ಮಳೆಯದೊಂದು ಕಥೆ

June 15, 2019
10:30 AM
ಭುವಿಯಲ್ಲಿ ಸೂರ್ಯನ ತಾಪ ಹೆಚ್ಚಾಯಿತು
ನೀರು ಕಾದು ಆವಿಯಾಯ್ತು
ಮಳೆಗಾಗಿ ಮನುಜ ಬೇಡಿ ನಿಂತ
ಮನುಜನ ಬೇಡಿಕೆಗೆ ಮಣಿಯಲಿಲ್ಲ ವರುಣ…..
ಕಾಡನ್ನು ಕಡಿದ ಭೋಗ ಜೀವಿ
ಬಿಸಿಲನ್ನು ಕಂಡು ಶಪಿಸಿದ
ಭುವಿ ಕಾದು ಕೆಂಪಾಯ್ತು
ಹಸಿರೆಲ್ಲ ಒಣಗಿ ಬರಡಾಯ್ತು….
ನೀರಿಗಾಗಿ ಭೂತಾಯಿಯ ಒಡಲನ್ನೇ ಬಗೆದ
ಅಲ್ಲೂ ನೀರ ಪಸೆ ಕಾಣದಾದಾಗ ಭೂಮಿ ತಾಯಿ ಬಂಜೆಯೆಂದ….
ದಾರಿಕಾಣದಾದಾಗ ನರ ದೇವನ ಮೊರೆ ಹೋದ
ಕೊನೆಗೂ ಮಣಿದ ವರುಣ ಧರೆಗೆ ಅವತರಿಸಿದ
ಬಿಡದೆ ನೀರ ಹೊಳೆಯನ್ನೇ ಹರಿಸಿದ
ಸಾಕಿನ್ನು ಹೋಗೆಂದ ಬುದ್ದಿವಂತ
ಹೋಗಲೊಲ್ಲೆ ಎಂದಾಗ ಶಪಿಸುತ್ತಾ ಕುಳಿತ….
ಅವಮಾನ ಸಹಿಸದ ವರುಣ
ಮತ್ತೆ ಗುಡಿಯ ಸೇರಿದ
ಮತ್ತೆ ಭುವಿಯಲ್ಲಿ ಧಗೆಯೇರಿತು
ಮನುಜನದು ಮತ್ತದೇ ಚಾಳಿ ಶುರುವಾಯಿತು….
ಮನುಜನ ವರ್ತನೆ ಬದಲಾಗಲೇ ಇಲ್ಲ…
ಅದಕ್ಕಾಗಿ ಪ್ರಕೃತಿ ತಾನಾಗಿಯೇ ಬದಲಾಗುತ್ತಿದೆ…
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಹೊಸರುಚಿ | ಎಳೆಯ ಹಲಸಿನ ಕಾಯಿ ರೋಲ್ – ಕ್ರಿಸ್ಪಿ ಟೀ ಟೈಮ್ ಸ್ನ್ಯಾಕ್
March 21, 2026
5:00 PM
by: ದಿವ್ಯ ಮಹೇಶ್
ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ : ಯುವಜನತೆಗೆ ಕಾಲದ ಕರೆಯೇ?
March 20, 2026
8:07 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಹಲಸಿನ ಹಣ್ಣಿನಿಂದ ಇಷ್ಟು ರುಚಿ ಸಿಗುತ್ತದಾ…? ಈ ಕಸ್ಟರ್ಡ್ ಮಿಸ್ ಮಾಡ್ಬೇಡಿ…!
March 14, 2026
8:05 PM
by: ದ ರೂರಲ್ ಮಿರರ್.ಕಾಂ
ಯುವಶಕ್ತಿ ದಿಕ್ಕುತಪ್ಪದಿರಲು ಹಿರಿಯರ ಮಾರ್ಗದರ್ಶನವೇ ದೀಪಸ್ತಂಭ
March 13, 2026
7:02 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror