ವಿವೇಕಾನಂದದಲ್ಲೊಂದು ‘ನಾದಲೋಕ’

August 31, 2019
9:00 AM

ಪುತ್ತೂರು: ಸಂಗೀತಕ್ಕೆ ಹೃನ್ಮನವನ್ನು ಕುಣಿಸುವ ಶಕ್ತಿ ಇದೆ. ಮಧುರ ಸ್ವರವು ಭಾವನಾತ್ಮಕವಾಗಿ ರೋಮಾಂಚನಗೊಳಿಸುತ್ತದೆ. ಸುಸ್ವರ ಗಾಯನಕ್ಕೆ ಅದೈತ ಶಕ್ತಿಯಿದೆ. ಏಕೆಂದರೆ ಮನಸ್ಸನ್ನು ಭಾವತೀವ್ರತೆಯ ದಾರಿಯಲ್ಲಿ ನಡೆಸಿ ತಲ್ಲೀನತೆಗೆ ನೂಕುವ ಪ್ರಖರ ಸಾಧನವೇ ಸಂಗೀತ. ಇಂಪಾದ ಗೀತೆ ಮನ ನಲಿಸಲು ಕಾರಣವಾಗುವ ಅದ್ಭುತ ಕಲೆ.

Advertisement
Advertisement

ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಆಗಸ್ಟ್ 30 ರಂದು ಸಂಭ್ರಮದ ವಾತಾವರಣ. ಕೊಠಡಿ ಕೊಠಡಿಗಳಲ್ಲಿ ಸಂಗೀತದ ಇಂಚರ ಪ್ರತಿಧ್ವನಿಸುತ್ತಿತ್ತು. ಇಲ್ಲಿ “ನಾದಲೋಕ”ವೆಂಬ ಅಂತರ್ ಕಾಲೇಜು ಮಟ್ಟದ ಸಂಗೀತ ಸ್ಪರ್ಧೆ ಕಳೆಗಟ್ಟಿತ್ತು. ಕಾಲೇಜು ಸಂಗೀತ ಕಲರವದಿಂದ ಅನುರಣಿಸುತ್ತಿತ್ತು. ಗಾನಮಾಧುರ್ಯತೆಯು ಮನದ ಮನೆಯಲ್ಲಿ ನೃತ್ಯವಾಡಿಸುತ್ತಿತ್ತು ಎಂದರೆ ತಪ್ಪಿಲ್ಲ.

Advertisement

ಹೌದು, ಶುಕ್ರವಾರದಂದು ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಹಾಗೂ ವಿವೇಕಾನಂದ ಮಹಾವಿದ್ಯಾಲಯ ಇದರ ಸಹಯೋಗದಲ್ಲಿ ಎರಡು ದಿನದ “ನಾದಲೋಕ”ವೆಂಬ ಅಂತರ್ ಕಾಲೇಜು ಮಟ್ಟದ ಸಂಗೀತ ಸ್ಪರ್ಧೆಯ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಸ್ ಎಡಪಡಿತ್ತಾಯ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ನಾಲ್ಕು ಸಭಾಂಗಣದಲ್ಲಿ ಐದು ರೀತಿಯ ಸಂಗೀತ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದಕ್ಷಿಣಕನ್ನಡ, ಉಡುಪಿ, ಕುಂದಾಪುರ, ಕಾರ್ಕಳ ಜಿಲ್ಲೆಗಳ ವಿವಿಧ ಶಿಕ್ಷಣಸಂಸ್ಥೆಗಳಿಂದ ಒಟ್ಟು 275 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ಬೈಂದೂರು ಪ್ರಭಾಕರ್ ರಾವ್ ಸಭಾಂಗಣದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಿದ್ದು, ವಿದ್ವಾನ್ ರಾಮಕೃಷ್ಣ ಭಟ್, ವಿದುಷಿ ಶಾರದಾ ಹಾಗೂ ಮಂಗಳೂರಿನ ವಿದುಷಿ ಅರುಣಾ ಸರಸ್ವತಿ ತೀರ್ಪುಗಾರರಾಗಿದ್ದರು. ಈ ಸ್ಪರ್ಧೆಯಲ್ಲಿ ಒಟ್ಟು 24 ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

ಭಾರತೀಯ ಸಂಗೀತ ಕ್ಷೇತ್ರದಲ್ಲಿ ಶಾಸ್ತ್ರೀಯ ತಾಳವಾದ್ಯಕ್ಕೆ ಅದರದ್ದೇ ಆದ ಪರಂಪರೆಯಿದೆ. ಅದರ ಸಂಗೀತ ಗಂಧರ್ವವು ಇಂದು ಕಾಲೇಜಿನ ಎ.ವಿ. ಸಭಾಂಗಣದಲ್ಲಿ ನೆಲೆಮಾಡಿತ್ತು. ಶಿವನ ರುದ್ರನರ್ತನಕ್ಕೆ ಸಂಬಂಧಿಸಿದಂತೆ ಅನೇಕ ಪ್ರಕಾರದ ತಾಳಮದ್ದಳೆಯು ಸ್ಪರ್ಧೆಯನ್ನು ವಿನೂತನಗೊಳಿಸಿತು. ಈ ಸ್ಪರ್ಧೆಗೆ 20 ವಿದ್ಯಾರ್ಥಿಗಳು ಭಾಗವಹಿಸಿದ್ದು ವಿದ್ವಾನ್ ಆತ್ಮರಾಂ ನಾಯಕ್, ವಿದ್ವಾನ್ ನಿಕ್ಷಿತ್ ಪುತ್ತೂರು ಹಾಗೂ ವಿದುಷಿ ಶ್ರೀಲತಾ ತೀರ್ಪುಗಾರರಿದ್ದರು.

