ಜಯನಗರ ಹಿಂದು ರುದ್ರ ಭೂಮಿಯ ಪರಿಸರದಲ್ಲಿ ಶ್ರಮದಾನ

September 15, 2019
5:22 PM

ಸುಳ್ಯ: ಜಯನಗರ ವಿಕ್ರಮ ಯುವಕ ಮಂಡಲ ಹಾಗೂ ನಗರ ಪಂಚಾಯತ್ ಸುಳ್ಯ ಇದರ ಆಶ್ರಯದಲ್ಲಿ ಜಯನಗರ ಹಿಂದು ರುದ್ರ ಭೂಮಿಯ ಪರಿಸರದಲ್ಲಿ ಶ್ರಮ ದಾನ ಕಾರ್ಯಕ್ರಮ ಭಾನುವಾರ ನಡೆಯಿತು.

Advertisement
Advertisement

ಪರಿಸರದಲ್ಲಿ ಕಾಡುಗಿಡಗಳು ಬೃಹತ್ ಪ್ರಮಾಣದಲ್ಲಿ ಬೆಳೆದು ,ಗಿಡ ಬಳ್ಳಿಗಳಿಂದ ರುದ್ರ ಭೂಮಿಗೆ ಸಾಗುವ ದಾರಿಯಲ್ಲಿ ಆವರಿಸಿಕೊಂಡಿದೆ.ಸುಳ್ಯ ನ.ಪಂ ವತಿಯಿಂದ ದೀಪಗಳು ,ದಾರಿ ದೀಪಗಳು ಅಳವಡಿಸಲಾಗಿದ್ದರೂ ಇದೀಗ ಅದು ಯಾವುದು ಈಗ ಕೆಲಸಕ್ಕೆ ಬಾರದೆ ಪರಿಸರ ಕತ್ತಲುಮಯವಾಗಿದೆ.ಸ್ಥಳೀಯರ ಪ್ರಕಾರ ಕಳೆದ ಕೆಲವು ದಿನಗಳ ಹಿಂದೆ ರಾತ್ರಿ ವೇಳೆಯಲ್ಲಿ ಒಂದು ಮೃತ ದೇಹವನ್ನು ಶವಸಂಸ್ಕಾರಕ್ಕೆ ತಂದಿದ್ದು ಸ್ಥಳದಲ್ಲಿ ದೀಪದ ಬೆಳಕಿನ ಸೌಲಭ್ಯಗಳು ಇಲ್ಲದ ಕಾರಣದಿಂದಾಗಿ ಮೃತ ಶರೀರವನ್ನು ಬೇರೆ ಕಡೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಸ್ಥಳೀಯ ಸಂಘಸಂಸ್ಥೆಗಳು ಶ್ರಮದಾನದ ಮೂಲಕ ಪರಿಹಾರಕ್ಕೆ ಮುಂದಾದರು. ಸಂಬಂಧಿಸಿದ ಇಲಾಖೆಗಳು ಸ್ಪಂದಿಸಿ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂದೆ ಬರಬೇಕಾಗಿದೆ. ಕಳೆದ ಕೆಲವು ವರ್ಷಗಳಿಂದ ವಿಕ್ರಮ ಯುವಕ ಮಂಡಲ .ರಿ.ಜಯನಗರ ಸಂಘದಿಂದ ಈ ಪರಿಸರದಲ್ಲಿ ಶ್ರಮದಾನ ನಡೆಸಿ ಸಹಕಾರ ನೀಡಲಾಗುತ್ತಿದೆ.
ಶ್ರಮದಾನ ಮಾತ್ರ ಸಾಲದು ,ಮೂಲಭೂತ ಸೌಲಭ್ಯಗಳಾದ ದಾರಿ ದೀಪ,ಹೈಮಾಕ್ಸ್ ದೀಪಗಳ ದುರಸ್ತಿ ಕಾರ್ಯ ಕೂಡಲೆ ನಡೆಯಬೇಕಾಗಿದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.

Advertisement

ಶ್ರಮದಾನದ ಸಂದರ್ಭ  ನ.ಪಂ ಸ್ಥಳೀಯ ಸದಸ್ಯೆ ಶಿಲ್ಪಾ ಸುದೇವ,ವಿಕ್ರಮ ಯುವಕ ಮಂಡಲ ಅದ್ಯಕ್ಷ ಪ್ರಸನ್ನ ಎಂ ಆರ್,ಮಾಜಿ ಅದ್ಯಕ್ಷರುಗಳಾದ ಪ್ರವೀಣ್ ಕುಮಾರ್,ಸುರೇಂದ್ರ ಕಾಮತ್,ಸುಧೇವ ಜಯನಗರ,ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು  ಭಾಗವಹಿಸಿದರು.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ
ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror