*ಹುಚ್ಚನು ನಾನಲ್ಲ…* 

May 3, 2019
7:30 AM
ಹುಟ್ಟಿದಾಗ ಹುಚ್ಚನು ನಾನಲ್ಲ..
ನನ್ನಂತ ಸುಖಿ ಬೇರಾರು ಇರಲಿಲ್ಲ..
ಕಣ್ಣಿಗೆ ಕಂಡದ್ದನ್ನೇ ಸತ್ಯ ಅಂದುಕೊಂಡೆ ನಾನು
ಸುಖವೂ ಹೋಗಿ ದುಃಖ ಬಂತು ಮೋಸ ಹೋದೆ ನಾನು ||1||
ಜನರಾರು ಸೇರಿಸಲಿಲ್ಲ ಅವರ ಹತ್ತಿರ ನನ್ನನು
ಬೀದಿಯಲ್ಲಿ ಹುಚ್ಚನಾಗಿ ಅಲೆದಾಡಿದೆ ನಾನು
ನಾಯಿತಿಂದುಳಿದ ಆಹಾರವೇ ಮೃಷ್ಟಾನ್ನವೆಂದುಕೊಂಡೆ
ಹರಕಲು‌‌ಗೋಣಿಯಿಂದ ಮಾನ ಮುಚ್ಚಿಕೊಂಡೆ ||2||
ಹುಟ್ಟುತ್ತಾ ನಾನು ಹುಚ್ಚನಲ್ಲ,ಜನ ನನ್ನ ಹುಚ್ಚ ಅಂದ್ರು
ನನ್ನವರೇ ನನ್ನ ಬೀದಿಗಟ್ಟಿ, ಇದೇ ನಿನ್ನ ಜಾಗ ಅಂದ್ರು
ಪುಟಾಣಿ ಮಕ್ಕಳು‌‌ ನನ್ನ ನೋಡಿ ಕಲ್ಲು ಹೊಡೆದು ಬಿಟ್ರು
ಹಣೇಲಿ ಸುರಿದ ರಕ್ತ ನೋಡಿ,ಜನ ಕೇಕೇ ಹಾಕಿ ನಕ್ರು ||3||
ಹುಟ್ಟುತ್ತಾ ನಾನು ಹುಚ್ಚನಲ್ಲ,ನಿಮ್ಮಂತೆ ನಾನಿದ್ದೆ ಅಂದೆ
ಯಾರಿಗೂ ನನ್ನ ಮಾತು ಕೇಳಲೇ ಇಲ್ಲ
ಧಾರಕಾರ ಸುರಿದ  ಮಳೆಯಲಿ ಕಣ್ಣೀರು ಕೂಡಿ ಹೋಯ್ತು
ಒಂದಿಬ್ಬರು ಸಾಂತ್ವಾನ ಕೇಂದ್ರ ಸೇರಿಸಿ ಬಿಟ್ರು ||4||
ಹುಚ್ಚನಾದ ನಾನು ಮತ್ತೆ ಎಲ್ಲರಂತಾಗಿ ಬಿಟ್ಟೆ
ಜನ ಮತ್ತೆ ನನ್ನ ಸೇರಿಸ್ಕೋತಾರೆ ಅಂದುಕೊಂಡು ಬಿಟ್ಟೆ
ಎಲ್ರೂ ಮತ್ತೆ ಹುಚ್ಚ ಎಂದು ಕರೆದು ಬಿಟ್ರು
ಹುಚ್ಚ ಅನ್ನೋ ಹೆಸರೇ ನನಗೆ ಖಾಯಂ ಆಗೋಯ್ತು… ||5||
‌‌

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?
June 19, 2025
9:51 PM
by: ಎ ಪಿ ಸದಾಶಿವ ಮರಿಕೆ
ಸಹಕಾರಿ ಸಂಸ್ಥೆಗಳ ಮೂಲಕ ಹಲಸಿನ ಮೌಲ್ಯ ವರ್ಧನೆ ಸಾಧ್ಯವೇ?
June 19, 2025
11:42 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮಲೆನಾಡಿನಲ್ಲಿ “ಭಾರಿ” ಮಳೆಯ ದಿನದಲ್ಲಿ ಶಾಲೆಗೆ ರಜೆ ಕೊಡುವರಾರು…!?
June 19, 2025
6:38 AM
by: ಪ್ರಬಂಧ ಅಂಬುತೀರ್ಥ
ದೇಹ ಧರ್ಮದ ಪಠ್ಯವೇ ಯೋಗ
June 18, 2025
9:00 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group