Advertisement

ಅಷ್ಟೇ ಅಲ್ಲದೆ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣವು ಲಘುಸಂಗೀತದ ನಿನಾದದಿಂದ ರಂಗುಗೊಂಡಿತ್ತು. ಹೆಸರೇ ಸೂಚಿಸುವಂತೆ ಇಂಪಾದ ಲಘುಸಂಗೀತ ಸ್ಪರ್ಧೆಗೆ 29 ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿದುಷಿ ಪವಿತ್ರಾ ಶೇಟ್, ವಿದ್ವಾನ್ ಗೋಪಾಲಕೃಷ್ಣ ಸುಳ್ಯ ತೀರ್ಪುಗಾರರಾಗಿದ್ದರು.

Advertisement

 

ಈ ಎಲ್ಲ್ಲಾ ಸಂಗೀತ ಪ್ರಕಾರದ ಮಧ್ಯೆ ಸಮೂಹಗೀತೆಯು ಕಾಲೇಜು ಪರಿಸರವನ್ನು ಸುಮಧುರಗೊಳಿಸಿತ್ತು. ಕೇಶವ ಸಂಕಲ್ಪ ಸಭಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 28 ತಂಡಗಳು ಭಾಗವಹಿಸಿದ್ದವು. ವಿದ್ವಾನ್ ಪ್ರಭಾಕರ್, ವಿದುಷಿ ಶ್ರೀಮತಿ ಪಾರ್ವತಿ ಪದ್ಯಾಣ ಮತ್ತು ವಿದ್ವಾನ್ ಪ್ರಮೋದ್ ಮಂಗಳೂರು ಈ ಸ್ಪರ್ಧೆಗೆ ತೀರ್ಪುಗಾರರಾಗಿ ಆಗಮಿಸಿದ್ದರು.

Advertisement

ಒಂದೊಂದು ಬಗೆಯ ಸಂಗೀತ ಕಲರವವು ಕಾಲೇಜಿನ ಸೌಂದರ್ಯಕ್ಕೆ ಸ್ವರದ ಮುನ್ನುಡಿ ಬರೆದಿತ್ತು. ಆಗಸ್ಟ್ 30ರಂದು ಬೆಳಗ್ಗೆಯಿಂದ ಈ ಸ್ಪರ್ಧೆಯು ಪ್ರಾರಂಭವಾಗಿದ್ದು ಉಳಿದ ನಾಲ್ಕು ಸಂಗೀತ ಸ್ಪರ್ಧೆಯು ಶನಿವಾರವು ಮುಂದುವರೆಯಲಿದೆ. ಆದರೆ ಇಂತಹ ಗಾನ ಮಾಧುರ್ಯತೆಯು ಪ್ರತಿಯೊಬ್ಬ ಶೋತೃಗಳ ಮನಸನ್ನು ಹಿತಕರ ಮಾಡಿದ್ದು ಸುಳ್ಳಲ್ಲ.

 

Advertisement

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 17-05-2024 | ಹೆಚ್ಚಿನ ಕಡೆಗಳಲ್ಲಿ ಗುಡುಗು ಸಹಿತ ಮಳೆ | ಮೇ 22ರ ನಂತರ ವಾಯುಭಾರ ಕುಸಿತ ಸಾಧ್ಯತೆ |
May 17, 2024
1:00 PM
by: ಸಾಯಿಶೇಖರ್ ಕರಿಕಳ
ಮುಂದಿನ 10 ದಿನಗಳ ಹವಾಮಾನ ಪರಿಸ್ಥಿತಿ ಹೇಗಾಗುತ್ತದೆ…? | ದಕ್ಷಿಣ ಭಾರತದಲ್ಲಿ ಭಾರೀ ಮಳೆಯ ಎಚ್ಚರಿಕೆ | ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು…?
May 17, 2024
11:32 AM
by: ದ ರೂರಲ್ ಮಿರರ್.ಕಾಂ
ಸಮಾಜಕ್ಕೆ ಸೇವೆ ಮಾಡುವುದು ಎಂದರೆ ಹಲವು ಆಯಾಮಗಳಿವೆ | ಹವಾಮಾನ ಹೇಳುವುದೂ ಒಂದು ಸೇವೆ |
May 17, 2024
11:12 AM
by: ದ ರೂರಲ್ ಮಿರರ್.ಕಾಂ
ಮುಳಿಯ ಚಿನ್ನೋತ್ಸವ | ಸ್ಪೆಷಲ್ ರುದ್ರಾಕ್ಷಿ ಕಲೆಕ್ಷನ್ ಅನಾವರಣ
May 17, 2024
10:54 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror