ಮೂರೂರಿನಲ್ಲಿ ನೀರಿಲ್ಲದೆ ಸಾಯುತ್ತಿವೆ ಜಲಚರಗಳು

April 27, 2019
2:59 PM
ಜಾಲ್ಸೂರು: ಎಲ್ಲೆಲ್ಲೂ ನೀರಿಲ್ಲ. ಪಯಸ್ವಿನಿ ನದಿಯಲ್ಲಿ ಈಗ ಮೀನುಗಳು ಒದ್ದಾಡಿ ಸಾಯುತ್ತಿದೆ.
ಪಂಜಿಕಲ್ಲು ಸಮೀಪದ ಮೂರೂರಲ್ಲಿ ಪಯಸ್ವಿನಿ ನದಿ ನೀರಿಲ್ಲದೆ ಬರಡಾಗಿದ್ದು, ಮೀನುಗಳು ಜೀವ ಬಿಡುತ್ತಿವೆ. ಈ ಮೀನನ್ನು ಹಿಡಿಯಲು ಜನ ಬರುತ್ತಾರೆ. ಹೀಗಾಗಿ ಇದ್ದ ನೀರೂ ಈಗ ಕಲುಷಿತವಾಗುತ್ತಿದೆ.
ಬೇಸಗೆ ಕಾಲದಲ್ಲಿ ಪಯಸ್ವಿನಿ ನದಿಯಲ್ಲಿ ನೀರು ಕಡಿಮೆಯಾಗಿದ್ದರೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಜಲಚರಗಳು ನೀರಲ್ಲಿದ್ದಂತೆ, ತೋಟಗಳಿಗೂ ನೀರು ಹಾಕಲಾಗುತಿತ್ತು. ಮೊದಲ ಬಾರಿ ಈ ರೀತಿಯಾಗಿದೆ. ನದಿಯ ನೀರನ್ನೇ ದನ ಕರುಗಳಿಗೂ ಕೊಡುತ್ತಿದ್ದು, ಈ ವರ್ಷ ತೋಟಗಳಿಗೆ ನೀರು ಹಾಯಿಸುವುದು ಇರಲಿ, ದನ-ಕರುಗಳಿಗೆ ಕುಡಿಯಲೂ ಸಾಲುತ್ತೋ ಎನ್ನುವ ಅನುಮಾನ  ಇದೆ ಎನ್ನುತ್ತಾರೆ ಸ್ಥಳೀಯರು.
ಮೀನು ಹಿಡಿಯುತ್ತಾರೆ ನೋಡಿ:
ನೀರಿಲ್ಲದೆ ಪರದಾಡುವ ಸ್ಥಳೀಯ ನಿವಾಸಿಗಳನ್ನು ಲೆಕ್ಕಿಸದೆ, ಪಕ್ಕದ ಗ್ರಾಮಸ್ಥರು ಮೀನು ಹಿಡಿಯಲು ಗುಂಪುಗಳಾಗಿ ಬರುತ್ತಾರೆ. ಮೀನು ಹಿಡಿಯುವುದರೊಂದಿಗೆ, ನೀರನ್ನು ಕೊಳಕು ಮಾಡಿ ಹೋಗುತ್ತಾರೆ. ಬೆಳಗ್ಗಿನ ಹೊತ್ತು ಬಂದರೆ ಸ್ಥಳೀಯರು ಬಿಡುವುದಿಲ್ಲ ಎಂದು ಮಧ್ಯರಾತ್ರಿ ಕಳೆದ ಮೇಲೆ ಬರುತ್ತಾರೆ. ಮೀನು ಹಿಡಿಯಬೇಡಿ, ನೀರು ಕೊಳಕಾಗುತ್ತವೆ ಎಂದು ಹೇಳಿದರೂ ಕೇಳುವುದಿಲ್ಲ ಅನ್ನುತ್ತಾರೆ ಸ್ಥಳೀಯರು. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನ ಆಗಲಿಲ್ಲ. ಗ್ರಾ.ಪಂ. ಮಾತುಕತೆ ನಡೆಸಿದರೂ ಸಮಸ್ಯೆ ಬಗೆಹರಿಯಲಿಲ್ಲ.
ಜಲಚರಗಳ ಸಂಕಟ, ನಮ್ಮ ನೋವು ಕೇಳುವವರಿಲ್ಲ ಎಂದು ಹತಾಶೆ ವ್ಯಕ್ತಡಿಸುತ್ತಾರೆ ಸ್ಥಳೀಯರು.
ಇಲ್ಲಿನ ಸಂಕಟದ ಬಗ್ಗೆ ಮಾತನಾಡಿದ ಮುರೂರಿನ ವಿಪಿನ್ ನಂಬಿಯಾರ್, “ಕಳೆದ 38 ವರ್ಷಗಳಲ್ಲಿ ಇಂತಹ ಬರಗಾಲವನ್ನು ನಾನು ಕಂಡಿಲ್ಲ. ಮೀನು ಹಿಡಿಯಲು ಬರುವವರು ನೀರನ್ನು ಕೊಳಚೆ ಮಾಡುತ್ತಾರೆ, ಜಲಚರಗಳಿಗೆ ಸಂಕಟ ಎದುರಾಗಿದೆ” ಎನ್ನುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಡೆಕೋಲು ಪಿಡಿಒ ಜಯಪ್ರಕಾಶ್, “ ಪಯಸ್ವಿನಿ ನದಿಯ ಈ ಭಾಗದಲ್ಲಿ ಮೀನು ಹಿಡಿದು ನೀರು ಮಲಿನವಾಗುವುದರ ಬಗ್ಗೆ ಮಾಹಿತಿ ಇದೆ. ಎರಡು ತಿಂಗಳ ಹಿಂದೆ ಮೀನು ಹಿಡಿಯಲು ಬಂದವರಿಗೆ ನೋಟಿಸ್‌ ನೀಡಿ ಕಳುಹಿಸಲಾಗಿದೆ.  ನೀರು ಮಲಿನವಾಗದಂತೆ ಕ್ರಮ ಕೈಗೊಳ್ಳುತ್ತೇವೆ” ಎನ್ನುತ್ತಾರೆ.
Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗ್ರಾಮೀಣ ಭಾಗಕ್ಕೂ ತಲುಪಿದ ಆಧುನಿಕ ಸಂಸ್ಕೃತಿ | ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾರ್ಥಿಗಳ ವಿಡಿಯೋ ವೈರಲ್ | ಸೋಶಿಯಲ್‌ ಮೀಡಿಯಾದಲ್ಲಿ ಹಲವರಿಂದ ಅಸಮಾಧಾನ |
July 4, 2025
8:27 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ
July 4, 2025
12:56 PM
by: ಸಾಯಿಶೇಖರ್ ಕರಿಕಳ
ಪುತ್ತೂರು ಪ್ರಕರಣ | ಶಾಸಕ ಅಶೋಕ್‌ ಕುಮಾರ್‌ ರೈ ಅವರ ಬರಹ ಇದು… | ನಾವೀಗ ಆಕೆಗೆ ನೀಡಬೇಕಾಗಿರುವುದು ಧೈರ್ಯ ಮತ್ತು ಸ್ಥೈರ್ಯ
July 4, 2025
9:45 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ
July 4, 2025
7:36 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group