ಪೆರ್ನಾಜೆ : ಭೂಮಿ ತನ್ನ ಒಡಲಿನಲ್ಲಿ ಕೋಟ್ಯಾಂತರ ಜೀವ ವೈವಿಧ್ಯತೆ ಗಳನ್ನೂ ಪೋಷಿಸುತ್ತದೆ. ಇಲ್ಲಿ ಬದುಕಲು ಎಲ್ಲರಿಗೂ ಸಮಾನ ಅವಕಾಶವಿದೆ. ಆದರೆ ಮಾನವ ಮಾತ್ರ ಎಲ್ಲೆಡೆಯಿಂದ ಹಸ್ತಕ್ಷೇಪ ಮಾಡಿ ಅನೇಕ ಜೀವ ವೈವಿಧ್ಯಮಯ ಜೀವ ಜಾಲ ಅಳಿದು ಹೋಗಿದ್ದರೆ ಬಹಳಷ್ಟು ಅಳಿವಿನ ಅಂಚಿನಲ್ಲಿವೆ.
ಪ್ರಕೃತಿಯ ಹೂ ಕಾಯಿಗಟ್ಟಲು ಪರಾಗ ಸ್ಪರ್ಷ ಕ್ರಿಯೆ ಗೆ ಅತ್ಯಂತ ಸೂಕ್ತ ದುಂಬಿಗಳು,ಚಿಟ್ಟೆಗಳು.ಅಟ್ಲಾಸ್ ಮ್ಯಾಪ್ ನಂತೆ(ಮೋಥ್) ಕಾಣುವ ಇವು ಶ್ವೇತಾಂಬರ ಚಿಟ್ಟೆ.ಇದಕ್ಕೆ ಉದ್ದನೆಯ ಬಾಲದಂತೆ ಅದರಲ್ಲಿ ಕಣ್ಣುಗಳ ನೋಟವಾಗಿ ಆಕರ್ಷಣೀಯವಾಗಿ ಕಾಣುವಂತೆ ಇದೆ.ಇದು ಈಗ ಕಾಣಲು ಬಹಳ ಅಪರೂಪ ವಾಗಿದೆ.ಅನೇಕ ವಿನಾಶಕಾರಿ ಕೀಟ ನಾಶಕಗಳ ಬಳಕೆ,ಪರಿಸರ ಮಾಲಿನ್ಯದಿಂದ ಇಂತಹ ಜೀವವೈವಿಧ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಪರೂಪದ ಜೀವಸಂಕುಲದ ಉಳಿವಿಗೆ ಗಂಭೀರ ವಾಗಿ ಆಲೋಚಿಸುವ ಅನಿವಾರ್ಯತೆ ಎದುರಾಗಿದೆ.
ಬಂಟ್ವಾಳ ತಾಲ್ಲೂಕಿನ ಮುಡಿಪು ಸುಬ್ರಹ್ಮಣ್ಯ ಭಟ್ಟ ರ ಹಿತ್ತಲಿನಲ್ಲಿ ಕಂಡು ಬಂದ ಚಿಟ್ಟೆ ಇದು. ಚಿಟ್ಟೆಯ ಜೀವನ ಚಕ್ರವೇ ವಿಶಿಷ್ಟ ವಿಶೇಷ ವಿಭಿನ್ನ ಆಕಾರ ಭಾಗಗಳಿಂದ ಗಮನ ಸೆಳೆಯುವ ಈ ಅಪರೂಪದ ಚಿಟ್ಟೆಗಳು ಶತ್ರುಗಳಿಂದ ರಕ್ಸಿಸಿ ಕೋಳ್ಳಲೆಂದು ನಿರ್ಮಿಸಿಕೊಳ್ಳುವ ರಚನೆ ಅದ್ಭುತ, ಅಪರೂಪ, ಅಪೂರ್ವವಾದವು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel