ಸುಳ್ಯ: ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಕೆರೆಗೆ ಬಿದ್ದ ಕಾಡುಕೋಣ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಶನಿವಾರ ಬೆಳಗ್ಗೆ ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಕೆರೆಗೆ ಕಾಡುಕೋಣ ಬಿದ್ದಿರುವುದು ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಆಗಮಿಸಿ ಕಾಡುಕೋಣವನ್ನು ಕೆರೆಯಿಂದ ಮೇಲೆತ್ತುವ ಪ್ರಯತ್ನ ಮಾಡಿದರು. ಅಡಿಕೆ ಮರದ ಪಾಲವನ್ನು ತಯಾರು ಮಾಡಿ ಕೆರೆಗೆ ಇಳಿಸಿದ್ದು ಕಾಡುಕೋಣ ಈ ಪಾಲದಲ್ಲಿ ಬರುವ ಪ್ರಯತ್ನದಲ್ಲಿದೆ. ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.
ಕಾಡುಕೋಣ ಬಿದ್ದಿರುವ ಬಗ್ಗೆ ಸ್ಥಳೀಯರಾದ ನಿತ್ಯಾನಂದ ಪಾರೆಪ್ಪಾಡಿ ಹೀಗೆ ಹೇಳುತ್ತಾರೆ….
ಕಾಡುಕೋಣ ರಕ್ಷಣಾ ಕಾರ್ಯಾಚರಣೆ…
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel