ನಿನ್ನೆ,ಇಂದು ,ನಾಳೆ..

September 12, 2019
5:00 PM
ಬಾಲ್ಯ ಕಳೆದು ಹೋಗಿದೆ
ಇಂದು ಬೀಗುತ್ತಿದೆ ಯೌವನ
ಬೆನ್ನ ಹಿಂದೆ ಬರುತಿರುವುದು
ಮುಪ್ಪಲ್ಲವೇ…?
ಮನದಲ್ಲಿ ಹಳೆನೆನಪು
ಡಂಗೂರ ಸಾರುತಿರೆ
ಮುಪ್ಪಿನ ಚಿಂತೆಯೇಕೆ ಮನಕೆ?
ಬೇಡವೆಂದರೂ ಬರುವ ಮುಪ್ಪು
ಕರೆದಾಗ ಬರುವುದೇ ಬಾಲ್ಯ ?
ನಿನ್ನೆ,ನಾಳೆಯ ಅರಿವಿಲ್ಲದೆ
ಇಂದು ಮನದಲ್ಲಿ ‘ಅಹಂ’
ನಿನ್ನೆ ಆಡಿದ ಜಗಳ
ಇಂದು ಅದೇ..!
ಬದಲಾವಣೆ ಇದೆ
ನಿನ್ನೆ ಆಟಿಕೆಗಳಿಗಾಗಿ
ಇಂದು ಮೂರಡಿ ಜಾಗಕ್ಕಾಗಿ
ನಾಳೆ ನಿನ್ನೆಯ ದಿನಗಳ ಹಿನ್ನೋಟವಷ್ಟೇ..!
ನಿನ್ನೆ ಅಂತರಾಳದ ಮಾತು
ಇಂದು ಜಗಳದಿಂದ ಮುನಿಸು
ನಾಳೆ ಬರೀ ಚಿಂತೆ
ಮತ್ತೆ ಚಿತೆ
ಇದೇ ಮನುಜನ ಜೀವನ
ನಿನ್ನೆ ಇಂದು ನಾಳೆಗಳ ಸಮಾಗಮ
     ಅಪೂರ್ವ ಕೊಲ್ಯ

Advertisement
Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಸಸ್ಯ ಪರಿಚಯ – ಕಿರಾತಕಡ್ಡಿ | ಮನೆಯಲ್ಲಿರಬೇಕಾದ ಗಿಡಗಳಲ್ಲಿ ಇದೂ ಒಂದು |
July 22, 2025
2:26 PM
by: ಜಯಲಕ್ಷ್ಮಿ ದಾಮ್ಲೆ
ಅರ್ಥವಾಗದ ಮಳೆಯ ನಾಡಿಬಡಿತ…….! | ಅಡುಗೆ ಮನೆಯ ಕಿಟಿಕಿಯಾಚೆಗಿನ ನೋಟ..
July 22, 2025
1:18 PM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಬದುಕು ಪುರಾಣ | ರಾಮಬಾಣದ ಇರಿತ
July 20, 2025
7:39 AM
by: ನಾ.ಕಾರಂತ ಪೆರಾಜೆ
ಭಾರತದಲ್ಲಿ ಅಡಿಕೆ ಕೃಷಿ ಹೇಗಿದೆ..? ಎಷ್ಟು ಉತ್ಪಾದನೆಯಾಗುತ್ತಿದೆ…?
July 19, 2025
7:56 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group