ಬಳ್ಪ ಸಮಗ್ರ ಅಭಿವೃದ್ಧಿಯಾಗಿದೆ ; ಮುಂದೆಯೂ ಅಭಿವೃದ್ಧಿಯಾಗುತ್ತದೆ – ವೆಂಕಟ್ ವಳಲಂಬೆ

September 27, 2019
9:26 PM

ಸುಬ್ರಹ್ಮಣ್ಯ: ಕಳೆದ ನಾಲ್ಕು ವರ್ಷದಲ್ಲಿ ಬಳ್ಪ ಗ್ರಾಮದಲ್ಲಿ ಸುಮಾರು 10 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಕೆಲಸಗಳು ನಡೆದಿದೆ.ಬಳ್ಪ ಗ್ರಾಮದಲ್ಲಿ ಅಭಿವೃದ್ಧಿ ಪರ್ವವು ನಡೆದಿದೆ. ಮುಂದೆಯೂ ಅಭಿವೃದ್ಧಿಯಾಗುತ್ತದೆ. ಹಾಗಿದ್ದರೂ ವಾಸ್ತವ ಸಂಗತಿಯನ್ನು ಮರೆ ಮಾಚಿ  ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ ಎಂದು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಆರೋಪಿಸಿದ್ದಾರೆ.

ಸುಬ್ರಹ್ಮಣ್ಯದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು  ಗಾಂಧಿ ಕಲ್ಪನೆಯ ಗ್ರಾಮ ಸ್ವರಾಜ್ಯಕ್ಕೆ ಕಾಂಗ್ರೆಸ್  ಕೊಡುಗೆಯನ್ನೆ ನೀಡಿಲ್ಲ. ಬಿಜೆಪಿ ಮತ್ತು ಈಗಿನ ಪ್ರಧಾನಿಯ  ನರೇಂದ್ರ ಮೋದಿಯವರು ಗ್ರಾಮ ರಾಜ್ಯದ ಕಲ್ಪನೆಯನ್ನು ಕಾರ್ಯಗತಗೊಳಿಸುವಲ್ಲಿ ಆದರ್ಶ ಗ್ರಾಮ ಪರಿಕಲ್ಪನೆಯನ್ನು ದೇಶದಲ್ಲಿ 2014 ರಲ್ಲಿ ಜಾರಿಗೆ ತಂದರು. ಅದರಂತೆ ಬಳ್ಪ ಗ್ರಾಮವನ್ನು ದತ್ತು ಪಡೆದ ಸಂಸದ ನಳಿನ್‍ ಕುಮಾರ್ ಗ್ರಾಮವನ್ನು ಅಭಿವೃದ್ಧಿಗೊಳಿಸಿದ್ದಾರೆ. ಗ್ರಾಮ ಹಂತಹಂತವಾಗಿ ಅಭಿವೃದ್ಧಿಗೊಳ್ಳುತ್ತಿದೆ ಎಂದರು. ಹಾಗೆಂದು ಇಲ್ಲಿ ಸಂಪೂರ್ಣ ಅಭಿವೃದ್ಧಿ ಆಗಿದೆ ಎಂದು ನಾವು ಹೇಳುವುದಿಲ್ಲ.ಸ್ವಲ್ಪ ಮಟ್ಟಿನ ಲೋಪ ದೋಷಗಳು ಇರಬಹುದು.ಅದನ್ನು ದೊಡ್ಡದು ಮಾಡಿ ಅಪಪ್ರಚಾರ ಮಾಡುವ ಕೆಲಸವಾಗುತ್ತಿದೆ.ಬೆರಳೆಣಿಕೆಯ ಘಟನೆಗಳನ್ನು ವೈಭವೀಕರಿಸಿ ಅಪಪ್ರಚಾರ ನಡೆಯುತ್ತಿದೆ.ಏನಿದ್ದರೂ ಮುಂದೆಯೂ ಬಳ್ಪದಲ್ಲಿ ನಿರಂತರ ಅಭಿವೃದ್ಧಿ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯಲಿದೆ ಎಂದು ವೆಂಕಟ್ ವಳಲಂಬೆ ಹೇಳಿದರು. ಗ್ರಾಮದಲ್ಲಿ ಶಾಲೆಗಳ ಆಧುನೀಕರಣ. ಬೀದಿ ದೀಪ, ಪ್ರಮುಖ ರಸ್ತೆಗಳ ಕಾಂಕ್ರೀಟಿಕರಣ, ಕೃಷಿ ಪತ್ತಿನ ಸಹಕಾರಿ ಸಂಘ, ರಾಷ್ಟ್ರೀಕೃತ ಬ್ಯಾಂಕು. ಅಂಗನವಾಡಿ, ಪ್ರಾಥಮಿಕ ಶಾಲೆಗಳ ಪುನಾಶ್ಚೇತನ, 16 ವಿದ್ಯುತ್ ಪರಿವರ್ತಕ ಅಳವಡಿಕೆ ಹೀಗೆ ಸಾಕಷ್ಟು ಅಭಿವೃದ್ಧಿಗಳು ನಡೆದಿದೆ ಎಂದರು.

ಇತ್ತೀಚೆಗೆ ರಾಮಣ್ಣ ಪೂಜಾರಿ ಅವರು ಅನಾರೋಗ್ಯಕ್ಕೆ ಒಳಗಾಗ ಸಂದರ್ಭ ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಬಂದಿತ್ತು.  ಅಂಬುಲೆನ್ಸ್  ಮನೆಗೆ ತೆರಳುವ ದಾರಿ ಮಧ್ಯೆ ಮಳೆಯಿಂದ ನೀರಿನ ಒಸರು ಇದ್ದ ಕಾರಣ ಮನೆ ತನಕ ರಸ್ತೆ ಇದ್ದರೂ ಅಂಬುಲೆನ್ಸ್ ಗೆ ಹೋಗುವಷ್ಟು ರಸ್ತೆ ಸರಿ ಇರಲಿಲ್ಲ.ಆದರೆ ಈ ರಸ್ತೆಯಲ್ಲಿ ಜೀಪುಗಳು ಹೋಗುತ್ತದೆ.ಆ ಕಾರಣದಿಂದ ರಾಮಣ್ಣ ಪೂಜಾರಿ ಅವರನ್ನು ಸುಮಾರು 200 ಮೀ ದೂರ ಎತ್ತಿಕೊಂಡು ಹೋಗಿ ಅವರನ್ನು ಆಂಬುಲೆನ್ಸ್ ಗೆ ರವಾನಿಸಿದರು.ಇದರ ಛಾಯಾಚಿತ್ರ ತೆಗೆದು ಯಾವುದೇ ಅಭಿವೃದ್ಧಿಯಾಗಿಲ್ಲ ಎಂಬಂತೆ ಬಿಂಬಿಸುವ ಷಡ್ಯಂತ್ರ ನಡೆದಿದೆ. ಇಲ್ಲಿ ಪರ್ಯಾಯ ರಸ್ತೆ ಇದ್ದರೂ ಖಾಸಗಿ ಜಾಗದ ತಕರಾರು ಅರಣ್ಯ ಇಲಾಖೆ ಅಡ್ಡಿ ಇತ್ಯಾದಿ ಸಮಸ್ಯೆ ಇದ್ದ ಕಾರಣಕ್ಕೆ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ. ಹೀಗಾಗಿ ಸ್ವಲ್ಪ ದೂರ ಅವರನ್ನು ಎತ್ತಿಕೊಂಡು ಹೋಗುವ ಸ್ಥಿತಿ ಎದುರಾಯಿತು ಇದಕ್ಕೆ ಕಾಂಗ್ರೆಸ್ ರಾಜಕೀಯ ಲೇಪನ ನೀಡುತ್ತಿದೆ ಎಂದರು.

ರಸ್ತೆ ಅಭಿವೃದ್ಧಿಯಷ್ಟೆ ಆದರ್ಶ ಗ್ರಾಮದ ಕಲ್ಪನೆಯಲ್ಲ. ಗ್ರಾಮದಲ್ಲಿ ಆಗಿರುವ ಅಭಿವೃದ್ಧಿ ವಿಚಾರಗಳನ್ನು ಮುಚ್ಚಿಟ್ಟು ಕೇವಲ ಸಮಸ್ಯೆಯನ್ನೆ ಹೊರಗಿನ ಪ್ರಪಂಚಕ್ಕೆ ತೋರಿಸುವ ಮುನ್ನ ಗ್ರಾಮದ ಈ ಹಿಂದಿನ ವಾಸ್ತವ ಸಂಗತಿಯನ್ನು ಕೂಡ ಹೊರ ಜಗತ್ತಿಗೆ ತೋರಿಸುವ ಕೆಲಸವಾಗಬೇಕು ಎಂದು ತಾ.ಪಂ.ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಳ್ಪ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಮುಡ್ನೂರು,   ಸುಬ್ರಹ್ಮಣ್ಯ ಗ್ರಾ.ಪಂ.ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಬಳ್ಪ ಗ್ರಾ.ಪಂ.ಸದಸ್ಯ ವಿನೋದ್ ಬೊಳ್ಮಲೆ, ಸುಬ್ರಹ್ಮಣ್ಯ ಬಿಜೆಪಿ ಗ್ರಾಮಸಮಿತಿ ಅಧ್ಯಕ್ಷ ದಿನೇಶ್ ಸಂಪ್ಯಾಡಿ, ಪ್ರಮುಖರಾದ ಚಿದಾನಂದ ಕಂದಡ್ಕ, ರಮಾನಂದ ಎಣ್ಣೆಮಜಲು, ಅಚ್ಚುತ್ತ ಗೌಡ ಕುಕ್ಕಪ್ಪನ ಮನೆ ಉಪಸ್ಥಿತರಿದ್ದರು

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ
July 28, 2026
11:25 PM
by: ಮಹೇಶ್ ಪುಚ್ಚಪ್ಪಾಡಿ
ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!
July 28, 2026
10:03 PM
by: ದ ರೂರಲ್ ಮಿರರ್.ಕಾಂ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್
July 28, 2026
12:57 PM
by: ದ ರೂರಲ್ ಮಿರರ್.ಕಾಂ
ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು
July 28, 2026
12:41 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror