ಗರ್ಭಪಾತ ತಡೆಗೆ ಕಠಿಣ ಕಾನೂನು ತಂದ ಯು ಎಸ್

June 2, 2019
10:45 AM

ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಲಬಾಮ ಸೆನೆಟ್ ಗರ್ಭಪಾತ ತಡೆಗೆ ಸಂಬಂಧಿಸಿದ ಕಠಿನ ಕಾನೂನನ್ನು ಜಾರಿಗೊಳಿಸಿದೆ. ಇದರ ಪ್ರಕಾರ ಅತ್ಯಾಚಾರದ ಸಂದರ್ಭದಲ್ಲೂ ಕೂಡ, ಅತ್ಯಾಚಾರಕ್ಕೊಳಗಾದ ಮಹಿಳೆ ಗರ್ಭಿಣಿಯಾದರೆ, ಅಂತಹ ಸಂದರ್ಭದಲ್ಲಿ ಗರ್ಭಪಾತ ಮಾಡಿದರು ಕೂಡ, ಮಾಡಿದ ವೈದ್ಯರಿಗೆ ಕಠಿಣ ಶಿಕ್ಷೆ ವಿಧಿಸುವ ಅವಕಾಶವನ್ನು ನೀಡಿದೆ. ಇದರ ಲಿಖಿತ ರೂಪವನ್ನು ರಿಪಬ್ಲಿಕನ್ ನೇತೃತ್ವದ ಸೆನೇಟ್ ಅಲ್ಲಿನ ಗವರ್ನರ್ ಕೇ ಇವೇ ಇವರ ಬಳಿ ಸಹಿಗಾಗಿ ಕಳುಹಿಸಿದೆ. ಒಂದು ವೇಳೆ ಇದು ಅಂಗೀಕರಿಸಲ್ಪಟ್ಟಲ್ಲಿ , ಕಾನೂನಾತ್ಮಕ ಸಮರವು ಅಲ್ಲಿನ ಸುಪ್ರೀಂ ಕೋರ್ಟ್ ತನಕವೂ ತಲುಪಬಹುದು.

Advertisement
Advertisement

ಅದರ ಪ್ರಕಾರ ಗರ್ಭಪಾತ ಮಾಡುವ ವೈದ್ಯನಿಗೆ ಹತ್ತರಿಂದ 99 ವರ್ಷಗಳ ತನಕ ಜೈಲುಶಿಕ್ಷೆ ಅನುಭವಿಸಬೇಕಾ ಗಬಹುದು. ಗರ್ಭಿಣಿ ತಾಯಿಯ ಜೀವಕ್ಕೆ ಅಪಾಯ ಇದ್ದಲ್ಲಿ ಹಾಗೂ ಗರ್ಭದಲ್ಲಿನ ಶಿಶುವಿಗೆ ಅಪಾಯ ಇದ್ದಲ್ಲಿ ಮಾತ್ರ ಗರ್ಭಪಾತವನ್ನು ಆ ಕಾನೂನು ಮಾನ್ಯ ಮಾಡುತ್ತದೆ.

Advertisement

ಆದರೆ ಮಾನವ ಹಕ್ಕುಗಳ ರಕ್ಷಣೆಗೆ ಹೋರಾಟ ಮಾಡುವ ,ಅಮೆರಿಕಾದ ಎ.ಸಿ .ಎಲ್. ಯು. ಎಂಬ ಸಂಸ್ಥೆಯೊಂದು ಈ ಕಾಯ್ದೆಯನ್ನು ಜಾರಿಗೊಳಿಸುವುದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಲು ಸಿದ್ಧವಾಗಿದೆ. ಅವರ ಪ್ರಕಾರ ಈ ಕಾಯ್ದೆಯು” ಅತ್ಯಾಚಾರದಿಂದ ಸಂತ್ರಸ್ತರಾದ ಮಹಿಳೆಯರನ್ನು ಶಿಕ್ಷಿಸುವಂತಿದೆ. ಮಹಿಳೆಯರಿಗೆ ಅವರ ದೇಹದ ಮೇಲಿರುವ ಹಕ್ಕನ್ನು ಮತ್ತು ನಿಯಂತ್ರಣವನ್ನು ಕಸಿದು ಕೊಳ್ಳುವಂತೆ ಇದೆ. ಅತ್ಯಾಚಾರದ ಆಕಸ್ಮಿಕಕ್ಕೆ ಒಳಗಾದ ಹೆಣ್ಣನ್ನು, ಮನಸ್ಸಿಲ್ಲದಿದ್ದರೂ ಬಲವಂತವಾಗಿ ಹೆರುವಂತೆ ಮಾಡುತ್ತದೆ”. ಅಲ್ಲಿನ ರಾಷ್ಟ್ರೀಯ ಮಹಿಳಾ ಸಂಘಟನೆಯು ಈ ಕಾಯ್ದೆಯನ್ನು ಸಂವಿಧಾನಬಾಹಿರ ಎಂದು ವರ್ಣಿಸಿದೆ. “ಅಷ್ಟೇ ಅಲ್ಲ, ಇದು ಮಹಿಳೆಯರನ್ನು ದೈಹಿಕವಾಗಿ, ಆರ್ಥಿಕವಾಗಿ ಹಾಗೂ ಜೈವಿಕವಾಗಿ ನಿಯಂತ್ರಿಸಿ, ಆಡಳಿತಗಾರರು ಶೋಷಣೆ ಮಾಡುತ್ತಿದ್ದ, ಕತ್ತಲ ದಿನಗಳ ಸ್ಥಿತಿಗೆ ತಳ್ಳುತ್ತದೆ ” ಎಂದು ಅಭಿಪ್ರಾಯ ಪಟ್ಟಿದೆ.

ಆದರೆ ಅಲಬಾಮಾ ಗವರ್ನರ್ ಆಗಿರುವ ವಿಲ್ ಐನ್ಸ್ವರ್ತ್ ಈ ಕಾಯ್ದೆಯನ್ನು ಸ್ವಾಗತಿಸಿ” ಹುಟ್ಟಲಿರುವ ಗರ್ಭಸ್ಥ ಶಿಶು ವಿನ ಹಕ್ಕುಗಳನ್ನು ರಕ್ಷಣೆ ಮಾಡಲಿರುವ ಪ್ರಬಲ ಹೆಜ್ಜೆ” ಎಂದಿದ್ದಾರೆ.

Advertisement

ಭಾರತದಲ್ಲೂ ಕೂಡ ಭ್ರೂಣಹತ್ಯೆಯನ್ನು ತಡೆಗಟ್ಟಲು ಇತ್ತೀಚೆಗೆ ಕಾನೂನನ್ನು ಬಲಗೊಳಿಸಿದ ಸಂದರ್ಭಗಳನ್ನು ನಾವು ನೆನಪಿಸಿಕೊಳ್ಳಬಹುದು.
ಗರ್ಭಿಣಿಯರ ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ದಾಖಲೆಗಳನ್ನು ಭಾರತದಲ್ಲಿ ಕಟ್ಟುನಿಟ್ಟಾಗಿಸಿದೆ. ಆದರೆ ಅತ್ಯಾಚಾರಕ್ಕೆ ಒಳಗಾದ ಸಂದರ್ಭದಲ್ಲಿ ಆ ಮಹಿಳೆಗೆ ಗರ್ಭಪಾತ ಮಾಡುವ ಅವಕಾಶ ಭಾರತದ ಕಾನೂನಿನಲ್ಲಿ ಇದೆ.

ತಪಾಸಣಾ ಕೇಂದ್ರಗಳು ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರಗಳು ದಾಖಲೆಗಳನ್ನು ಸರಿಯಾಗಿ ಇಡದಿರುವುದು ಹೆಣ್ಣು ಭ್ರೂಣ ಹತ್ಯೆಯ ಮೂಲ ಕಾರಣ., ಮತ್ತು ಕಾನೂನಿನ ಅಡಿಯಲ್ಲಿ ಅದೊಂದು ಶಿಕ್ಷಾರ್ಹ ಅಪರಾಧ ಮತ್ತು ಅದನ್ನು ಬರವಣಿಗೆಯಲ್ಲಿನ ಪ್ರಮಾದ ಎಂದು ಹೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. “ಲಿಂಗಗಳ ಅನುಪಾತದಲ್ಲಿನ ವ್ಯತ್ಯಯದಿಂದಾಗಿ ಮಹಿಳೆಯರ ಮೇಲಿನ ದೌರ್ಜನ್ಯ, ಮಹಿಳೆಯರ ಕಳ್ಳಸಾಗಾಟ ಹಾಗೂ ವರದಕ್ಷಿಣೆ ಪ್ರಕರಣಗಳು ಹೆಚ್ಚುತ್ತಿವೆ. ಆದುದರಿಂದ ಗರ್ಭಪಾತ ತಡೆ ಕಾನೂನನ್ನು, ಹೆಣ್ಣು ಮಗುವನ್ನು ರಕ್ಷಿಸುವ ಕಾರ್ಯದ ಭಾಗವಾಗಿ, ಸಶಕ್ತಗೊಳಿಸ ಬೇಕಾದ ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಾದ ಅಗತ್ಯವಿದೆ” ಇಂದು ಭಾರತದ ಸುಪ್ರೀಂ ಕೋರ್ಟ್ ಹೇಳಿದೆ.

Advertisement

ಆದರೆ ಭಾರತದ” ಫೆಡರೇಶನ್ ಆಫ್ ಓಬ್ಸ್ಟೆಟ್ರಿಕ್ಸ್ ಅಂಡ್ ಗೈನೆಕಾಲಜಿಕಲ್ ಸೊಸೈಟಿಯು , ಗರ್ಭಪಾತ ತಡೆ ಕಾನೂನನ್ನು ಸಡಿಲಗೊಳಿಸುವಂತೆ ಮನವಿ ಮಾಡಿದೆ. ಭ್ರೂಣ ಲಿಂಗ ಪತ್ತೆ ಕಾನೂನಿನ ಪ್ರಕಾರ” ಯಾವುದೇ ದಾಖಲೆ ಮಾಡುವಾಗಿನ ಬರವಣಿಗೆಯ ವ್ಯತ್ಯಾಸಗಳು ಅಥವಾ ಪ್ರಮಾದಗಳು, ದಾಖಲೆಗಳನ್ನು ಸರಿಯಾಗಿ ನಿರ್ವಹಿಸದಿರುವುದು, ಆ ಆಸ್ಪತ್ರೆ ಅಥವಾ ವೈದ್ಯರ ತನಿಖೆ, ಬಂಧನ, ಜೈಲು, ದಂಡ ಹಾಗೂ ವೈದ್ಯಕೀಯ ವೃತ್ತಿ ಅನುಮತಿಯನ್ನು ರದ್ದುಗೊಳಿಸುವ ಅವಕಾಶವನ್ನು ನೀಡಿದೆ. ಆದರೆ ವೈದ್ಯರ ಈ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.” ಭ್ರೂಣಹತ್ಯೆಗೆ ಅನುಮತಿ ಕೊಡುವುದಕ್ಕಿಂತ ದೊಡ್ಡದಾದ ಪಾಪ, ಅನೈತಿಕತೆ ಹಾಗೂ ಸಮಾಜ ವಿರೋಧಿ ಕೃತ್ಯ ಇನ್ನೊಂದಿಲ್ಲ. ದಾಖಲೆಗಳನ್ನು ಸರಿಯಾಗಿ ಇಡದಿರುವುದೇ ಅಪರಾಧ” ಎಂದು ಅರುಣ್ ಮಿಶ್ರಾ ಹಾಗೂ ವಿನೀತ್ ಶರಣ್ ಎಂಬ ನ್ಯಾಯಾಧೀಶರುಗಳನ್ನು ಒಳಗೊಂಡ ನ್ಯಾಯಪೀಠವು ಹೇಳಿದೆ.

ಆದರೆ ಪ್ರಸೂತಿ ತಜ್ಞರ ಫೆಡರೇಶನ್ ಇದನ್ನು ಪ್ರತಿನಿಧಿಸುವ ನ್ಯಾಯಮೂರ್ತಿಗಳಾದ ಸಾಲಿ ಸೊರಬ್ಜಿ ಹಾಗೂ ಶ್ಯಾಂ ದಿವಾನ್ ಇವರು , “ಬರವಣಿಗೆಯಲ್ಲಿ ಉಂಟಾಗುವ ಸಣ್ಣ ಸಣ್ಣ ಅಕ್ಷರ ವ್ಯತ್ಯಾಸಗಳು, ದಿನಾಂಕ ದಲ್ಲಿ ಉಂಟಾಗುವ ವ್ಯತ್ಯಾಸಗಳಿಂದ ವೈದ್ಯರು ಕಠಿಣ ಶಿಕ್ಷೆಗೆ ಗುರಿಯಾಗಬೇಕಾದ ಪ್ರಸಂಗಗಳು ಈ ಕಾಯಿದೆಯಿಂದ ಉಂಟಾಗುತ್ತವೆ” ಎಂದಾಗ ನ್ಯಾಯಪೀಠವು” ಜವಾಬ್ದಾರಿಯುತ ನಾದ ವೈದ್ಯನು ಈ ಕಾನೂನಿನ ಅಂಶಗಳನ್ನು ಅರಿಯಬೇಕಾದ ಮತ್ತು ತಪಾಸಣೆ ನಡೆಸುವಾಗ ಅದನ್ನು ಅನುಷ್ಠಾನಗೊಳಿಸಬೇಕಾದದ್ದು ಕರ್ತವ್ಯವಾಗಿದೆ. ಈ ಕಾನೂನನ್ನು ತೆಳ್ಳಗಾಗಿಸುವ ಯಾವುದೇ ಬದಲಾವಣೆಗಳು, ಹೆಣ್ಣುಶಿಶುವಿನ ಜೀವಿಸುವ ಹಕ್ಕನ್ನು ಪ್ರತಿಪಾದಿಸುವ ಸಂವಿಧಾನದ ಆರ್ಟಿಕಲ್ 21 ರ ಉದ್ದೇಶವನ್ನು ವಿಫಲಗೊಳಿಸುತ್ತದೆ. ಕಾನೂನಿನ ಸ್ವರೂಪ ಅರ್ಥಮಾಡಿಕೊಳ್ಳುವ ಮತ್ತು ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡುವ, ತಪಾಸಣೆಗಳ ಉದ್ದೇಶ ಮತ್ತು ಪರಿಣಾಮವನ್ನು ದಾಖಲಿಸುವಂತದ್ದು ತಪಾಸಣಾ ಪೂರ್ವ ಅಗತ್ಯ ಆದ್ಯತೆ. ಇದನ್ನು ಅನುಷ್ಠಾನಗೊಳಿಸಲು ತಯಾರಿ ಇಲ್ಲದವನು ಶ್ರೇಷ್ಠವಾದ ವೈದ್ಯಕೀಯ ವೃತ್ತಿ ನಡೆಸಲು ಅನರ್ಹ” ಎಂದು ನ್ಯಾಯಪೀಠವು ಹೇಳಿದೆ.

Advertisement

 

Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ : ಗೋ ಸಂತತಿಯ ಉಳಿವು ಅಂದರೆ ಧರ್ಮದ ಉಳಿವು
April 25, 2024
11:48 PM
by: The Rural Mirror ಸುದ್ದಿಜಾಲ
ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror