ನಿನ್ನೆ,ಇಂದು ,ನಾಳೆ..

August 27, 2019
12:00 PM
ಬಾಲ್ಯ ಕಳೆದು ಹೋಗಿದೆ
ಇಂದು ಬೀಗುತ್ತಿದೆ ಯೌವನ
ಬೆನ್ನ ಹಿಂದೆ ಬರುತಿರುವುದು
ಮುಪ್ಪಲ್ಲವೇ…?
ಮನದಲ್ಲಿ ಹಳೆನೆನಪು
ಡಂಗೂರ ಸಾರುತಿರೆ
ಮುಪ್ಪಿನ ಚಿಂತೆಯೇಕೆ ಮನಕೆ?
ಬೇಡವೆಂದರೂ ಬರುವ ಮುಪ್ಪು
ಕರೆದಾಗ ಬರುವುದೇ ಬಾಲ್ಯ ?
ನಿನ್ನೆ,ನಾಳೆಯ ಅರಿವಿಲ್ಲದೆ
ಇಂದು ಮನದಲ್ಲಿ ‘ಅಹಂ’
ನಿನ್ನೆ ಆಡಿದ ಜಗಳ
ಇಂದು ಅದೇ..!
ಬದಲಾವಣೆ ಇದೆ
ನಿನ್ನೆ ಆಟಿಕೆಗಳಿಗಾಗಿ
ಇಂದು ಮೂರಡಿ ಜಾಗಕ್ಕಾಗಿ
ನಾಳೆ ನಿನ್ನೆಯ ದಿನಗಳ ಹಿನ್ನೋಟವಷ್ಟೇ..!
ನಿನ್ನೆ ಅಂತರಾಳದ ಮಾತು
ಇಂದು ಜಗಳದಿಂದ ಮುನಿಸು
ನಾಳೆ ಬರೀ ಚಿಂತೆ
ಮತ್ತೆ ಚಿತೆ
ಇದೇ ಮನುಜನ ಜೀವನ
ನಿನ್ನೆ ಇಂದು ನಾಳೆಗಳ ಸಮಾಗಮ
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಪರರನ್ನು ಮೆಟ್ಟಿಲಾಗಿಸಿದ ಸಾಧನೆ ಶಾಶ್ವತವಲ್ಲ: ಆತ್ಮವಂಚನೆಯ ಅಂಧಕಾರದತ್ತ ಕರೆದೊಯ್ಯುವ ಮಾರ್ಗ
February 20, 2026
7:30 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹಿರಿಯರ ಪರಿಶ್ರಮದ ಫಲ ಮಕ್ಕಳಿಗೆ ಪರವಾನಗಿ ಆಗಬಾರದು
February 20, 2026
7:20 AM
by: ಡಾ.ಚಂದ್ರಶೇಖರ ದಾಮ್ಲೆ
ಹೊಸರುಚಿ | ಹಲಸಿನ ಕಾಯಿ ಬೋಂಡಾ ರೆಸಿಪಿ – ಇದು ರುಚಿಕರ ಗ್ರಾಮೀಣ ಸ್ನ್ಯಾಕ್
February 15, 2026
6:32 AM
by: ದಿವ್ಯ ಮಹೇಶ್
ಜೀವನಪ್ರೀತಿ
February 15, 2026
6:21 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror