ಹಚ್ಚ ಹಸಿರಿನ ನೆನಪುಗಳು

May 25, 2019
9:00 AM
 ಗುಳಿಗೆನ್ನೆಯ ಗೆಳೆಯ,
 ನನ್ನೊಳಗೆ ನೀನಿದ್ದೆ ಎಂದು ತಿಳಿಯುವಾಗ ಬಲು ತಡವಾಯಿತು.
ಕಾರಿಡಾರಲ್ಲಿ ನಿಂತಾಗ,ನನಗಾಗಿ
ನಗು ಚೆಲ್ಲುತ್ತಿದ್ದಾಗ ,ನಿನ್ನ ಮೊಗದ ಕಾಂತಿ,
ಸಾವಿರ ವ್ಯಾಟ್ ದೀಪದಂತೆ ಬೆಳಗುತ್ತಿತ್ತು.
ಕತ್ತಲೆಯ ಭಯವ ನಿನ್ನೊಂದಿಗೆ ಹಂಚಿಕೊಂಡಾಗ, ನೀ‌ ನಿನ್ನ
ಕೆಲಸವ ಬಿಟ್ಟು ನನಗಾಗಿ ನಿಂತಾಗ
ನಿನ್ನ ಹೃದಯ ಮಂದಿರದಲ್ಲಿ ನನಗಾಗಿ
ಸ್ನೇಹದ ಸಿಂಹಾಸನವನ್ನೇ ಮೀಸಲಿಟ್ಟಿರುವೆ ಎಂದು ಭಾವಿಸಿದ್ದೆ!
ಮರದ ಮೇಲೆ ಮಂಗಗಳನ್ನು ಕಂಡಾಗಲೆಲ್ಲಾ ನಿನ್ನ ತುಂಟಾಟವ ಅವುಗಳಲ್ಲಿ‌ ಹುಡುಕುತ್ತಿದ್ದೆ..
ಸ್ಪೆಷಲ್ ಕ್ಲಾಸಲ್ಲಿ ಇದ್ದಾಗ ನಿನ್ನ
ವೀಡಿಯೋ ಕಾಲ್ ಗಳು ಹೃದಯದ
ಬಡಿತವನ್ನು ಹೆಚ್ಚಿಸುತ್ತಿದ್ದರೂ,ನಿನ್ನ
ಸ್ನೇಹಕ್ಕಾಗಿ ಸದಾ ಮನಸ್ಸು ಹಾತೊರೆಯುತ್ತಿತ್ತು….
ಇಂದಿನ ನಿನ್ನ ಬದಲಾವಣೆ ಗೆ ಕಾರಣ ತಿಳಿದಿಲ್ಲ, ಆದರೂ ಅರಿವಾದದ್ದೂ ಒಂದೇ
“ನೀನೊಬ್ಬ ಒಳ್ಳೆಯ ಹುಡುಗ”
ತಪ್ಪು ನನ್ನಿಂದಲೇ ಆಗಿರಬೇಕು….!
ತುರ್ತಿಗೆ ಇರಲಿ  ಅಂತ
ಅವತ್ತು ನಿನ್ನ ನಂಬರ್ ಪಡಕೊಂಡಾಗ ನಾನು ವಿಶೇಷವೆಂದು ಪರಿಗಣಿಸಲಿಲ್ಲ..
ನಿನಗೆ ನನ್ನ ಸ್ನೇಹ ಬೇಡವೆಂದು ಅರಿವಾದದ್ದು ಮೊನ್ನೆ…
ಮೆಸೇಜ್ ನೋಡಿದಾಗಲೂ ರಿಪ್ಲೈ ಇಲ್ಲದಾಗ!
ಶಾಂತ ಸಾಗರದಲ್ಲಿ ಸುನಾಮಿಯೇ ಎದ್ದಂತೆ..! ನನ್ನ ಹೃದಯ ಚೂರಾಯಿತು..
ಎಷ್ಟೋ ಬಾರಿ ನಿನ್ನ ಬೈಕ್ ನೊಡನೆ ಮಾತನಾಡುತಿದ್ದ ನನ್ನ ಮನ ನನ್ನೇ ನೋಡಿ ನಗುತ್ತಿದೆ…
ಮೊಬೈಲ್ ಪುಟದಲ್ಲೇ ಹೋದ ಆ ಜಾಲಿರೈಡ್,ನಡುರಾತ್ರಿಯ ವಾಕಿಂಗ್ ಚಂದ್ರನ ಬೆಳದಿಂಗಳ ನೆನಪು ಪದೇ ಪದೇ ಘಾಸಿಗೊಳಿಸುತ್ತಿದೆ…
ಗ್ರೌಂಡ್ ,ಪೆಟ್ರೋಲ್ ಪಂಪ್ ಕಾರಿಡಾರ್ ಮರದಮೇಲಿರುವ ಮಂಗ ನನ್ನನ್ನು ಅಣಕಿಸುತ್ತಿದೆ….
I AM UNLUCKY! ನಿನ್ನೊಳಗಿನ ಭಾವಗಳ ಗೌರವಿಸುವೆ …. ಬೇಕಿಲ್ಲ ಬೇರೇನು
ಮುಂದೊಮ್ಮೆ ನಿನ್ನ ಮೊಮ್ಮಕ್ಕಳನ್ನು
ಕೈ‌ ಹಿಡಿದು ನೀ ನಡೆಸುತ್ತಿರುವಾಗ
ಆಕಸ್ಮಿಕವಾಗಿ ನೀನು‌ನಾನು
ಎದುರುಬದುರಾದರೆ, ನನಗಾಗಿ
ಮತ್ತೊಮ್ಮೆ ಪರಿಚಯದ ನಗುವ ಬೀರು
ಸಾವಿರ ವ್ಯಾಟ್ ದೀಪದ ಕಾಂತಿಯ‌ ಕಂಡು ಕಣ್ಣುಮುಚ್ಚಿ ಬಿಡುವೆ…..
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಸಲಹಾ ಸಮಿತಿ | ಸಾಧುಕೋಕಿಲ, ಪುರುಷೋತ್ತಮ ಬಿಳಿಮಲೆ ಸಹಿತ ಹಲವು ಮಂದಿ ಸದಸ್ಯರ ಆಯ್ಕೆ |
September 30, 2023
7:39 PM
by: ದ ರೂರಲ್ ಮಿರರ್.ಕಾಂ
ಉತ್ತಮ ಆರೋಗ್ಯಕ್ಕಾಗಿ ಅಶ್ವಗಂಧ | ಅಶ್ವಗಂಧದ ಉಪಯೋಗಗಳು ಕೇಳಿದ್ರೆ, ನಿಜಕ್ಕೂ ಅಚ್ಚರಿಪಡುವಿರಿ…!
September 15, 2023
2:06 PM
by: The Rural Mirror ಸುದ್ದಿಜಾಲ
ಅಡಿಕೆ ಬೆಲೆ ಮತ್ತು ಬೆಳೆ ಎರಡೂ ಅತಿ‌ ಶೀಘ್ರವಾಗಿ ಬಿದ್ದು ಹೋಗಲಿದೆ….! | “ಇನ್ನು ಅಡಿಕೆ ಗೆ ಭವಿಷ್ಯವಿಲ್ಲ…!”
September 10, 2023
10:38 AM
by: ಪ್ರಬಂಧ ಅಂಬುತೀರ್ಥ
ಒಂದು ಆಹ್ವಾನ….! | ಒಂದು ಟ್ವೀಟ್….!‌ | ವಿದೇಶದಲ್ಲೂ ಸದ್ದು ಮಾಡಿತು ರಿಪಬ್ಲಿಕ್‌ ಆಫ್‌ ಭಾರತ್‌ |
September 6, 2023
3:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror