ಒಂದು ಶಾಲೆ ಅಭಿವೃದ್ಧಿಯಾಗಬೇಕಾದರೆ ಹಲವರ ಪರಿಶ್ರಮವಿರುತ್ತದೆ. ಅಲ್ಲಿ ಸಂಸ್ಥಾಪಕರ ಪಾತ್ರಕ್ಕೆ ಸರಿ ಸಾಟಿಯಾಗಿ ಕೈ ಜೋಡಿಸಲು ಅಧ್ಯಾಪಕರು, ಕಮಿಟಿಯವರು, ಊರವರು , ವಿದ್ಯಾರ್ಥಿಗಳು ಸಮರ್ಥರಾದಾಗ ಯಶಸ್ಸಿನ ಉತ್ತುಂಗವೇರುವುದರಲ್ಲಿ ಸಂಶಯವೇ ಇಲ್ಲ. ಪ್ರತಿಯೊಬ್ಬರ ನಿಸ್ವಾರ್ಥ ದುಡಿಮೆಯ ಅಗತ್ಯ ವಿದ್ಯಾಸಂಸ್ಥೆ ಬಯಸುತ್ತದೆ.
ಈ ವಿಷಯಗಳಲ್ಲಿ ನಮ್ಮ ವಿದ್ಯಾಭೋಧಿನಿ ಶಿಕ್ಷಣ ಸಂಸ್ಥೆಗಳು ಯಶಸ್ವಿ ಮೈಲುಗಲ್ಲನ್ನೇ ಸ್ಥಾಪಿಸಿತ್ತು. ದಿಟ್ಟ ಮುಖ್ಯೋಪಾಧ್ಯಾಯರಾಗಿದ್ದ ಬಿ.ವಿ ಶಗ್ರಿತ್ತಾಯರು ಹಾಗೂ ಅವರ ಹೆಗಲಿಗೆ ಹೆಗಲು ಕೊಟ್ಟು ದುಡಿದ ಅಧ್ಯಾಪಕರ ತಂಡವೇ ವಿದ್ಯಾಭೋಧಿನಿ ಪ್ರೌಢಶಾಲೆಯ ಪ್ರಮುಖ ಆಸ್ತಿ. ಅವರ ಪರಿಶ್ರಮಕ್ಕೆ ಬೆಂಗಾವಲಾಗಿದ್ದ ಎಜುಕೇಶನ್ ಸೊಸೈಟಿ. ಬಾಳಿಲ ಶಿಕ್ಷಣ ಸಂಸ್ಥೆಗಳೊಂದಿಗೆ ಪ್ರಮುಖವಾಗಿ ಕೇಳಿ ಬರುವ ಹೆಸರು ದಿನೇಶ್ಚಂದ್ರ ಕಿಲಂಗೋಡಿ. ಶಿಕ್ಷಕರಾಗಿ ತಮ್ಮ ವಿಶಿಷ್ಟ ಮ್ಯಾನರಿಸಂನಿಂದಾಗಿ ವಿದ್ಯಾರ್ಥಿಗಳೊಂದಿಗೆ ಮಾತ್ರವಲ್ಲದೆ ಮಕ್ಕಳ ಪೋಷಕರೊಂದಿಗೂ ಹೆಸರುವಾಸಿಯಾಗಿದ್ದವರು. ತಮ್ಮ ಅಪೂರ್ವ ಜ್ನಾಪಕ ಶಕ್ತಿಯಿಂದಲೂ ಹೆಸರುವಾಸಿಯಾಗಿದ್ದವರು. ದೂರವಾಣಿ( ಆ ದಿನಗಳಲ್ಲಿ ಮೊಬೈಲ್ ಇರಲಿಲ್ಲ) ಒಮ್ಮೆ ಕೇಳಿಸಿಕೊಂಡ ದೂರವಾಣಿ ಸಂಖ್ಯೆಗಳು ಅವರಿಗೆ ಬಾಯಿಪಾಠ. ಎಷ್ಟು ವರುಷಗಳು ಕಳೆದರು ಮುಖ ನೋಡಿದ ಕೂಡಲೇ ದೂರವಾಣಿ ಸಂಖ್ಯೆ ಹೇಳಿ ಬಿಡುತ್ತಿದ್ದರು. ಯಾವುದೇ ನಂಬರ್ ಬೇಕಿದ್ದರೆ ಆ ಮಾಸ್ಟರ್ ಹತ್ತಿರ ವಿಚಾರಿಸಿದಿರಾ ಎಂಬಷ್ಟರ ಮಟ್ಟಿಗೆ.
