಗ್ಗಿನ ಜಾವ 2.30 ಕ್ಕೆ ಕೊನೆಯುಸಿರೆಳೆದರು.ಆಸ್ಪತ್ರೆಯಿಂದ ಮೃತದೇಹವನ್ನು ಗೋರಡ್ಕ ಮನೆಗೆ ಕೊಂಡೊಯ್ಯಲಾಯಿತು. ಸಂಬಂಧಿಕರು, ಮಿತ್ರರು, ಸಾರ್ವಜನಿಕರು ಸೇರಿ ನೂರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು.
Advertisement
3.30 ಕ್ಕೆ ಶ್ರದ್ಧಾಂಜಲಿ ಸಭೆ: ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಚಂದ್ರೇಶ್ ಗೋರಡ್ಕ ಅವರಿಗೆ ಶ್ರದ್ಧಾಂಜಲಿ ಸಭೆ ಇಂದು 3.30 ಕ್ಕೆ ಪ್ರೆಸ್ ಕ್ಲಬ್ ನಲ್ಲಿ ನಡೆಯಲಿದೆ ಎಂದು ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಅಂಘದ ಅಧ್ಯಕ್ಷ ಮುರಳೀಧರ ಅಡ್ಡನಪಾರೆ ತಿಳಿಸಿದ್ದಾರೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement