ಅಯೋಧ್ಯಾ ತೀರ್ಪಿಗಾಗಿ ಪಂಜದಲ್ಲಿ ಮುಸ್ಲಿಂ ಬಾಂಧವರಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆದ ಯುವಕರು

November 10, 2019
7:46 PM

ಪಂಜ:ಸುಪ್ರೀಂಕೋರ್ಟ್ ಆಯೋಧ್ಯಾ ಪ್ರಕರಣಕ್ಕೆ ನೀಡಿರುವಾ ಐತಿಹಾಸಿಕ ತೀರ್ಪನ್ನು ದೇಶದ ಜನರು ನಾನಾ ರೀತಿಯಲ್ಲಿ ಸ್ವಾಗತಿಸುತ್ತಿದ್ದರೆ, ಪಂಜದ ಯುವಕರು ವಿಶೇಷವಾಗಿ ಇಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊಳೆಂಜ ಪಂಜ ಮಾರ್ಗವಾಗಿ ನೆಲ್ಲಿಕಟ್ಟೆ ತನಕ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಂಜದಲ್ಲಿ ಸಿಹಿತಿಂಡಿ ಹಂಚಿ ಭಾವೈಕ್ಯತೆ ಮೆರೆದಿದ್ದಾರೆ.

ಅಯೋಧ್ಯ ವಿಚಾರವೂ ಸೌಹಾರ್ದಯುತವಾಗಿ ಮುಗಿದು ಎರಡು ಧರ್ಮದವರು  ಶಾಂತಿ ಕಾಪಾಡಿಕೊಂಡು ಬಂದಂತಹ ಸಂದರ್ಭದಲ್ಲಿ ಪಂಜದ ಸಹೃದಯಿ ಹಿಂದೂ ಸಹೋದರರು ವಿಶೇಷವಾಗಿ ವಿಶೇಷ ರೀತಿಯಲ್ಲಿ ಸಂಭ್ರಮಾಚರಣೆಗೈದು ಆದರ್ಶಪ್ರಾಯರಾಗಿದ್ದಾರೆ.

ಈ ಸಂದರ್ಭದಲ್ಲಿ ಆಶಿತ್ ಕಲ್ಲಾಜೆ, ನಿಧೀಶ್ ಕಕ್ಯಾನ, ರಮೇಶ್ ಪುತ್ಯ ಪಂಜ ಬದ್ರಿಯಾ ಜುಮ್ಮಾ ಮಸೀದಿಯ ಗುರುಗಳಾದ ಝಿಯಾದ್ ಸಾಕಫಿ ಮತ್ತು ಅಧ್ಯಕ್ಷರಾದ ಉಮರ್ ಸಿಗೆಯಾಡಿ, ಅಬ್ಬಾಸ್ ಮುಸ್ಲಿಯಾರ್, ರಫೀಕ್ ಕಬಕ ಮತ್ತು ಸಿದ್ಧೀಕ್ ಪೊಳೆಂಜ, ಚಂದ್ರಶೇಖರ ಕರಿಮಜಲು ದಯಾನಂದ ಏಣ್ಮೂರು, ರೋಹಿತ್ ಚೀಮುಳ್ಳು, ಉದಯ ಪಲ್ಲೋಡಿ, ಭರತ್ ಪಂಜ, ವಸಂತ ಅಡ್ಕ, ರಂಜಿತ್ ಪಂಜ, ಕೀರ್ತನ್ ಪಲ್ಲೋಡಿ ಹಾಗೂ ನೂರಾರು ಮಂದಿ ಉಪಸ್ಥಿತರಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 17 – 08 -2026 | ಕರ್ನಾಟಕದಲ್ಲಿ ಮುಂದಿನ ದಿನಗಳ ಹವಾಮಾನ ಹೇಗಿರಲಿದೆ?
August 17, 2026
3:10 PM
by: ಸಾಯಿಶೇಖರ್ ಕರಿಕಳ
₹2,500 ಕೋಟಿಗೂ ಅಧಿಕ ತೆರಿಗೆ ವಂಚನೆ ಪತ್ತೆ..! ಅಡಿಕೆ ಆಮದು ಜಾಲದ ಹಿಂದೆ ಏನಿತ್ತು?
August 17, 2026
7:29 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 16-08-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಕಡಿಮೆ – ಉತ್ತರ ಒಳನಾಡಿನಲ್ಲಿ 19 ರಿಂದ ಮಳೆ ಹೆಚ್ಚಳ ಸಾಧ್ಯತೆ
August 16, 2026
12:00 PM
by: ಸಾಯಿಶೇಖರ್ ಕರಿಕಳ
ಗ್ರಾಮೀಣ ಸಂಪರ್ಕಕ್ಕೆ 15 ಸಾವಿರ ಹೊಸ ಬಸ್‌ಗಳು: ಸಾರಿಗೆ ಸಚಿವ
August 16, 2026
7:30 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror