ಅಜ್ಜಾವರ: ಧನಲಕ್ಷ್ಮಿ ಮಹಿಳಾ ಮಂಡಲ ಅಜ್ಜಾವರ ಮತ್ತು ಸ್ತ್ರೀಶಕ್ತಿ ಗುಂಪು ಮತ್ತು ಅಂಗನವಾಡಿ ಕೇಂದ್ರ ಅಜ್ಜಾವರ ಇವರ ಜಂಟಿ ಆಶ್ರಯದಲ್ಲಿ”ಪೌಷ್ಟಿಕ ಆಹಾರ ಮಹತ್ವ”ದ ಬಗ್ಗೆ ಕಾರ್ಯಕ್ರಮ ವೇದಪಾಠ ಶಾಲೆ ಅಜ್ಜಾವರದಲ್ಲಿ ನಡೆಯಿತು.
ಸುಳ್ಯ ಆರೋಗ್ಯ ಶಿಕ್ಷಣ ಅಧಿಕಾರಿ ಪ್ರಮೀಳ.ಟಿ ಮಾಹಿತಿ ನೀಡಿದರು.ಕಾರ್ಯಕ್ರಮ ಉದ್ಘಾಟನೆಯನ್ನು ಧನಲಕ್ಷ್ಮೀ ಮಹಿಳಾ ಮಂಡಲದ ಸ್ಥಾಪಕಧ್ಯಕ್ಷರಾದ ಜಯಂತಿ ಜನಾರ್ದನ ನೆರವೇರಿಸಿದರು. ಸಭಾಧ್ಯಕ್ಷೆ ಶ್ವೇತಾ ಪುರುಷೋತ್ತಮ ಶಿರಾಜೆ ವಹಿಸಿದ್ದರು. ಕಿರಿಯ ಆರೋಗ್ಯ ಸಹಾಯಕಿ ಜಯಶ್ರೀ, ಅಂಗನವಾಡಿ ಕಾರ್ಯಕರ್ತೆ ಸವಿತಾ ಬಾಲಕೃಷ್ಣ,ಬಾಲವಿಕಾಸ ಸಮಿತಿಯ ತಿರುಮಲೇಶ್ವರಿ, ವನಶ್ರೀ “ಬಿ” ಅಧ್ಯಕ್ಷೆ ಜಲಜಾಕ್ಷಿ, ಜನನಿ ಸ್ತ್ರೀಶಕ್ತಿ ಕಾರ್ಯದರ್ಶಿ ಪೂರ್ಣಿಮಾ ಶಿವಾನಂದ ವೇದಿಕೆಯಲ್ಲಿದ್ದರು.ಅಂಗನವಾಡಿ ಮಕ್ಕಳಿಗೆ ಮಹಿಳಾ ಮಂಡಲ ಕಡೆಯಿಂದ ನೆನಪಿನ ಕಾಣಿಕೆ ಕೊಡಲಾಯಿತು.
ಕವಿತಾ ಪುರುಷೋತ್ತಮ ಸ್ವಾಗತಿಸಿ ವಿಶಾಲ ಸೀತಾರಾಮ ವಂದಿಸಿದರು. ಹರಿಣಕ್ಷಿ ರೈ ಬೇಲ್ಯ ಪ್ರಾರ್ಥಿಸಿದರು. ಶಶ್ಮಿ ಭಟ್ ಕಾರ್ಯಕ್ರಮ ನಿರೂಪಿಸಿದರು.
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…
ಮುಂಗಾರು ದುರ್ಬಲಗೊಂಡಿದ್ದರೂ ಸ್ಥಳೀಯ ಮೋಡಗಳ ಬೆಳವಣಿಗೆಯಿಂದ ಮಲೆನಾಡು ಹಾಗೂ ಒಳನಾಡಿನಲ್ಲಿ ಗುಡುಗು ಸಹಿತ…
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…