ಏನ್‌ ಹೇಳ್ರೆ ಸಣಪ……..

May 9, 2020
2:13 PM

ಏನ್ ಹೇಳ್ರೆ ಸಣಪ…
ಮನೆಲಿ ಕುದ್ರುದರ ನೆನ್ಸಿರೆ
ತಲೆಲಿ ಕುರೆಕುದ್ದಂಗಾದೆ….

ಕೊಟೆಗೆಲಿ ಕಟ್ಟಿದ ಕರಿ ಹಸ್
ಇಜ್ಜೇಲ್ ಲಿ ಇರುವ ಬೊಗ್ಗ ನಾಯಿ
ಸಾಲೆಂದ ಬಾಕನ ನನ್ನಕಲೆ ಬಾತಿದ್ದ
ಕೊತ್ತಿ ಮೊರಿಗೂ ನಮ್ಮ ನೋಡಿ ಸಾಕಾವುಟು

ದಿನಾ ಕಾಲ್ ಬುಡಲಿ ಬಂದ್ ಕುದ್ರುತ್ತಿದ್ದ
ಕೊತ್ತಿ ನಾಯಿ ಹಕ್ಕಲೆನೂ ಬಾದ್ಲೆ ಮೂಸಿನೂ ನೋಡ್ದ್ಲೆ
ಅವು ಒಳಗೊಳಗೆ ಮಾತಾಡಿಕಂಡವೆ ಅನ್ಸಿದೆ
ಇವರ ಸಂತಾನ ಈಗೇನ್ ಮನೇಲೇ ಜಾಂಡಾವೂರ್ದ್ಂತ

ಏನ್ ಹೇಳ್ರೆ ನೀವು ಸಣಪ
ಈ ಕೋರೋನಾದ ರಾಂಪಟ ನೆನ್ಸಿರೆ
ತಲೆಗೆ ಮರ ಬಿದ್ದಂಗಾದೆ…

ತಾತನ ಮನೆ ಅವ್ವನ ಮನೆಂತ
ತಿರ್ಗಿಕೂ ಆದ್ಲೆ…
ಕಾಗಡೆ, ಮೇಗಡೆ, ಹಳ್ಳಕರೆ
ಮನೆಗೂ ಹೋಕಾದ್ಲೆ..

ಇಜ್ಜೆಲ್ ಕರೆಲೆಲ್ಲಾ ಹೂವು ದೈ
ನಡೋಮ ಹೇಳ್ರೆ
ಬಾಮಿಲಿ ನಾವ್ಗೇ ಕುಡೆಕೆ
ನೀರಿಲ್ಲೆ….

ಗ್ಯಾರ್ದಣ್ಣ್ ,ಮಾವಿನಣ್ಣ್ ಮರಕ್ಕಾರ್
ಕಲ್ಲ್ ಹೊಡೆಮ ಹೇಳ್ರೆ
ಗ್ಯಾರ್ದಣ್ಣ್ ಕುರೆಗ ಮುಗ್ಸೆಳ
ಮಾವಿನಣ್ಣ್ ಆಸೆಗೂ ಒಂದೂ ಬುಟ್ಟತ್ಲೆ

ಎಲ್ಲವು ಬಗೆಬಗೆ ತಿಂಡಿ ಮಾಡಿ
ವಾಟ್ಸ ಪ್ ಲಿ ಹಾಕಿಕನ
ನಂಗೂ ಹಾಕೊಕುತಾದು….
ಹಲ್ಸಿನಣ್ಣ್ ಕೊಯ್ದ್ ಮುಳ್ಕ ಮಾಡಿ ಹಾಕಿರೆ
ಯಾರೋ ಆಸೆಲಿ ಬಾಯಿ ನೀರ್ ಸುರ್ಸಿ
ರಾತ್ರೆಲ್ಲಾ ಹೊಟ್ಟೆ ಬೇನೆ….

ಏನ್ ಹೇಳ್ದು ಸಣಪ…..
ಈ ಕೊರೊನಾ ಒಮ್ಮೆ ಮುಗ್ದರೆ ಸಾಕ್ಂತಾದೆ
ಎಲ್ಲ ನೆನ್ಸಿ ನೆನ್ಸಿ…..ತಲೆಗೆ
ಹೆಬ್ಬಲ್ಸ್ ಮರನೇ ಬಿದ್ದಂಗಾವುಟು…

 

# ಬರ್ದೋವು : ಅಪೂರ್ವ ಕೊಲ್ಯ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಬಾಳ ಮಧ್ಯಾಹ್ನದ ಲಹರಿ
July 5, 2026
3:10 PM
by: ದ ರೂರಲ್ ಮಿರರ್.ಕಾಂ
ಸಂಬಂಧಗಳಲ್ಲಿ ಸೋಲು ಅಲ್ಲ, ಅರಿವು ಮುಖ್ಯ
July 5, 2026
7:42 AM
by: ಮಹೇಶ್ ಪುಚ್ಚಪ್ಪಾಡಿ
ಜಾಕ್‌ಫ್ರೂಟ್ ಸ್ಪೈಸಿ – ಹಲಸಿನ ಕಾಯಿಯಿಂದ 5 ನಿಮಿಷದಲ್ಲಿ ರುಚಿಕರ ಸ್ನ್ಯಾಕ್..!
July 4, 2026
3:44 PM
by: ದಿವ್ಯ ಮಹೇಶ್
ಶಿರಾಡಿ ಘಾಟಿಯಲ್ಲಿ ವಾರಾಂತ್ಯದ ಟ್ರಾಫಿಕ್‌ ಜಾಮ್‌ಗೆ ಬ್ರೇಕ್‌ ಯಾವಾಗ? ಶಿರಾಡಿ ಘಾಟಿಗೆ ವಿಶೇಷ ಸಂಚಾರ ಯೋಜನೆ ಜಾರಿ ಅಗತ್ಯ
July 1, 2026
7:52 AM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror