ಸುಳ್ಯದಲ್ಲಿ ನಳಿನ್ ರೋಡ್ ಶೋ

April 19, 2019
4:49 AM

ಸುಳ್ಯ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‍ಕುಮಾರ್ ಕಟೀಲ್ ಸುಳ್ಯದಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿ ಅಬ್ಬರದ ಚುನಾವಣಾ ಪ್ರಚಾರ ಕೈಗೊಂಡರು.
ನಗರದ ಜ್ಯೋತಿ ವೃತ್ತದಿಂದ ಆರಂಭಗೊಂಡ ರೋಡ್ ಶೋದಲ್ಲಿ ಅಭ್ಯರ್ಥಿ ನಳಿನ್‍ಕುಮಾರ್ ಕಟೀಲ್ ಮತ್ತು ಬಿಜೆಪಿ ನಾಯಕರು, ನೂರಾರು ಮಂದಿ ಮಹಿಳೆಯರು, ಕಾರ್ಯಕರ್ತರು ಭಾಗವಹಿಸಿದರು. ನಗರದ ಮುಖ್ಯ ರಸ್ಥೆಯಲ್ಲಿ ಸಾಗಿದ ರೋಡ್ ಶೋ ಶ್ರೀರಾಂ ಪೇಟೆ, ಬಸ್, ನಿಲ್ದಾಣದ ಮೂಲಕ ಗಾಂಧೀನಗರದ ವರೆಗೆ ತೆರಳಿ ಅಲ್ಲಿಂದ ಹಿಂತಿರುಗಿ ಬಂದು ನಗರದ ಬಸ್ ನಿಲ್ದಾಣದ ಬಳಿಯಲ್ಲಿ ಸಮಾವೇಶಗೊಂಡಿತು.
ಅಭ್ಯರ್ಥಿ ನಳಿನ್‍ಕುಮಾರ್ ಕಟೀಲ್, ಶಾಸಕ ಎಸ್.ಅಂಗಾರ ಮತ್ತಿತರ ನಾಯಕರು ಮತ್ತು ಮಹಿಳೆಯರೂ ಸೇರಿದ ಕಾರ್ಯಕರ್ತರು ಕೇಸರಿ ಪೇಟ ಧರಿಸಿ ಗಮನ ಸೆಳೆದರು. ಕೇರಳದ ಚೆಂಡೆ ಮೇಳದ ಅಬ್ಬರಕ್ಕೆ ಮೋದಿ ಮೋದಿ ಘೋಷಣೆ ರೋಡ್ ಶೋಗೆ ಸಾಥ್ ನೀಡಿದವು.
ಶಾಸಕ ಎಸ್.ಅಂಗಾರ, ಮಾಜಿ ಸಚಿವ ಕೃಷ್ಣ ಪಾಲೆಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರು, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ಪುಷ್ಪಾವತಿ ಬಾಳಿಲ, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಹೆಗ್ಡೆ, ಸುಬೋದ್ ಶೆಟ್ಟಿ ಮೇನಾಲ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಶ್ ಕಣೆಮರಡ್ಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಭಾಗೀರಥಿ ಮುರುಳ್ಯ, ವೆಂಕಟ್ ದಂಬೆಕೋಡಿ, ಮತ್ತಿತರರು ಉಪಸ್ಥಿತರಿದ್ದರು. ರೋಡ್ ಶೋ ಆರಂಭಕ್ಕೆ ಮುನ್ನ ನಳಿನ್‍ಕುಮಾರ್ ಕಟೀಲು, ಶಾಸಕ ಎಸ್.ಅಂಗಾರ ಮತ್ತಿತರರು ನಗರದ ಕಲ್ಕುಡ ದೈವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

Team the rural mirror

ಇದನ್ನೂ ಓದಿ

ಚಂದ್ರನ ಬಗ್ಗೆ ಹೆಚ್ಚಿದ ಅಧ್ಯಯನ-ಆಸಕ್ತಿ | ಭೂಮಿಯಿಂದ ದೂರ ಸಾಗುತ್ತಿದ್ದಾನೆ ಚಂದ್ರ…! | ಚಂದ್ರನ ಮೇಲೆ ಗುಹೆಯನ್ನು ಕಂಡುಹಿಡಿದಿದ್ದಾರೆ ವಿಜ್ಞಾನಿಗಳು..! |
July 16, 2024
12:01 PM
by: The Rural Mirror ಸುದ್ದಿಜಾಲ
ರಬ್ಬರ್‌ ವಲಯದಲ್ಲಿ ಆಮದು ಚರ್ಚೆ | ಕಳಪೆ ಟಯರ್‌ ಆಮದು ನಿರ್ಬಂಧಕ್ಕೆ ATMA ಒತ್ತಾಯ | ರಬ್ಬರ್‌ ಆಮದು ಆತಂಕದಲ್ಲಿ ಕೃಷಿಕರು |
July 14, 2024
9:02 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವೈಪರೀತ್ಯ ತಡೆ ಅಗತ್ಯ | ಹವಾಮಾನ ಆಯೋಗ ರಚನೆ ಅಗತ್ಯ | ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಅಭಿಮತ |
July 14, 2024
11:24 AM
by: ದ ರೂರಲ್ ಮಿರರ್.ಕಾಂ
ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳು ಜನರ ದೈನಂದಿನ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದು | ಕೇರಳ ಹೈಕೋರ್ಟ್‌ ಅಭಿಪ್ರಾಯ |
July 2, 2024
11:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror