ವಳಲಂಬೆ : ವೇದ ಶಿಬಿರ ಸಮಾರೋಪ

Advertisement

ಗುತ್ತಿಗಾರು: ಅನೂಚಾನ ವಿದ್ಯಾ ಪ್ರತಿಷ್ಠಾನ ಹಾಗೂ ಗುತ್ತಿಗಾರು ಹವ್ಯಕ ವಲಯ ಇದರ ಆಶ್ರಯದಲ್ಲಿ  ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ ಗಾಯತ್ರಿ ಯಜ್ಞದ ಹಾಗೂ  ವಸಂತ ವೇದ ಶಿಬಿರದ ಸಮಾರೋಪ ಮತ್ತು ಗುತ್ತಿಗಾರು ಹವ್ಯಕ ವಲಯೋತ್ಸವ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಠಾರದಲ್ಲಿ ನಡೆಯಿತು.

Advertisement

ಬೆಳಗ್ಗೆ ಗಾಯತ್ರಿ ಯಜ್ಞದ ಪೂರ್ಣಾಹುತಿ ನಡೆದು ಮಧ್ಯಾಹ್ನ ನಂತರ  ವೇದ ಶಿಬಿರದ ಸಮಾರೋಪ  ಹಾಗೂ ಗುತ್ತಿಗಾರು ಹವ್ಯಕ ವಲಯೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಸಿ.ಟಿ.ಸತ್ಯನಾರಾಯಣ ಚಣಿಲ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ ಅಧ್ಯಕ್ಷ ಟಿ.ಕೃಷ್ಣ ಭಟ್, ಅತಿಥಿಗಳಾಗಿದ್ದರು. ಗುತ್ತಿಗಾರು ಹವ್ಯಕ ವಲಯ ಅಧ್ಯಕ್ಷ ಸೀತಾರಾಮ ಭಟ್ ಅಡಿಕೆಹಿತ್ತಿಲು ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ  ಅನೂಚಾನ ವಿದ್ಯಾ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶ್ರೀಕೃಷ್ಣ ಭಟ್ ಗುಂಡಿಮಜಲು , ವೇದ ಶಿಬಿರದ ಮುಖ್ಯಗುರುಗಳಾದ ಪಿ.ವಿ.ಮಹಾಬಲೇಶ್ವರ ಭಟ್, ಗುತ್ತಿಗಾರು ಹವ್ಯಕ ವಲಯ ಕಾರ್ಯದರ್ಶಿ ಕೆ.ಸೂರ್ಯನಾರಾಯಣ ಪುಚ್ಚಪ್ಪಾಡಿ, ಅನೂಚಾನ ವಿದ್ಯಾ ಪ್ರತಿಷ್ಠಾನ ಕಾರ್ಯದರ್ಶಿ ಶಿವರಾಮ ಕರುವಜೆ, ಪ್ರಮುಖರಾದ ಸತ್ಯನಾರಾಯಣ ಮೊಗ್ರ, ವೇ.ಮೂ.ಕರುವಜೆ ಕೇಶವ ಜೋಯಿಸರು  ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

ಅನೂಚಾನ ವಿದ್ಯಾ ಪ್ರತಿಷ್ಠಾನ ಕಾರ್ಯದರ್ಶಿ ಶಿವರಾಮ ಕರುವಜೆ ಕಾರ್ಯಕ್ರಮ ನಿರೂಪಿಸಿದರು.

Advertisement

 

Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ವಳಲಂಬೆ : ವೇದ ಶಿಬಿರ ಸಮಾರೋಪ"

Leave a comment

Your email address will not be published.


*