ಅವರು ಯಾವ ವಿದ್ಯಾರ್ಥಿಗಳನ್ನೂ ಕಡೆಗಣಿಸಿದ ಉದಾಹರಣೆಗಳಿಲ್ಲ. ಎಲ್ಲರನ್ನು ಸಮಾನವಾಗಿ ಗುರುತಿಸುತ್ತಿದ್ದವರು. ಎಲ್ಲಿ ಅವರ ಅಗತ್ಯವಿದೆಯೋ ಅಲ್ಲಿ ಸಕ್ರೀಯರಾಗಿರುತ್ತಿದ್ದರು. ಹಿರಿಯ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಶಾಲೆ ಹಾಗೂ ವಿದ್ಯಾರ್ಥಿಗಳ ನಡುವೆ ಕೊಂಡಿಯಾಗಿದ್ದವರು. ವಿಜ್ಞಾನ, ಗಣಿತ ಶಿಕ್ಷಕರಾಗಿ ಮಕ್ಕಳ ನೆಚ್ಚಿನವರಾಗಿದ್ದರು. ಅದರಲ್ಲೂ ಶೈಕ್ಷಣಿಕ ಪ್ರವಾಸಗಳ ಸಂಘಟನೆಯಲ್ಲಿ ಗುರುತರವಾದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು. ಸೀಮಿತ ಖರ್ಚುವೆಚ್ಚದಲ್ಲಿ ಪ್ರವಾಸಗಳನ್ನು ಆಯೋಜಿಸುತ್ತಿದ್ದರು. ದೂರ ದೂರದ ಪ್ರವಾಸಗಳು ಕೈಗೆಟುಕುವ ದರದಲ್ಲಿ ಹಳ್ಳಿ ಮಕ್ಕಳಿಗೆ ಲಭ್ಯವಾಗುತ್ತಿದ್ದುದರ ಹಿಂದೆ ಆ ಮಾಸ್ಟರ್ ರ ಪರಿಶ್ರಮವಿದೆ.
ಕೆಲವು ವರುಷಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೂ ಅದೇ ಉತ್ಸಾಹದಿಂದ ಸಕ್ರೀಯರಾಗಿ ಶಾಲಾಕೆಲಸಗಳಲ್ಲಿ ತೊಡಗಿರುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ ಬಂದ ಸುದ್ದಿ ಆ ಮಾಸ್ಟರ್ ಇನ್ನಿಲ್ಲ. ನಂಬಲು ಕಷ್ಟವಾಯಿತು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ಕರುಣಿಸಲಿ.
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಇತ್ತೀಚಿನ ದಿನಗಳಲ್ಲಿ, ಜನರು ಮೊಬೈಲ್ ಫೋನ್ಗಳನ್ನು(Mobile Phone) ಹಿಡಿದಿಟ್ಟುಕೊಳ್ಳುವ ಬದಲು ಇಯರ್ಫೋನ್(Ear Phone)…
ಇದೋ, ಬಂದಿದೆ ನೋಡಿ 2024ರ ಹಲಸು ಮೇಳ(Jackfruit Mela) ಪುತ್ತೂರು(Puttur). ಪ್ರತಿ ವರ್ಷದಂತೆ…
ಒಂದು ಸಸ್ಯ(Plant) ಪರಿಪೂರ್ಣವಾಗಿ ಮತ್ತು ಆರೋಗ್ಯವಾಗಿ(Healthy) ಬೆಳೆಯಬೇಕಾದರೆ ಸುಮಾರು 108 ಪೋಷಕಾಂಶಗಳ(Nutrition) ಅವಶ್ಯಕತೆ…
ರಾಜ್ಯದ ಕೆಲ ಭಾಗಗಳಲ್ಲಿ ಚೆನ್ನಾಗಿ ಮಳೆಯಾಗುತ್ತಿದೆ(Heavy Rain). ನೀರಿಲ್ಲದೆ ಬೇಸತ್ತಿದ್ದ ಜನ ಜಾನುವಾರುಗಳು…
ಹವಾಮಾನ ವೈಪರೀತ್ಯ, ತಾಪಮಾನ ಏರಿಕೆ ಜಗತ್ತಿನಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಆಹಾರ ಉತ್ಪಾದನೆ ಮೇಲೂ…
ಮೇ 22ರ ನಂತರ ಪ್ರಭಲ ಮುಂಗಾರು ಮಾರುತಗಳು ಅಂಡಮಾನ್ ಕಡೆ ಚಲಿಸುವುದರಿಂದ ಬಂಗಾಳಕೊಲ್ಲಿಯಲ್ಲಿ…