ಹೊರಡುವ ಮುನ್ನ

June 1, 2019
12:00 PM
ಪ್ರೀತಿಸಿದವಳ ಜೊತೆ ನಡೆದವಳು
ಎದೆ ಹಾಲನುಣಿಸಿದವಳ ಮರೆತಳು
ತಂದೆಯ ಪ್ರೀತಿಯನ್ನು ಕಡೆಗಣಿಸಿದವಳು
ಇನಿಯನ ಪ್ರೀತಿಯೇ ಹೆಚ್ಚೆಂದಳು ||೧||
ಹೆತ್ತವರಿಗೆ ಮಗಳು ತೊರೆದ ನೋವು
ಸುತ್ತಣದವರ ಚುಚ್ಚು ಮಾತಿನ ನೋವು
ಕಾಣಲಿಲ್ಲ ಅವಳಿಗೆ ಹೆತ್ತೆವರ ಕಣ್ಣೀರು
ಅವಳಿಗೀಗ ಅವನ ಪ್ರೀತಿಯೇ ಎಳನೀರು ||೨||
ಜಗವ ಸುತ್ತಿಸಿದ ಪ್ರೇಮಿಯ ಕೈ ಖಾಲಿಯಾಗಿದೆ
ದುಡಿವ ಅನಿವಾರ್ಯತೆ ಬದುಕಲ್ಲಿ ಎದುರಾಗಿದೆ
ಶ್ರಮಕ್ಕೆ ತಕ್ಕ ಪ್ರತಿಫಲ ದೊರಕದಾಗಿದೆ
ಮನೆಯಲ್ಲಿ ಜಗಳವೀಗ ಶುರುವಾಗಿದೆ ||೩||
ಆಕೆಯೀಗ ತುಂಬು ಗರ್ಭವತಿ
ಅವನಿಗಿಲ್ಲ ಅವಳಲ್ಲಿ ಮೊದಲಿನಂತೆ ಪ್ರೀತಿ
ಅವಳ ಬಾಳಾಗಿದೆ ಇಂದು ಅವನ ಕೈಸೆರೆ
ಅವಳಿಗೀಗ ಬೇಕಿದೆ ಹೆತ್ತವರ ಒಲವಿನಾಸರೆ ||೪||
ಮನವಿನಿಂದು ತಪ್ಪಿಗಾಗಿ ಮರುಗುತಿದೆ
ಹೆತ್ತವರ ಆಸರೆಗಾಗಿ ಪರಿತಪಿಸುತ್ತಿದೆ
ಕ್ಷಮೆಕೋರಲು ಮನವಿಂದು ಕಾಯುತಿದೆ
ಮಾಡಿದ ತಪ್ಪು ಮನವನ್ನು ಚುಚ್ಚುತ್ತಿದೆ ||೫||
ಪ್ರೀತಿಸುವ ಮುನ್ನ ಯೋಚಿಸಬೇಕು ಕಂದಾ
ಹೆತ್ತವರ ಒಪ್ಪಿಸಿ ನಡೆದರೆ ಆನಂದಾ
ಮುತ್ತಿನ ಮತ್ತಿನಿಂದೆ ನೀ‌ ಹೊರಡಬೇಡ
ತುತ್ತನ್ನು ಕಡೆಗಣಿಸಿ ನಡೆಯಬೇಡ ||೬||

Advertisement
Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಬದುಕು ಪುರಾಣ | ವಿಶ್ವದ ಮೊದಲ ಪತ್ರಕರ್ತ!
May 18, 2025
7:07 AM
by: ನಾ.ಕಾರಂತ ಪೆರಾಜೆ
58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ಹೊಸರುಚಿ | ಹಲಸಿನ ಹಣ್ಣಿನ ಜಾಮ್
May 17, 2025
8:00 AM
by: ದಿವ್ಯ ಮಹೇಶ್
ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?
May 17, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group