ಸುಳ್ಯ ನ.ಪಂ.ಚುನಾವಣೆ : 18 ನಾಮಪತ್ರ ಸಲ್ಲಿಕೆ

May 15, 2019
8:17 PM

ಸುಳ್ಯ: ಸುಳ್ಯ ನಗರ ಪಂಚಾಯತ್ ಗೆ ಮೇ.29ರಂದು ನಡೆಯುವ ಚುನಾವಣೆಗೆ ಬುಧವಾರ ಒಟ್ಟು 18 ನಾಮಪತ್ರ ಸಲ್ಲಿಸಲಾಗಿದೆ. 8 ಬಿಜೆಪಿ ಅಭ್ಯರ್ಥಿಗಳು ಏಳು ಮಂದಿ ಕಾಂಗ್ರೆಸ್ ಅಭ್ಯರ್ಥಿಗಳ ಮತ್ತು ಮೂರು ಮಂದಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಲು ಒಂದು ದಿನ ಮಾತ್ರ ಉಳಿದಿದ್ದು ಇದುವರೆಗೆ ಒಟ್ಟು 22 ನಾಮಪತ್ರಗಳು ಸಲ್ಲಿಕೆಯಾಗಿದೆ.

Advertisement
Advertisement
Advertisement

ಎಂಟು ಮಂದಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ:

Advertisement

ಎಂಟು ಮಂದಿ ಬಿಜೆಪಿ ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. 1ನೇ ವಾರ್ಡ್ (ದುಗಲಡ್ಕ)ನಿಂದ ಶಶಿಕಲಾ ಎ., 3ನೇ ವಾರ್ಡ್(ಜಯನಗರ)ನಿಂದ ರೋಹಿತ್ ಕೊಯಿಂಗೋಡಿ, 5ನೇ ವಾರ್ಡ್(ಹೆಗೇಟು)ನಿಂದ ಜಿ.ಬುದ್ಧ ನಾಯ್ಕ, 6ನೇ ವಾಡ್(ಬೀರಮಂಗಲ)ನಿಂದ ಯತೀಶ, 7ನೇ ವಾರ್ಡ್(ಬಿಡಿಒ-ಅಂಬೆಟಡ್ಕ) ವಾರ್ಡ್‍ನಿಂದ ಕಿಶೋರಿ ಶೇಟ್, 11ನೇ ವಾರ್ಡ್ (ಕುರುಂಜಿಗುಡ್ಡೆ)ನಿಂದ ಸುಧಾಕರ ಕೆ, 13ನೇ ವಾರ್ಡ್(ಬೂಡು)ನಿಂದ ಬೂಡು ರಾಧಾಕೃಷ್ಣ ರೈ, 16ನೇ ವಾರ್ಡ್(ಕಾಯರ್ತೋಡಿ)ನಿಂದ ಪ್ರವಿತಾ ಪ್ರಶಾಂತ್ ನಾಮಪತ್ರ ಸಲ್ಲಿಸಿದರು. ಶಾಸಕ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್‍ನ ಏಳು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ:

Advertisement

ಏಳು ಮಂದಿ ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ವಾರ್ಡ್ ಸಂಖ್ಯೆ 1(ದುಗಲಡ್ಕ) ವಾರ್ಡ್ ನಿಂದ ಜಯಂತಿ ಭಾಸ್ಕರ ಪೂಜಾರಿ, 4(ಶಾಂತಿನಗರ)ನೇ ವಾರ್ಡ್ ನಿಂದ ಎಸ್.ಎಂ.ಶಂಕರ, 6ನೇ ವಾರ್ಡ್ (ಬೀರಮಂಗಲ)ನಿಂದ ಡೇವಿಡ್ ಧೀರಾ ಕ್ರಾಸ್ತಾ, 7(ಬಿಡಿಓ-ಅಂಬೆಟಡ್ಕ)ನೇ ವಾರ್ಡ್ ನಿಂದ ಪ್ರೇಮ ಟೀಚರ್, 8(ಕುರುಂಜಿಭಾಗ್)ನೇ ವಾರ್ಡ್‍ನಿಂದ ಸುಜಯಾಕೃಷ್ಣ ಕೆ.ಪಿ., 10ನೇ ವಾರ್ಡ್ (ಕೇರ್ಪಳ)ನಿಂದ ಎಸ್.ಎಂ.ಉಮ್ಮರ್, 19ನೇ ವಾರ್ಡ್(ಮಿಲಿಟ್ರಿ ಗ್ರೌಂಡ್) ನಿಂದ ಜೂಲಿಯಾನ ಕ್ರಾಸ್ತಾ ನಾಮಪತ್ರ ಸಲ್ಲಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯನ್.ಜಯಪ್ರಕಾಶ್ ರೈ, ಎಸ್.ಸಂಶುದ್ದೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್ ಮತ್ತಿತರರು ಉಪಸ್ಥಿತರಿದ್ದರು.

3 ಮಂದಿ ಪಕ್ಷೇತರರು:

Advertisement

15ನೇ ವಾರ್ಡ್(ನಾವೂರು)ನಿಂದ ಅಬ್ದುಲ್ ಮಜೀದ್, 17ನೇ ವಾರ್ಡ್(ಬೋರುಗುಡ್ಡೆ)ನಿಂದ ಮಹಮ್ಮದ್ ಮಸೂದ್, 19ನೇ ವಾರ್ಡ್(ಮಿಲಿಟ್ರಿ ಗ್ರೌಂಡ್)ನಿಂದ ಎ.ಮೋಹಿನಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕುಕ್ಕೆಸುಬ್ರಹ್ಮಣ್ಯ | ಗಣೇಶೋತ್ಸವದ ಸಾಂಸ್ಕೃತಿಕ ಸಂಜೆಯಲ್ಲಿ ವೈಭವ…! |
September 24, 2023
7:59 PM
by: ದ ರೂರಲ್ ಮಿರರ್.ಕಾಂ
ಸ್ನೇಹದಲ್ಲಿ ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನ | ಪಕ್ಷಿಗಳ ಸ್ವರ ಸಾಮ್ರಾಜ್ಯಕ್ಕೆ ಸಸ್ಯರಾಶಿ ಅವಶ್ಯ
September 24, 2023
7:40 PM
by: ದ ರೂರಲ್ ಮಿರರ್.ಕಾಂ
ಪೆರಾಜೆ ಕಲ್ಲಿನ ಗಣಿಗಾರಿಕೆ | ಸ್ಪೋಟಕ ಬಳಸದೇ ಗಣಿಗಾರಿಕೆಗೆ ಸೂಚನೆ | ಪೆರಾಜೆ ಶಾಸ್ತಾವು ದೇವಳದಲ್ಲಿ ಸಾರ್ವಜನಿಕರಿಂದ ಪೂಜೆ |
September 24, 2023
7:33 PM
by: ದ ರೂರಲ್ ಮಿರರ್.ಕಾಂ
ಗಣೇಶ ಉತ್ಸವ ಸಂಭ್ರಮಗಳಲ್ಲಿ ಭಾಗಿಯಾದ ಅರುಣ್‌ ಪುತ್ತಿಲ | 40 ಕ್ಕೂ ಅಧಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವಕರ ನೆಚ್ಚಿನ “ಅರುಣಣ್ಣ” |
September 24, 2023
6:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror